ಆರೋಗ್ಯ

ಧಾನ್ಯ ಹಾಗೂ ಕಾಳನ್ನು ಸರಿಯಾದ ವಿಧಾನ ಬಳಸಿ ಸೇವಿಸಿದರೆ ಅತ್ತುತ್ಯಮ.

Pinterest LinkedIn Tumblr

ಸಸ್ಯಹಾರಿಗಳ ಆಹಾರ ಪದ್ಧತಿಯಲ್ಲಿ ದ್ವಿದಳ ಧಾನ್ಯ ಮತ್ತು ಕಾಳುಗಳಿಗೆ ಅಗ್ರಸ್ಥಾನವಿದೆ. ಇದಕ್ಕೆ ಅದರಲ್ಲಿ ಧಾರಳವಾಗಿ ಕ್ರೊಢೀಕರಣವಾಗಿರುವ ಪ್ರೊಟೀನ್‍ ಮತ್ತು ಪೋಷಕಾಂಶಗಳೇ ಕಾರಣ. ದ್ವಿದಳ ಧಾನ್ಯಗಳನ್ನು ಬೇಯಿಸಲು ಅತೀ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಹಲವು ಮಂದಿ ಇದರ ಸೇವನೆಯನ್ನು ವರ್ಜಿಸಿದ್ದಾರೆ ಎಂಬುದು ವಿಷಾದನೀಯ.

ಆದರೆ ಪೋಷಕಾಂಶಭರಿತ ಧಾನ್ಯವನ್ನು ವೈಜ್ಞಾನಿಕವಾಗಿ ಬಳಸುವುದರಿಂದ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಕಾಳನ್ನು ನೆನೆಸುವುದರಿಂದ ಅಲ್ಪಾವಧಿಯಲ್ಲಿ ಕಾಳನ್ನು ಸುಲಭವಾಗಿ ಬೇಯಿಸಬಹುದು. ನೆನೆಸುವುದರಿಂದ ಸಮಯದ ಉಳಿತಾಯ ಒಂದೇ ಅನೇಕ ಅನುಕೂಲತೆಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವು ಈ ಕೆಳಕಂಡಂತಿದೆ:

ವಾಯುಗುಣವನ್ನು ಕಡಿಮೆ ಮಾಡುತ್ತದೆ:
ಪ್ರತಿ ಕಾಳು ಮತ್ತು ದ್ವಿದಳ ಧಾನ್ಯದ ಹೊರಪದರವು ಓಲಿಗೊಸ್ಯಾಕರೈಡ್‍ ಎಂಬ ಅಂಶದಿಂದ ಕೂಡಿರುತ್ತದೆ (ಇದು ಸಕ್ಕರೆ ಗುಣವನ್ನು ಹೊಂದಿರುತ್ತದೆ). ಒಣಕಾಳನ್ನು ಬಳಸುವುದರಿಂದ ಆ ಸಕ್ಕರೆಯ ಅಂಶ ದೇಹದಲ್ಲಿ ಸೇರಿಕೊಂಡು ಅನಿಲವನ್ನು ಉತ್ಪತ್ತಿ ಮಾಡುತ್ತದೆ.

ಇದು ಆರೋಗ್ಯಕ್ಕೆ ಅಹಿತ. ನಾವು ಕಾಳನ್ನು ನೆನೆಸಿ ಬಳಸಿದರೆ ಕಾಳಿನ ಪೊರೆಗಳು ಕರಗಿ ಓಲಿಗೊಸ್ಯಾಕರೈಡನ್ನು ಬಿಡುಗಡೆ ಮಾಡುವುದರಿಂದ ಉಬ್ಬರವಿಳಿತ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಯ ಸುಧಾರಣೆ ಮತ್ತು ಪೌಷ್ಟಿಕ ದ್ರವ್ಯಗಳನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ:

ದ್ವಿದಳ ಧಾನ್ಯವನ್ನು ನೆನೆಸಿದಾಗ ಅದರಲ್ಲಿರುವ ವಿಟಮಿನ್‍ ಮತ್ತು ಖನಿಜಗಳು ನೆಂದು ನೀರಿನಲ್ಲೇ ಉಳಿಯುತ್ತದೆ ಹಾಗೂ ಪೌಷ್ಟಿಕಾಂಶಗಳು ಹಾಳಾಗುವ ಪ್ರಮೇಯ ತೀರಾ ಕಡಿಮೆ ಇರುತ್ತದೆ. ಕುತೂಹಲಕಾರಿ ವಿಷಯವೆಂದರೆ ಕಾಳುಗಳು ನೆಂದಾಗ ಅದರಲ್ಲಿರುವ ಪ್ರೊಟೀನ್‍, ಫೈಬರ್ ಮತ್ತು ಥಯಾಮಿನ್‍, ಕ್ಯಾಲ್ಸಿಯಂ ಅತಿ ಹೆಚ್ಚಾಗಿ ಲಭಿಸುತ್ತದೆ.

ಅಪಾಯಕಾರಿ ಪೋಷಕಾಂಶಗಳನ್ನು ಕಡಿಮೆಗೊಳಿಸುತ್ತದೆ:
ಫೈಟೇಟ್‍ ಮತ್ತು ಟ್ಯಾನಿನ್‍ ಎಂಬ ಪೌಷ್ಟಿಕಾಂಶದ ಲಭ್ಯತೆಯನ್ನು ಕಡಿಮೆ ಮಾಡುವ ಪೋಷಕಾಂಶವನ್ನು ಎಲ್ಲಾ ದ್ವಿದಳ ಧಾನ್ಯಗಳೂ ಹೊಂದಿರುತ್ತದೆ. ಇದು ಅಪಾಯಕಾರಿ ಪೋಷಕಾಂಶಗಳಾಗಿದ್ದು, ಕಾಳನ್ನು ನೆನೆಸುವುದರಿಂದ ಇದು ನಿಷ್ಕ್ರಿಯವಾಗುತ್ತದೆ. ಜೊತೆಗೆ ಮೆಗ್ನಿಷಿಯಂ, ಸತು ಮತ್ತು ಕಬ್ಬಿಣಾಂಶವನ್ನು ಹೀರಿಕೊಳ್ಳುವಿಕೆಯ ಪ್ರಮಾಣವನ್ನು ಸುಧಾರಿಸುತ್ತದೆ. ವಿಶೇಷವೆಂದರೆ ನೆಂದ ಕಾಳು ಅತೀ ಹೆಚ್ಚು ಪೋಷಕಾಂಶ ಹೊಂದಿದ್ದರೂ ಅದನ್ನು ನಮ್ಮ ದೇಹ ಹೀರುವುದಿಲ್ಲ.

ನೆನೆಸಿದ ನಂತರ, ಎರಡು ಆಯ್ಕೆಗಳಿವೆ:
ನೆನೆಸಿದ ನೀರನ್ನು ಒಣಗಿಸಿ ತಾಜಾ ನೀರಿನಿಂದ ಅಡುಗೆ ಮಾಡಬಹುದು.
ನೆನೆಸಿದ ನೀರಿನಿಂದಲೇ ಅಡುಗೆ ಮಾಡಬಹುದು.

ಮೊದಲನೆಯದು ವಾಯುವನ್ನು ಕಡಿಮೆಗೊಳಿಸುತ್ತದೆ. ಎರಡನೆಯದು ಹೆಚ್ಚು ಪೋಷಕಾಂಶಗಳನ್ನು ಒದಗಿಸುತ್ತದೆ. ಸಿಹಿ ನೀರಿನಲ್ಲಿ ಕಾಳನ್ನು ನೆನೆಸಿ ಅಡುಗೆ ಮಾಡುವುದು ಉತ್ತಮ. ನೆನೆಸಿದ ನೀರಿನಲ್ಲಿ ನಾವು ತೊಡೆದು ಹಾಕಲು ಪ್ರಯತ್ನಿಸುವ ಅಂಶಗಳನ್ನೂ ಒಳಗೊಂಡಿದೆ. ಹೌದು ನಗಣ್ಯ ಮೊತ್ತದಲ್ಲಿ ನಾವು ಕೆಲವು ಅಪೇಕ್ಷಣೀಯ ಪೋಷಕಾಂಶಗಳನ್ನು ಮತ್ತು ಗಾಢ ವರ್ಣ ದ್ರವ್ಯವನ್ನು ಕಳೆದುಕೊಳ್ಳುತ್ತೇವೆ. ಆದರೂ ಸಹ ವಾಯು ಮತ್ತು ಪೌಷ್ಟಿಕಾಂಶಗಳಲ್ಲಿ ಕಂಡುಬರುವ ವಿರೋಧಿ ಪೌಷ್ಟಿಕಾಂಶಗಳ ಸಾಮರ್ಥ್ಯವನ್ನು ಸಹ ಕಡಿಮೆಗೊಳಿಸುತ್ತದೆ. ಹೀಗೆ ಕಾಳುಗಳ ಅಡುಗೆಯನ್ನು ಅಲ್ಪಾವಧಿಯಲ್ಲಿ ಮಾಡುವ ಬಗ್ಗೆ ನೆನಪಿನಲ್ಲಿಟ್ಟುಕೊಳ್ಳಬಹುದು.

ಆದರೆ ರಾಜ್ಮಾ, ಬಟಾಣಿ, ಕಡಲೆಕಾಳು, ಬೀನ್ಸ್‍ ಕಾಳುಗಳನ್ನು ನೆನೆಸುವುದು ಸಾಮಾನ್ಯ. ಆದರೆ ದಿನನಿತ್ಯ ಬಳಸುವ ತೊಗರಿ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ ಮುಂತಾದವುಗಳ ಬಗ್ಗೆ ಯೋಚಿಸುವುದಿಲ್ಲ. ಈ ಧಾನ್ಯಗಳೂ ಕೂಡ ಉರಿಯೂತ ಉಂಟು ಮಾಡುವ ವಿರೋಧಿ ಪೌಷ್ಟಿಕಾಂಶದ ಗುಣವನ್ನು ಹೊಂದಿದೆ. ಆದ್ದರಿಂದ ಕನಿಷ್ಠ 3 ಗಂಟೆಗಳ ಕಾಲ ನೆನೆಸಿ ಬಳಸಿದರೆ ಉತ್ತಮ ಲಾಭ ಪಡೆಯಬಹುದು.

ಏಳದಳ ಧಾನ್ಯದ ಬಗ್ಗೆ ಆಯುರ್ವದವು ಸ್ವಲ್ಪ ಕ್ಯಾಸ್ಟರ್ ಎಣ್ಣೆ ಜೊತೆ ಹುರಿದು ತಯಾರಿಸಿದ ಅಡುಗೆಯು ಉಬ್ಬರವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಆದ್ದರಿಂದ ಸರಿಯಾದ ವಿಧಾನ ಬಳಸಿ, ಕಾಳನ್ನು ಬೇಯಿಸಿ. ಇದರಿಂದ ಕಾಳಿನಿಂದ ಗರಿಷ್ಠ ಪ್ರಯೋಜನ ಪಡೆಯುಲು ಸಾಧ್ಯವಾಗುತ್ತದೆ.

Comments are closed.