UAE

ದುಬಾಯಿಯಲ್ಲಿ ಅದ್ಧೂರಿಯಾಗಿ ವಿಜೃಂಬಿಸಿದ 68ನೇ ಕರ್ನಾಟಕ ರಾಜ್ಯೋತ್ಸವ-2023

Pinterest LinkedIn Tumblr

ದುಬಾಯಿ: ಕರ್ನಾಟಕ ಸಂಘ ದುಬಾಯಿ ಆಶ್ರಯದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ 26 ನವೆಂಬರ್ 223 ರಂದು ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ನಂತರ ರಾತ್ರಿಯವರೆಗೂ ವಿಜೃಂಬಣೆಯಿಂದ ನಡೆಯಿತು.

1985ರಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ದುಬಾಯಿ ಅತ್ಯಂತ ಹಿರಿಯ ಹಾಗೂ ಗೌರವದ ಸ್ಥಾನದಲ್ಲಿದೆ. ದುಬಾಯಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಕನ್ನಡ ಪರ ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬರುತಿದ್ದು, ಈ ಬಾರಿ ಅತ್ಯಂತ ವಿಜೃಂಬಣೆಯಿಂದ ಆಚರಿಸಲು ಕಾರ್ಯ ಯೋಜನೆಯನ್ನು ಹಾಕಿಕೊಂಡು ಯಶಸ್ವಿಯಾಗಿದೆ.

ಸಮಾರಂಭದ ವಿಶೇಷ ಆಕರ್ಷಣೆಯಾಗಿ ದಕ್ಷಿಣ ಭಾರತದ ಚಲನಚಿತ್ರ ರಂಗದ ಬಹುಭಾಷಾ ನಾಯಕಿ ಹಾಗೂ ಮಂಡ್ಯ ಲೋಕಸಭಾಕ್ಷೇತ್ರದ ಸಂಸದೆಯಾಗಿರುವ ಸುಮಲತಾ ಅಂಬರೀಶ್ ರವರನ್ನು ಕರ್ನಾಟಕ ಸಂಘ ದುಬಾಯಿಯ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಪೂರ್ಣ ಕುಂಭ ಕಳಸ ಹಾಗೂ ಕೇರಳದ ಚೆಂಡೆ ಹಾಗೂ ಮಂಗಳೂರಿನ ಬ್ಯಾಂಡ್ ವಾದ್ಯ ದೊಂದಿಗೆ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.

ಅರಬ್ ಸಂಯುಕ್ತ ಸಂಸ್ಥಾನದ ಕರ್ನಾಟಕ ಪರ ಸಂಘಟನೆಯ ಅಧ್ಯಕ್ಷರು, ಗಣ್ಯಾತಿ ಗಣ್ಯರು, ಆಹ್ವಾನಿತ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಮುಖ್ಯ ಅತಿಥಿ ಸುಮಾಲತಾ ಅಂಬರೀಶ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಾಂಸ್ಕೃತಿಕ ವೇದಿಕೆಯಲ್ಲಿ ಚಿರಂತನಾ ನೃತ್ಯ ಅಕಾಡೆಮಿ, ಬೆಂಗಳೂರು, 60 ಕಲಾವಿದರ ತಂಡವರ ಆಕರ್ಷಕ ನೃತ್ಯ, ಟೀಮ್ ಶಿವಪ್ರಿಯ ತಂಡದ ಕರ್ನಾಟಕ ದರ್ಶನ ನೃತ್ಯ ರೂಪಕ ಕರ್ನಾಟಕದ ಶ್ರೀಮಂತ ಕಲೆಯ ಅನಾವರಣ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಖ್ಯಾತ ಚಂದನವನದ ಚಲನಚಿತ್ರ ನಟರು, ಕಿರುತೆರೆಯ ಮಜಾ ಟಾಕೀಸ್ ನ ಖ್ಯಾತಿ ನವೀನ್ ಡಿ ಪಡಿಲ್, ಕರಾವಳಿ ಕರ್ನಾಟಕದ ಹಾಸ್ಯ ದಿಗ್ಗಜರುಗಳಾದ ದೀಪಕ್ ರೈ, ದಿನೇಶ್ ರೈ ಕಡಬ, ದಿನೇಶ್ ಕೊಡಪದವು ಕಿರುತೆರೆ, ಯಕ್ಷಗಾನ, ಗಿಚ್ಚಿ ಗಿಲಿಗಿಲಿ ಪ್ರಖ್ಯಾತರು ಚಿಲ್ಲರ್ ಮಂಜು, ಚಂದ್ರಪ್ರಭ, ಕಾರ್ತಿಕ್, ಮತ್ತು ರಾಘವೇಂದ್ರ ಹಾಸ್ಯದ ಹೊನಲು ಹರಿಸಿದರು.

ಸಂಗೀತ ರಸ ಮಂಜರಿಯಲ್ಲಿ ಸುಮಧುರ ಕಂಠಸಿರಿಯ ಕನ್ನಡ ಕೋಗಿಲೆ ಖ್ಯಾತ ಗಾಯಕ ಸಂದೇಶ್ ನೀರುಮಾರ್ಗ, ನಾದೀರ ಬಾನು, ದುಬಾಯಿಯ ಗಾಯಕರಾದ ನವೀದ್ ಮಾಗುಂಡಿ ಸುಶ್ರಾವ್ಯ ಗೀತೆಗಳ ಮೂಲಕ ಜನಮನ ಗೆದ್ದರು. “ದುಬಾಯಿ ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ೨೦೨೩” ರಕ್ತದಾನ ಶಿಬಿರಗಳ ರುವಾರಿ ಬಾಲಕೃಷ್ಣ ಸಾಲಿಯಾನ್ ಎರ್ಮಾಳ್ ರವರಿಗೆ ಪ್ರಧಾನಿಸಲಾಯಿತು.

ಮುಖ್ಯ ಅತಿಥಿ ಮಾನ್ಯ ಸುಮಲತಾ ಅಂಬರೀಶ್ ರವರನ್ನು ಸನ್ಮಾನಿ ಗೌರವಿಸಲಾಯಿತು.
ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಹೆಣ್ಣು ಹುಲಿಗಳ ತಂಡದ ಹುಲಿವೇಷ ನೃತ್ಯ ಹಾಗೂ ಇನ್ನಿತರ ತಂಡದವರ ನೃತ್ಯ ವೈವಿಧ್ಯ ಸರ್ವರ ಗಮನ ಸೆಳೆಯಿತು.

ಕರ್ನಾಟಕ ಸಾಂಸ್ಕೃತಿಕ ವೈಭವದ ಸ್ಥಭ್ಧ ಚಿತ್ರಗಳ ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದು ಆಕರ್ಷವಾಗಿತ್ತು.

ಪ್ರಖ್ಯಾತ ಚಂದನವನದ ನಟಿ ಅಂಕಿತಾ ಅಮರ್ ಕಾರ್ಯಕ್ರಮ ನಿರೂಪಣೆಯಲ್ಲಿ ಸಮಸ್ಥ ಅನಿವಾಸಿ ಕನ್ನಡಿಗರ ಮನಗೆದ್ದರು. ಕರ್ನಾಟಕ ಸಂಘ ದುಬಾಯಿಯ ಅಧ್ಯಕ್ಷ ಶಿಧರ್ ನಾಗರಾಜಪ್ಪ ಮತ್ತು ಪೋಷಕರುಗಳಾದ ಡಾ. ಬಿ. ಕೆ. ಯೂಸುಫ್, ಪ್ರಮುಖರಾದ ಹರೀಶ್ ಬಂಗೇರಾ, ರೊನಾಲ್ಡ್ ಮಾರ್ಟಿಸ್, ಸಲಹೆಗಾರರಾದ ಜಯಂತ್ ಶೆಟ್ಟಿ, ಉಪಾಧ್ಯಕ್ಷರು ದಯಾ ಕಿರೊಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಖಜಾಂಚಿ ನಾಗರಾಜ ರಾವ್ ಉಡುಪಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಶ್ರಿಯುತರುಗಳಾದ ಹರೀಶ್ ಕೋಡಿ, ಸಿದ್ದಲಿಂಗ ಬಿ. ಆರ್. ಯುವರಾಜ್ ದೇವಾಡಿಗ, ಸುನಿಲ್ ಗವಾಸ್ಕರ್, ಲಾರೆನ್ಸ್ ನಜರೆತ್, ಪೀಟರ್ ಜಾಯ್ಸನ್ ಮತ್ತು ಶ್ರೀಮತಿಯರುಗಳಾದ ಮಮತಾ ಸೆಂದಿಲ್, ರಾಧಿಕಾ ಸತೀಶ್, ವಿನುತ, ಬೃಂದಾ ಅಶ್ವತ್ ಇವರ ಸಂಪೂರ್ಣ ಸಹಕಾರದಿಂದ ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಆಗಮಿಸಿದ್ದು ದಾಖಲೆಯನ್ನು ಸೃಷ್ಟಿಸಿದೆ. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಪ್ರಮುಖ ಪ್ರಾಯೋಜಕರು ನವನಾಮಿ ಗ್ರೂಪ್ ಮತ್ತು ಇನ್ನಿತರ ಪ್ರಾಯೋಜಕರು ಹಾಗೂ ಮಾಧ್ಯಮದವರನ್ನು ಗೌರವಿಸಲಾಯಿತು.

Comments are closed.