ಮೊಹಾಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂದು 4ನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮೊದಲೆರಡು ಪಂದ್ಯ ಗೆದ್ದು, ರಾಂಚಿಯಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಹೇಗಾದರೂ ಮಾಡಿ ಮೊಹಾಲಿಯಲ್ಲಿ ಗೆಲುವಿನ ಮೆಟ್ಟಿಲು ಕಟ್ಟಬೇಕೆಂದು ಅಂದಾಜು ಮಾಡಿಕೊಂಡಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಅತ್ತ ಆಸ್ಟ್ರೇಲಿಯಾ ತಂಡ ಕೂಡ ಹೇಗಾದರು ಮಾಡಿ ಗೆಲುವಿನ ಓಟ ಮುಂದುವರಿಸಿ ಸರಣಿ ಸಮಬಲ ಮಾಡಿಕೊಳ್ಳಲು ರಣತಂತ್ರ ಹೆಣೆದಿದೆ.
ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾಕ್ಕಿದು ಕೊನೆಯ ಏಕದಿನ ಸರಣಿ. ಇಷ್ಟಾದರು ವಿರಾಟ್ ಕೊಹ್ಲಿ ಪಡೆಯ ಟಾಪ್ ಆರ್ಡರ್ ಗೊಂದಲದಲ್ಲಿದೆ. ಓಪನರ್ಗಳಿಬ್ಬರು ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ. ರೋಹಿತ್ ಶರ್ಮಾ, ಶಿಖರ್ ಧವನ್ ಕಳಪೆ ಆಟ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಅಂಬಟಿ ರಾಯುಡು ಕೂಡ ತಂಡಕ್ಕೆ ಆಧಾರವಾಗುತ್ತಿಲ್ಲ. ಹೀಗಿರುವಾಗ ಕನ್ನಡಿಗ ಕೆಎಲ್ ರಾಹುಲ್ಗೆ ಅವಕಾಶ ಸಿಗುತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಎಂಎಸ್ ಧೋನಿಗೆ ಉಳಿದೆರಡು ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿದ್ದು ರಿಷಭ್ ಪಂತ್ ರೆಡಿಯಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದು, ಉಳಿದ ಬ್ಯಾಟ್ಸ್ಮನ್ಗಳು ತಂಡಕ್ಕೆ ಸಾಥ್ ಕೊಡಬೇಕಿದೆ.
ಇತ್ತ ಆಸ್ಟ್ರೇಲಿಯಾ ತಂಡದಲ್ಲಿ ನಾಯಕ ಆ್ಯರೋನ್ ಫಿಂಚ್ ಫಾರ್ಮ್ಗೆ ಮರಳಿದ್ದು, ಉಸ್ಮಾನ್ ಖ್ವಾಜಾ ಉತ್ತಮ ಸಾಥ್ ಕೊಟ್ಟಿದ್ದಾರೆ. ಆದರೆ ಮಧ್ಯಮ ಕ್ರಮಾಂಕ ದುರ್ಬಲವಾಗಿದ್ದು ಗ್ಲೆನ್ ಮ್ಯಾಕ್ಸ್ವೆಲ್ ಹೊರತು ಪಡಿಸಿದರೆ ಸಂಘಟಿತ ಆಟದ ಅವಶ್ಯಕತೆ ಇದೆ. ಉಭಯ ತಂಡಗಳಲ್ಲೂ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಬ್ಯಾಟ್ಸ್ಮನ್ಗಳು ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಿದೆ.
Comments are closed.