
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅಮೋಘ ಆಟದ ನೆರವಿನೊಡನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 4 ವಿಕೆಟ್ ಜಯ ಸಾಧಿಸಿದೆ.
ಮೊದಲಿಗೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಪಂಜಾಬ್ ಪಡೆ 19.2 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು.
ಪಂಜಾಬ್ ಪರವಾಗಿ ರ ಕೆ. ಎಲ್ ರಾಹುಲ್(47), ರವಿಚಂದ್ರನ್ ಅಶ್ವಿನ್(33) ಹಾಗೂ ಕರುಣ್ ನಾಯರ್(29) ಉತ್ತಮ ರನ್ ಕಲೆ ಹಾಕಿದ್ದರು.
ಬೆಂಗಳೂರು ತಂಡದ ಪರವಾಗಿ ಉಮೇಶ್ ಯಾದವ್ 3 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಕ್ರಿಸ್ ವೋಕ್ಸ್, ಕುಲ್ವಂತ್ ಖೇಜ್ರೋಲಿಯ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್, ಯಜುವೇಂದ್ರ ಚಹಾಲ್ 1 ವಿಕೆಟ್ ಕಿತ್ತರು.
ಗೆಲುವಿಗೆ 156 ರನ್ ಗುರಿ ಪಡೆದ ಆರ್ಸಿಬಿ 19. 3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸುವುದರೊಡನೆ ವಿಜಯಿ ತಂಡವಾಗಿ ಹೊರಹೊಮ್ಮಿತು.
ಬೆಂಗಳೂರು ಪರವಾಗಿ ಎಬಿ ಡಿವಿಲಿಯರ್ಸ್(57), ಕ್ವಿಂಟನ್ ಡಿ ಕಾಕ್(45), ವಿರಾಟ್ ಕೊಹ್ಲಿ(21) ಮಂದೀಪ್ ಸಿಂಗ್(22) ರನ್ ಗಳಿಸಿ ಶ್ರೇಷ್ಠ ಪ್ರದರ್ಶನ ನೀಡಿದ್ದರು.
ಪಂಜಾಬ್ ಪರವಾಗಿ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಅಕ್ಷರ್ ಪಟೇಲ್, ಮುಜೀಬ್ ಉರ್ ರಹ್ಮಾನ್ ಹಾಗೂ ಆ್ಯಂಡ್ರಿವ್ ಟೈ ಒಂದೊಂದು ವಿಕೆಟ್ ಪಡೆದುಕೊಂಡರು.
ಬೆಂಗಳೂರಿನ ಪಾಲಿಗೆ ಇದು ಈ ಸರಣಿಯ ಮೊದಲ ಗೆಲುವಾಗಿದೆ ಇದರೊಡನೆ ಫೈನಲ್ ಗೆಲುವಿನ ಕನಸಿಗೆ ರೆಕ್ಕೆ ಮೂಡಿದಂತಾಗಿದೆ.
Comments are closed.