ದುಬೈ: ಐಪಿಎಲ್ನ 29ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆದ ಪಂದ್ಯದಲ್ಲಿ ಧೋನಿ ವರ್ತನೆ ಹಾಗು ಅಂಪೈರ್ ನಡವಳಿಕೆ ಬಗ್ಗೆ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
https://twitter.com/i/status/1316073486884966400
https://twitter.com/Suneel_IND/status/1316082129386655744?ref_src=twsrc%5Etfw%7Ctwcamp%5Etweetembed%7Ctwterm%5E1316082129386655744%7Ctwgr%5Eshare_0&ref_url=https%3A%2F%2Fkannada.news18.com%2Fnews%2Fipl%2Fumpire-changes-mind-on-wide-after-seeing-ms-dhoni-angry-face-rmd-471729.html
https://twitter.com/i/status/1316082816782802945
ಮಂಗಳವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 29ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೂರನೇ ಜಯ ದಾಖಲಿಸಿತು. ಈ ಮಧ್ಯೆ ಪಂದ್ಯ ನಡೆಯುವ ವೇಳೆ ಅಂಪೈರ್ ತೆಗೆದುಕೊಂಡ ನಿರ್ಧಾರ ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ. ಧೋನಿ ಸಿಟ್ಟಾದರು ಎನ್ನುವ ಕಾರಣಕ್ಕೆ ಅಂಪೈರ್ ತಮ್ಮ ನಿರ್ಧಾರವನ್ನೇ ಬದಲಿಸಿ ಬಿಟ್ಟಿದ್ದಾರೆ. ಈ ವಿಚಾರಕ್ಕೆ ಹೈದರಾಬಾದ್ ತಂಡ ಅಂಪೈರ್ ವಿರುದ್ಧ ಸಾಕಷ್ಟು ಆಕ್ರೋಶ ಹೊರ ಹಾಕಿದೆ.
ಚೆನ್ನೈ ನೀಡಿದ್ದ 168 ರನ್ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಉತ್ತಮ ಆರಂಭ ಕಾಣಲಿಲ್ಲ. ಕೇನ್ ವಿಲಿಯಮ್ಸ್ ಪಂದ್ಯ ಕಟ್ಟೋಕೆ ಮುಂದಾದರಾದರೂ ಅವರಿಗೆ ಯಾರೂ ಉತ್ತಮ ಸಾತ್ ನೀಡಲಿಲ್ಲ. ಕೊನೆಗೆ ಹೈದರಾಬಾದ್ಗೆ 11 ಬಾಲ್ಗಳಿಗೆ 25 ರನ್ಗಳ ಅವಶ್ಯಕತೆ ಇತ್ತು. ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿದ್ದರೆ, ರಶೀದ್ ಖಾನ್ ಬ್ಯಾಟಿಂಗ್ಗೆ ನಿಂತಿದ್ದರು. ಠಾಕೂರ್ ನಿರಂತರವಾಗಿ ಬಾಲನ್ನು ಔಟ್ಸೈಡ್ ಎಸೆಯುತ್ತಿದ್ದರು.
ಮೊದಲ ಬಾಲ್ ತುಂಬಾನೇ ಹೊರ ಹೋಗಿದ್ದರಿಂದ ಅದನ್ನು ಅಂಪೈರ್ ವೈಡ್ ಎಂದು ಘೋಷಣೆ ಮಾಡಿದರು. ನಂತರದ ಬಾಲ್ ಕೂಡ ಠಾಕೂರ್ ಅದೇ ರೀತಿ ಎಸೆದರು. ಈ ವೇಳೆ ಅಂಪೈರ್ ವೈಡ್ ಕೊಡಲು ಕೈ ಎತ್ತುವುದರಲ್ಲಿದ್ದರು. ಆಗ ಕೀಪಿಂಗ್ ನಿಂತಿದ್ದ ಧೋನಿ ಸಿಟ್ಟಿನಲ್ಲೇ, ಇದನ್ನು ನೀವು ಹೇಗೆ ವೈಡ್ ನೀಡುತ್ತಿರಿ ಎಂದು ಕೈ ಸನ್ನೆಯ ಮೂಲಕವೇ ಪ್ರಶ್ನೆ ಮಾಡಿದರು. ಈ ವೇಳೆ ವೈಡ್ ಕೊಡಲು ಮುಂದಾದ ಅಂಪೈರ್ ಕೈ ಕೆಳಗಿಳಿಸಿ ಬಿಟ್ಟರು.
ಅಂಪೈರ್ ನಿರ್ಧಾರಕ್ಕೆ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಸಿಟ್ಟಾಗಿದ್ದಾರೆ. ಧೋನಿ ಕೂಗಿದಾಕ್ಷಣ ನಿರ್ಧಾರ ಬದಲಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ, ಅಂಪೈರ್ ಈ ರೀತಿ ಮಾಡಬಾರದಿತ್ತು ಎಂದು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
Comments are closed.