ಕರಾವಳಿ

ಬಸ್ ಹಾಗೂ ಬೈಕ್ ಅಪಘಾತ: ಯುವಕ ದಾರುಣ ಸಾವು, ಯುವತಿ ಗಂಭೀರ

Pinterest LinkedIn Tumblr

ಕುಂದಾಪುರ: ತಿರುಪತಿಗೆ ತೆರಳುತ್ತಿದ್ದ ಬಸ್ ​ಹಾಗೂ ಬೈಕ್​ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸನಗರ ತಾಊಕಿನ ನಗರ ಬಳಿಯ ಯಡುರು ಎಂಬಲ್ಲಿ ನಡೆದಿದೆ.

ಬೈಕ್​ನಲ್ಲಿ ತೆರಳುತ್ತಿದ್ದ ಕುಂದಾಪುರದ ಇಡೂರು ಮೂಲದ ಯುವಕ ಪ್ರಸನ್ನ ಶೆಟ್ಟಿ (26) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಸವಾರೆಯಾಗಿದ್ದ ಅರ್ಪಿತಾ ಶೆಟ್ಟಿ (23) ಗಾಯಗೊಂಡಿದ್ದಾರೆ.

ಅರ್ಪಿತಾ ಸಿದ್ದಾಪುರದ ಆಜ್ರಿ ಗ್ರಾಮದ ಯುವತಿಯಾಗಿದ್ದಾರೆ. ಇವರಿಬ್ಬರು ಪರಿಚಿತರಾಗಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪ್ರಸನ್ನ, ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಊರಿಗೆ ಆಗಮಿಸಿದ್ದರು. ಆದರೆ ಇದೀಗ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ವಾರಗಳ ಹಿಂದೆ ತಾಯಿಯ ಅನಾರೋಗ್ಯದಿಂದ ಬೇಸತ್ತು ಪ್ರಸನ್ನ ಸೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಅರ್ಪಿತಾರನ್ನು ಮಣಿಪಾಲ ​ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.