ಉಡುಪಿ; ಇಲ್ಲಿನ ಶಿರ್ವ ಮೂಲದ ನರ್ಸ್ ಸೌದಿಯಲ್ಲಿ ನಿಗೂಢ ಸಾವನ್ನಪ್ಪಿದ ಘಟನೆ ನಡೆದಿದೆ. ಶಿರ್ವ ಸಮೀಪದ ಕುತ್ಯಾರಿನ ಹೆಝಲ್ ಜೋತ್ಸ್ನಾ ನಿಗೂಢವಾಗಿ ಸಾವನ್ನಪ್ಪಿದವರು. ಇವರು ಸೌದಿಯ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಆರು ವರ್ಷಗಳಿಂದ ನರ್ಸ್ ಆಗಿದ್ದವರು.
ಜುಲೈ 19 ರಂದು ಪತಿ ಅಶ್ವಿನ್ ಮಥಾಯಿಸ್ ರೊಂದಿಗೆ ಮಾತನಾಡಿದ್ದೇ ಕೊನೆಯಾಗಿದ್ದು ಅದಾಗಿ ಎರಡು ದಿನಗಳ ಬಳಿಕ ಸಹೋದ್ಯೋಗಿ ಮೂಲಕ ಸಾವನ್ನಪ್ಪಿರುವ ಮಾಹಿತಿ ಬಂದಿತ್ತು. ಆದರೆ ಸಾವು ಹೇಗೆ ಸಂಭವಿಸಿತು ,ಎಲ್ಲಿ ಸಂಭವಿಸಿತು ಎಂಬ ನಿಖರ ಮಾಹಿತಿ ಊರವರಿಗೂ ತಿಳಿಸಿಲ್ಲ. ಈ ಸಂಬಂಧ ವಿದೇಶಾಂಗ ಸಚಿವೆಯನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಝಾ ಮತ್ತು ಉಡುಪಿ ಶಾಸಕ ರಘುಪತಿ ಭಟ್ ಸಂಪರ್ಕಿಸಿ ಮಾಹಿತಿ ಪಡೇದಿದ್ದಾರೆನ್ನಲಾಗಿದೆ.
ಕೆಲ ವರ್ಷಗಳ ಹಿಂದೆ ಇದೇ ಭಾಗದ ನರ್ಸ್ ಜೆಸಿಂತಾ ಕೂಡ ನಿಗೂಢ ಸಾವನ್ನಪ್ಪಿದ್ದರು. ಜೆಸಿಂತಾ ನಿಗೂಢ ಸಾವು ಪ್ರಕರಣ ಹಾಗೂ ಹೆಝಲ್ ಪ್ರಕರಣ ಸಾಮ್ಯತೆ ಹೊಂದಿದೆ.
Comments are closed.