ಕ್ರೀಡೆ

ಗೆಲುವಿನೊಂದಿಗೆ ಐಪಿಎಲ್ 2019ರ ಅಭಿಯಾನ ಕೊನೆಗೊಳಿಸಿದ ಆರ್‌ಸಿಬಿ; ಸನ್‌ರೈಸರ್ಸ್ ವಿರುದ್ಧ 4 ವಿಕೆಟ್ ಜಯ

Pinterest LinkedIn Tumblr

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ.

ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮಾಯೆರ್ ಹಾಗೂ ಗುರ್‌ಕೀರಾತ್ ಸಿಂಗ್ ಮನ್ ಅಮೋಘ ಜತೆಯಾಟದ ನೆರವಿನಿಂದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಅಂತಿಮ ಪಂದ್ಯದ ಗೆಲುವನ್ನು ಆರ್‌ಸಿಬಿ ಅಭಿಮಾನಿಗಳಿಗೆ ಅರ್ಪಿಸಿದೆ. ಇದರೊಂದಿಗೆ ನಿಟ್ಟುಸಿರು ಬಿಡುವಂತಾಗಿದೆ.

ಈ ಮೊದಲು ಸನ್‌ರೈಸರ್ಸ್ ಹೈದರಾಬಾದ್, ನಾಯಕ ಕೇನ್ ವಿಲಿಯಮ್ಸನ್ (70*) ಉಪಯುಕ್ತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 175 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಬಳಿಕ ರನ್ ಬೆನ್ನಟ್ಟಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್‌ ಸೇರಿದಂತೆ ಪ್ರಮುಖ ವಿಕೆಟುಗಳನ್ನು 20 ರನ್ ಅಂತರದಲ್ಲೇ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜತೆಗೂಡಿದ ಹೆಟ್ಮಾಯೆರ್ ಹಾಗೂ ಗುರ್‌ಕೀರಾತ್ ಅಮೋಘ ಜತೆಯಾಟ ನೀಡುವ ಮೂಲಕ ತಂಡದ ಗೆಲುವನ್ನು ಖಾತ್ರಿಪಡಿಸಿದರು.

ಹೆಟ್ಮಾಯೆರ್ ಹಾಗೂ ಗುರ್‌ಕೀರಾತ್ ನಾಲ್ಕನೇ ವಿಕೆಟ್‌ಗೆ 144 ರನ್‌ಗಳ ಭರ್ಜರಿ ಜತೆಯಾಟವನ್ನು ನೀಡಿದರು. 47 ಎಸೆತಗಳನ್ನು ಎದುರಿಸಿದ ಹೆಟ್ಮಾಯೆರ್ ನಾಲ್ಕು ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ನೆರವಿನಿಂದ 75 ರನ್ ಗಳಿಸಿ ಅಬ್ಬರಿಸಿದರು. ಅತ್ತ ಮನ್ 48 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 65 ರನ್ ಗಳಿಸಿದರು.

Comments are closed.