ಕರಾವಳಿ

ಈದು ಎನ್‌ಕೌಂಟರ್ ಪ್ರಕರಣ: ದೇವೇಂದ್ರ ಖುಲಾಸೆ

Pinterest LinkedIn Tumblr

ಉಡುಪಿ: ನಕ್ಸಲ್ ಆರೋಪ ಹೊತ್ತಿದ್ದ ದೇವೇಂದ್ರ ಯಾನೇ ವಿಷ್ಣು ಖುಲಾಸೆಗೊಳಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಈದು ಎನ್ ಕೌಂಟರ್ ಪ್ರಕರಣದಲ್ಲಿ ದೇವೇಂದ್ರ ಐದನೇ ಆರೋಪಿಯಾಗಿದ್ದ. 2003 ನವೆಂಬರ್ 17 ರಂದು ಕಾರ್ಕಳದ ಈದು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ಇದಾಗಿದ್ದು ಕರ್ನಾಟಕದ ಮೊದಲ ನಕ್ಸಲ್ ಎನ್ ಕೌಂಟರ್ ಆಗಿದೆ. ಈ ಎನ್-ಕೌಂಟರ್ ನಲ್ಲಿ ನಕ್ಸಲರೆಂಬ ಕಾರಣಕ್ಕೆ ಪಾರ್ವತಿ ಮತ್ತು ಹಾಜೀಮಾ ಹತ್ಯೆಯಾಗಿದ್ದರು. ಘಟನೆ ವೇಳೆ ದೇವೇಂದ್ರ ತಲೆಮರೆಸಿಕೊಂಡಿದ್ದ. ಬಳಿಕ 2009 ರಲ್ಲಿ ಬೆಂಗಳೂರಿನಲ್ಲಿ ಆಂದ್ರ ಪೊಲೀಸರು ಬಂಧಿಸಿದ್ದರು. ಒಟ್ಟು 24 ಪ್ರಕರಣ ಗಳ ಆರೋಪಿಯಾಗಿದ್ದ ದೇವೇಂದ್ರ ಯಾನೇ ವಿಷ್ಣು ಶಿವಮೊಗ್ಗ ಮೂಲದವರು. ಈ ಮೂಲಕ 24 ಪ್ರಕರಣ ಗಳಿಂದಲೂ‌ ಖುಲಾಸೆಗೊಂಡಿದ್ದು ಕಳೆದ ಎಂಟು ತಿಂಗಳಿಂದ ಜಾಮೀನಿನಲ್ಲಿದ್ದರು.

Comments are closed.