ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಯೋಗ್ಯತೆಗೆ ತಕ್ಕಷ್ಟು ಮರ್ಯಾದೆ ಗಳಿಸದ ಕ್ರಿಕೆಟಿಗನೆಂದರೆ ಗೌತಮ್ ಗಂಭೀರ್ ಎಂದು ಹೇಳಲಾಗುತ್ತದೆ.
2011, 2007ರ ವಿಶ್ವಕಪ್ನಲ್ಲಿ ತಂಡ ಗೆಲ್ಲಲು ಗಂಭೀರ್ ಕೊಡುಗೆ ನಿರ್ಣಾಯಕವಾಗಿತ್ತು.ಆದರೂ ಅವರು ಭಾರತ ತಂಡದಿಂದ ಹೊರ ಬೀಳಲು ಕಾರಣ ಅವರ ಸ್ವಭಾವ ಎಂದು ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಆಂಗ್ಲ ಮಾಧ್ಯಮ ವೊಂದರಲ್ಲಿ ಬರೆದು ಕೊಂಡಿದ್ದಾರೆ.
ಅವರು ಭಾರತ ತಂಡದಿಂದ ಹೊರಬೀಳಲು ಮುಖ್ಯ ಕಾರಣ ಅವರಲ್ಲಿ ಹೆಚ್ಚುತ್ತಿದ್ದ ಸಿಟ್ಟು. ಅದೇ ಕಾರಣಕ್ಕೆ ನಾನವರನ್ನು ಭಾರತ ತಂಡದ ಅಮಿತಾಭ್ ಬಚ್ಚನ್ ಎಂದು ಕರೆದಿದ್ದೆ. 2011ರಲ್ಲಿ ಅವರು ಇಂಗ್ಲೆಂಡ್ನಲ್ಲಿ ಗಾಯಗೊಂಡಿದ್ದರು. ಅವರ ಗಾಯ ಗಂಭೀರವಲ್ಲ ಎಂದು ಸ್ಕ್ಯಾನಿಂಗ್ ವರದಿಗಳು ಹೇಳಿದ್ದವು. ಆದರೂ ಗಂಭೀರ್ ಆಡದಿರಲು ನಿರ್ಧರಿಸಿದರು. ಅದು ಅವರಿಗೆ ಋಣಾತ್ಮಕವಾಗಿ ಪರಿಣಮಿಸಿತು. ಅವರ ಜಾಗಕ್ಕೆ ಬಂದ ಶಿಖರ್ ಧವನ್ ಅತ್ಯುತ್ತಮವಾಗಿ ಆಡಿದ ನಂತರ ಗಂಭೀರ್ ಶಾಶ್ವತವಾಗಿ ಸ್ಥಾನ ಕಳೆದುಕೊಂಡರು ಎಂದು ಪಾಟೀಲ್ ಹೇಳಿದ್ದಾರೆ.
-udayavani
Comments are closed.