ಕರಾವಳಿ

ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಿ.ಬಾಳಿಗರ ತಂದೆ ವಿಧಿವಶ  

Pinterest LinkedIn Tumblr

ಮಂಗಳೂರು, ಜೂನ್.22: ಎರಡು ವರ್ಷಗಳ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗರ ತಂದೆ ರಾಮಚಂದ್ರ ಬಾಳಿಗ (87) ಗುರುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ರಾಮಚಂದ್ರ ಬಾಳಿಗ ಅವರು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಸುಮಾರು 8 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.ಮೃತರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಬಾಳಿಗಾ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ನೆರವೇರಿತು. ಇದಕ್ಕೂ ಮುಂಚೆ ರಾಮಚಂದ್ರ ಬಾಳಿಗ ಅವರ ಪಿವಿಎಸ್‌ನ ಕಲಾಕುಂಜದ ಬಳಿಯ ನಿವಾಸದಲ್ಲಿ ಬಾಳಿಗ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ವಿನಾಯಕ ಪಾಂಡುರಂಗ ಬಾಳಿಗ                                           ಅವರ ತಾಯಿ ಶ್ರೀಮತಿ ಲಕ್ಷ್ಮೀ ಬಾಳಿಗ

ರಾಮಚಂದ್ರ ಬಾಳಿಗರ ಪುತ್ರ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರನ್ನು 2016ರ ಮಾರ್ಚ್ 21ರಂದು ಬೆಳಿಗ್ಗೆ ಅವರ ಮನೆ ಮುಂದ್ಯೇ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಮಗನ ಸಾವಿನ ನೋವಿನಲ್ಲಿ ದಿನ ಕಳೆಯುತ್ತಿದ್ದ ವಿನಾಯಕ ಬಾಳಿಗರ ತಾಯಿ ಕಳೆದ ವರ್ಷ ಮೃತಪಟ್ಟಿದ್ದರು. ಇದೀಗ ರಾಮಚಂದ್ರ ಅವರ ನಿಧಾನದಿಂದ ಬಾಳಿಗ ಕುಟುಂಬ ತಬ್ಬಲಿಯಾಗಿದೆ.

Comments are closed.