ಕರಾವಳಿ

ಸಿಎಂ ಸಿದ್ದರಾಮಯ್ಯ ಕೂಡ ಭಯೋತ್ಪಾದಕ: ಸಿ.ಟಿ. ರವಿ ಹೀಗೆ ಆರೋಪಿಸಿದ್ದು ಯಾಕೆ ಗೊತ್ತಾ?

Pinterest LinkedIn Tumblr

ಚಿಕ್ಕಮಗಳೂರು: ಭಯೋತ್ಪಾದನೆ ರೀತಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ. ಭಯೋತ್ಪಾದನೆ ಅರ್ಥ ತಿಳಿಯದ ಸಿಎಂ ಯಾವ ಡಿಕ್ಷನರಿ ಓದಿದ್ದಾರೆ ಎಂಬುದು ನಿಜಕ್ಕೂ ತಿಳಿಯುತ್ತಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳುರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಭಯ ಸೃಷ್ಟಿಸುವುದೇ ಭಯೋತ್ಪಾನೆ ಅಂತ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಭಯೋತ್ಪಾದನೆ ರೀತಿಯಲ್ಲಿ ಮಾತಾನಾಡುವುದೇ ಭಯೋತ್ಪಾದನೆ ಅಂದ್ರೆ ಸಿದ್ದರಾಮಯ್ಯ ಕೂಡ ಒಬ್ಬ ಭಯೋತ್ಪಾದಕರಾಗುತ್ತಾರೆ. ಯಾಕಂದ್ರೆ ಅವರ ಮಾತಿನಲ್ಲಿ ಬೆದರಿಕೆ ಇದೆ. ದಾಸ್ಯ ಇದೆ. ದುರಹಾಂಕಾರ ಇದೆ. ನೀವೆಂದು ದಾಸ್ಯದ, ದುರಹಾಂಕಾರ, ಬೆದರಿಕೆ ಹಾಕುವ ಮಾತಾನಾಡಿಲ್ಲ ಅಂದರು.

ಸತ್ಯದ ಪರ ಹೋರಾಟವನ್ನು ಭಯೋತ್ಪಾದನೆ ಅನ್ನುವುದು ನಿಜಕ್ಕೂ ದುರಂತ. ಸತ್ಯದ ಪರ ಹೋರಾಟ ಮಾಡೋದನ್ನು ಭಯೋತ್ಪಾದನೆ ಅಂತಾ ಕರೆಯೋದಕ್ಕೆ ಯಾವ ಡಿಕ್ಷನರಿ ಓದಿಕೊಂಡಿದ್ದಾರೆ ನನಗೆ ಗೊತ್ತಿಲ್ಲ. ಭಯೋತ್ಪಾದನೆ ಅನ್ನೋದಕ್ಕೆ ಡಿಕ್ಷನರಿ ಬೇರೆ ಅರ್ಥ ಅದನ್ನ ರಾಮಲಿಂಗಾರೆಡ್ಡಿ ಹಾಗೂ ಸಂಧಿ ಸಮಾಸ ಬಗ್ಗೆ ಮಾತಾಡೋ ಸಿಎಂ ಕೂಡ ಓದಿಕೊಳ್ಳಬೇಕಿದೆ ಎಂದರು.

Comments are closed.