ಕರಾವಳಿ

ಕುಂದಾಪುರ: ಸಿಡಿಲು ಬಡಿದು ತಾಯಿ, ಮಗಳು ಅಸ್ವಸ್ಥ; ಮನೆಗೆ ಅಪಾರ ಹಾನಿ

Pinterest LinkedIn Tumblr

ಕುಂದಾಪುರ: ಕರಾವಳಿಯಲ್ಲಿ ಮಳೆ ಬಿರುಸುಗೊಂಡಿದ್ದು, ಬುಧವಾರ ಸಂಜೆ ಭಾರೀ ಪ್ರಮಾಣದ ಸಿಡಿಲಪ್ಪಳಿಸಿದ್ದರಿಂದ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಹೊಳ್ಮೆಗೆ ಮನೆಯೊಂದರಲ್ಲಿದ್ದ ತಾಯಿ, ಮಗಳು ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ಹಕ್ಲಾಡಿ ಗ್ರಾಮ ಪಂಚಾಯತ್ ಸಿಬ್ಬಂದಿ ಗುರುರಾಜ್ ಪೂಜಾರಿಯವರ ಪತ್ನಿ ಕಮಲ ಹಾಗೂ ಮಗಳು ಆಶಾ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸ್ಸಾಗಿದ್ದಾರೆ.

ಬುಧವಾರ ಸಂಜೆ ಇವರಿಬ್ಬರೂ ಮನೆಯೊಳಗಿದ್ದ ಸಂದರ್ಭದಲ್ಲಿ ಮನೆಗೆ ಸಿಡಿಲು ಬಡಿದಿತ್ತು. ಪರಿಣಾಮ ಮನೆಯಲ್ಲಿರುವ ವಿದ್ಯುತ್ ಪರಿಕರಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗೋಡೆಗಳು ಬಿರುಕು ಬಿಟ್ಟಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

Comments are closed.