ಕರಾವಳಿ

ಎಸ್.ಪಿ ಕಚೇರಿ ಪಕ್ಕವೇ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜನ ಕಟೌಟ್!

Pinterest LinkedIn Tumblr

ಉಡುಪಿ: ಅಂಡರ್ ವರ್ಲ್ಡ್ ಡಾನ್ ಉಡುಪಿ ಮೂಲದ ಬನ್ನಂಜೆ ರಾಜನ ಹುಟ್ಟುಹಬ್ಬ ಇಂದಾಗಿರುವ ಹಿನ್ನೆಲೆಯಲ್ಲಿ ಬನ್ನಂಜೆ ರಾಜನ ಅಭಿಮಾನಿ ಬಳಗ ಉಡುಪಿಯಲ್ಲಿ ಸಮಾಜ ಸೇವಕ, ಬಡವರ ರಕ್ಷಕ ಹೆಸರಿನಲ್ಲಿ ‘ಅಣ್ಣ’ನ ಕಟೌಟ್ ಹಾಕಿದೆ!. ಅದೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದಲ್ಲೇ ಕಟೌಟ್ ರಾರಾಜಿಸುತ್ತಿದ್ದು ಜನರನ್ನು ಗೊಂದಲಕ್ಕೀಡು ಮಾಡಿದೆ.

ನಟೋರಿಯಸ್ ಭೂಗತ ಪಾತಕಿಯ ಕಟೌಟ್ ಉಡುಪಿ ಎಸ್‍ಪಿ ಕಚೇರಿಗೆ ಹೋಗುವ ದಾರಿಯಲ್ಲೇ ಇದ್ದು ಬ್ಯಾನರಿನಲ್ಲಿ ‘ಬಡವರ ರಕ್ಷಕ, ಸಮಾಜ ಸೇವಕ, ಮೆಚ್ಚಿನ ನಾಯಕ ಅಣ್ಣ’ ಎಂದು ಸಂಬೋಧಿಸಿ ಬರೆಯಲಾಗಿದೆ. ಅಲ್ಲದೇ ಬನ್ನಂಜೆ ರಾಜ ಅಭಿಮಾನಿಗಳ ಬಳಗ ರಿಜಿಸ್ಟರ್ ಕೂಡಾ ಎಂದು ಬರೆಯಲಾಗಿದೆ.ಇವತ್ತು ಬೆಳಗ್ಗೆ ಬನ್ನಂಜೆ ರಾಜನ ಅಭಿಮಾನಿಗಳು ಸಂಜಯಗಾಂಧಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಕಂಬಳಿ ವಿತರಿಸುತ್ತಾರೆ ಎನ್ನುವ ಬರಹವು ಆ ಬ್ಯಾನರಿನಲ್ಲಿದೆ.

ನಿಜಕ್ಕೂ ಈ ಬ್ಯಾನರ್ ಬನ್ನಂಜೆ ಅಭಿಮಾನಿಗಳೇ ಹಾಕಿದ್ದರೋ ಅಥವಾ ಯಾರೋ ಸುಮ್ಮನೆ ಗೊಂದಲ ಉಂಟು ಮಾಡಲು ಇಂತಹ ಕ್ರತ್ಯ ಮಾಡಿದ್ದಾರೋ ಎಂಬುದು ಗೊತ್ತಿಲ್ಲ.!

Comments are closed.