ಕ್ರೀಡೆ

ಕ್ಯಾಪಿಟಲ್ಸ್‌ ವಿರುದ್ಧ ಪಂದ್ಯಕ್ಕೆ ಸಿಎಸ್‌ಕೆಗೆ ರಾಯುಡು ಆಡುವುದು ಅನುಮಾನ

Pinterest LinkedIn Tumblr


ದುಬೈ: ಮುಂಬೈ ಇಂಡಿಯನ್ಸ್‌ ವಿರುದ್ಧದ ಪ್ರಥಮ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕದಿಂದ ಸಿಎಸ್‌ಕೆ ಜಯಕ್ಕೆ ಕಾರಣಕರ್ತರಾಗಿದ್ದ ರಾಯುಡು ತೊಡೆ ಭಾಗದ ಸ್ನಾಯು ಸೆಳೆತದ ಸಮಸ್ಯೆಯಿಂದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯಕ್ಕೂ ಅನುಮಾನ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ.

ಗಾಯದಿಂದ ರಾಯುಡು ಚೇತರಿಸುತ್ತಿದ್ದಾರೆ. ಹೆಚ್ಚೆಂದರೆ ಅವರು ಇನ್ನೊಂದು ಪಂದ್ಯಕ್ಕೆ ಅಲಭ್ಯರಾಗುವರು ಅಷ್ಟೇ ಎಂದು ಕಾಶಿ ವಿಶ್ವನಾಥನ್‌ ತಿಳಿಸಿದ್ದಾರೆ.

ಅಬುಧಾಬಿಯ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದ ರಾಯುಡು, ಮುಂಬೈ ತಂಡದ ಬಲಿಷ್ಠ ಬೌಲಿಂಗ್‌ ವಿಭಾಗವನ್ನು ಧೂಳೀಪಟ ಮಾಡಿ ಸ್ಫೋಟಕ 71 ರನ್‌ ಚಚ್ಚಿದ್ದರು. ಅಷ್ಟೇ ಅಲ್ಲದೆ ಫಾಫ್‌ ಡು’ಪ್ಲೆಸಿಸ್‌ ಜೊತೆಗೂಡಿ ಶತಕದ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟುವಂತೆ ಮಾಡಿದ್ದರು.

Comments are closed.