ಕರಾವಳಿ

ಕೆಬಿಸಿ 12ನೇ ಸೀಸನ್- ತುಳುವಿನಲ್ಲಿ ಮಾತನಾಡಿದ ಅಮಿತಾಬ್; ರವಿ ಕಟಪಾಡಿ ಗೆದ್ದಿದ್ದೆಷ್ಟು ಗೊತ್ತಾ?

Pinterest LinkedIn Tumblr

ಉಡುಪಿ: ಕರ್ನಾಟಕದ ಯುವಕ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿಯ ಯುವ ಸಮಾಜಿಕ ಕಾರ್ಯಕರ್ತ ಈಗ ಕೆಬಿಸಿಯಲ್ಲಿ ಮಿಂಚಿದ್ದಾರೆ. ಜನಪ್ರಿಯ ಹಿಂದಿ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಸೀಸನ್ 12 ರಲ್ಲಿ ಭಾಗವಹಿಸಿದ್ದು ಉಡುಪಿಯ ಯುವ ಸಾಮಾಜಿಕ ಕಾರ್ಯಕರ್ತ.

ಕಳೆದ ಆರು ವರ್ಷಗಳಿಂದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಭಿನ್ನ ದೈತ್ಯ ವೇಷಗಳನ್ನು ಧರಿಸುವ ಮೂಲಕ 54.5 ಲಕ್ಷ ರೂ. ಗಳನ್ನು ಸಂಗ್ರಹಿಸಿ ಅಸಹಾಯಕ ಮಕ್ಕಳ ಚಿಕಿತ್ಸೆಗಾಗಿ ಭರಿಸಿರುವ ಸಮಾಜ ಸೇವಕ ರವಿ ಕಟಪಾಡಿ ಅವರು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಗಳಿಸಿದ ಬಹುಮಾನ ಮೊತ್ತವನ್ನು ಕೂಡಾ ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ಶುಕ್ರವಾರ ರಾತ್ರಿ ಪ್ರಸಾರವಾದ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಕರ್ಮವೀರ್ ಸ್ಪೆಷಲ್ ಎಪಿಸೋಡ್‌ನಲ್ಲಿ ರವಿ ಕಟಪಾಡಿ ಹಾಗೂ ಅಂಬಾ ಬೆಹಾನ್ ಜಂಟಿಯಾಗಿ 25 ಲಕ್ಷ ರೂ. ಮೊತ್ತವನ್ನು ವಿಜೇತರಾಗಿದ್ದಾರೆ.

ಹಿಂದಿ ಖಾಸಗಿ ವಾಹಿನಿಯ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಆರಂಭಿಕ 7 ಪ್ರಶ್ನೆಗಳಿಗೆ ರವಿ ಕಟಪಾಡಿ ಮತ್ತು ಮುಂದಿನ ಪ್ರಶ್ನೆಗಳಿಗೆ ಅಂಬಾ ಉತ್ತರಿಸಿದ್ದರು. ಹಿರಿಯ ನಟ ಅನುಪಮ್ ಖೇರ್ ಜತೆಗೂಡಿ ಸಹಕರಿಸಿದರು. ರವಿಯವರ ಮಾನವೀಯ ಸೇವಾಕಾರ್ಯ ಗುರುತಿಸಿ ವಾಹಿನಿ ಈ ಅವಕಾಶ ನೀಡಿದೆ.

ದೈತ್ಯ ವೇಷ ಧರಿಸುವ ಮೂಲಕ ಮಕ್ಕಳ ಕಲ್ಯಾಣ ಮಾಡುವ ರವಿ ಕಟಪಾಡಿಯವರಿಗೆ ತಾನು ‘ದರಿಯಾ ದಿಲ್ ದಾನವ್’ ಎಂದು ಬಿರುದು ನೀಡುವುದಾಗಿ ಅಮಿತಾಬ್ ಘೋಷಿಸಿದ್ದಾರೆ. ಉಡುಪಿ ಮತ್ತು ಕುಡ್ಲದ ಎಲ್ಲಾ ಜನರಿಗೂ ನನ್ನ ನಮಸ್ಕಾರ ಎಂದು ರವಿ ಕಟಪಾಡಿ ಹೇಳಿಕೊಟ್ಟಂತೆ ಅಮಿತಾಬ್ ಬಚ್ಚನ್ ತುಳುವಿನಲ್ಲಿ ಅದನ್ನು ಉಚ್ಚರಿಸಿದರು.

 

Comments are closed.