ಅಗರ್ತಲಾ: ತ್ರಿಪುರಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂಗೆ ವಿರುದ್ಧವಾಗಿ ಮತ ಚಲಾಯಿಸಿದ ಕಾರಣಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ನಾದಿನಿಯನ್ನು ಕೊಲೆ ಮಾಡಿದ್ದಾನೆ.
ಕೊಲೆಯಾದ ಮಹಿಳೆಯ ಮನೆಯೊಳಗೆ ರಾತ್ರಿ ನುಗ್ಗಿದ ಆರೋಪಿ ಆಕೆ ಬಿಜೆಪಿಯತ್ತ ನಿಷ್ಠೆ ಬದಲಿಸಿರುವ ವಿಚಾರದಲ್ಲಿ ಜಗಳವಾಡಿ ಸಿಟ್ಟಿಗೆದ್ದು ಇಟ್ಟಿಗೆಯಿಂದ ಥಳಿಸಿದ್ದಾನೆ. ಬಿಡಿಸಲು ಹೋದಾಗ ಆರೋಪಿ ಅಲ್ಲಿಂದ ಪರಾರಿಯಾದ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಕೊಲೆಯಾದ ಮಹಿಳೆಯ ಪತಿ ಮೂವರ ವಿರುದ್ಧ ದೂರು ದಾಖಲಿಸಿದ್ದು, ಈವರೆಗೆ ಯಾರನ್ನೂ ಪೊಲೀಸರು ಬಂಧಿಸಿಲ್ಲ
Comments are closed.