ಕರಾವಳಿ

ಟೇಬಲ್ ಮೇಲೆ ಮೊಬೈಲ್, ರಾಜಿನಾಮೆ ಪತ್ರವಿಟ್ಟು ಮನೆಗೆ ತೆರಳಿದ ಹೆಬ್ರಿ ಎಸ್ಐ!

Pinterest LinkedIn Tumblr

ಉಡುಪಿ: ಜಾಗಕ್ಕೆ ಸಂಬಂಧಿಸಿದ ತಕರಾರು ವಿಚಾರದಲ್ಲಿ ಮೇಲಾಧಿಕಾರಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಹಾಬಲ ಶೆಟ್ಟಿ ರಾಜಿನಾಮೆ ಪತ್ರವಿಟ್ಟು ಮನೆಗೆ ತೆರಳಿದ ಘಟನೆ ನಡೆದಿದೆ.

ಶುಕ್ರವಾರದಂದು ಟೇಬಲ್ ಮೇಲೆ ಇಲಾಖೆಯ ಮೊಬೈಲ್ ಹಾಗೂ ರಾಜಿನಾಮೆ ಪತ್ರವಿಟ್ಟು ಮಹಾಬಲ ಶೆಟ್ಟಿ ಕರ್ತವ್ಯಕ್ಕೆ ಗುಡ್ ಬೈ ಹೇಳಿದ್ದಾರೆ. ಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳು ಅವರ ಮನವೊಲಿಕೆಗೆ ಮುಂದಾಗಿದ್ದು ಆವರ ನಿವಾಸಕ್ಕೆ ತೆರಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಲು ಪ್ರಯತ್ನಿಸಿದ್ದು ಈ ಬಗ್ಗೆ ಮಹಾಬಲ ಶೆಟ್ಟಿಯವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ನೇರ ನಿಷ್ಟುರವಾದಿ ಮಹಬಲ ಶೆಟ್ಟಿಯವರು ಈ ಹಿಂದೆ ಕುಂದಾಪುರ, ಅಮಾಸೆಬೈಲು ಮೊದಲಾದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ಹೆಬ್ರಿ ಠಾಣೆ ಎಸ್ಐ ಆಗಿ ಅಧಿಕಾರ ಸ್ವೀಕರಿಸಿದ್ದರು.

Comments are closed.