ಕರಾವಳಿ

ಮಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಪ್ರಚಾರ ಪ್ರಾರಂಭ : ಬೃಹತ್ ಪಾದಯಾತ್ರೆ ಮೂಲಕ ಸೋಮವಾರ ನಾಮಪತ್ರ ಸಲ್ಲಿಕೆ

Pinterest LinkedIn Tumblr

ಮಂಗಳೂರು, ಎಪ್ರಿಲ್.21 : ಭಾರತೀಯ ಜನತಾ ಪಕ್ಷ ಮಂಗಳೂರು ದಕ್ಷಿಣ ದ ಅಭ್ಯರ್ಥಿ ಪ್ರಭಾವಿ ಯುವ ನಾಯಕ ಡಿ . ವೇದವ್ಯಾಸ್ ಕಾಮತ ಕಾಮತ್ ರವರು ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆಯ ಬಳಿಕ ಶುಕ್ರವಾರ ಶ್ರೀ ಕಾಶೀ ಮಠ ಸಂಸ್ಥಾನ ದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಹಾಗೂ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಯವರ ಆಶೀರ್ವಾದ ಪಡಕೊಂಡರು.

ಬಳಿಕ ಪ್ರತಿಷ್ಠಿತ ಶ್ರೀ ಮಂಗಳಾ ದೇವಿ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಭಗವತಿ ಕ್ಷೇತ್ರಗಳಿಗೆ ಭೇಟಿ ಇತ್ತು ಪ್ರಸಾದ ಸ್ವೀಕರಿಸಿದರು . ಈ ಸಂಧರ್ಭದಲ್ಲಿ ಪಕ್ಷದ ಮಾಜಿ ಶಾಸಕರಾದ ಏನ್ . ಯೋಗೀಶ್ ಭಟ್ . ಪದಾಧಿಕಾರಿಗಳಾದ ರವಿಶಂಕರ್ ಮಿಜಾರ, ನಿತಿನ್ ಕುಮಾರ್ , ಸಂಜಯ ಪ್ರಭು , ಸುಧೀರ್ ಶೆಟ್ಟಿ ಕಣ್ಣೂರ್, ಸುಧಾಕರ್ ಜೋಶಿ, ವಸಂತ್ ಪೂಜಾರಿ ಉಪಸ್ಥಿತರಿದ್ದರು.

ಬೃಹತ್ ಪಾದಯಾತ್ರೆಯ ಮೂಲಕ ಸೋಮವಾರ ನಾಮಪತ್ರ ಸಲ್ಲಿಕೆ

ತಾ 23/4/2018 ನೇ ಸೋಮವಾರ ಬೆಳಿಗ್ಗೆ 11 ಕ್ಕೆ ಸರಿಯಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ವೇದವ್ಯಾಸ್ ಕಾಮತ್ ರವರ ನಾಮಪತ್ರ ಸಲ್ಲಿಸುವ ಸಲುವಾಗಿ ಪಾದಯಾತ್ರೆಯ ಮೂಲಕ ಮಂಗಳೂರು ಮಹಾನಗರ ಪಾಲಿಕೆ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿರುವರು.

ಈ ಬೃಹತ್ ಪಾದಯಾತ್ರೆಯಲ್ಲಿ ಮಂಗಳೂರು ಮಹಾನಗರದ ಬಿಜೆಪಿಯ ಎಲ್ಲಾ ನಾಯಕರು, ಮನಪಾ ಸದಸ್ಯರು, ವಿವಿಧ ಮೋರ್ಚಾಗಳ ಪಧಾಧಿಕಾರಿಗಳು, ಕಾರ್ಯಕರ್ತರು, ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು, ಭಾರತೀಯ ಜನತಾ ಪಕ್ಷದ ಹಿತೈಷಿಗಳು ಹಾಗೂ ಮತದಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚಿತ್ರ :ಮಂಜು ನಿರೇಶ್ವಾಲ್ಯ

Comments are closed.