ಕರಾವಳಿ

ಕುಂದಾಪುರದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಸೇರಿದಂತೆ 13 ಸಾಧಕರಿಗೆ ಏಕಲವ್ಯ ಪ್ರಶಸ್ತಿ

Pinterest LinkedIn Tumblr

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟಿಸಿದ್ದು, ಕುಂದಾಪುರ ತಾಲೂಕು ಚಿತ್ತೂರಿನ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಸೇರಿದಂತೆ 13 ಕ್ರೀಡಾಪಟುಗಳು ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಏಕಲವ್ಯ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಸಾಧಕರಿಗೆ 2 ಲಕ್ಷ ರೂಪಾಯಿ ನಗದು ಹಾಗೂ ಏಕಲವ್ಯ ಕಂಚಿನ ಪ್ರತಿಮೆ ನೀಡಲಾಗುವುದು.

ಕಾರ್ಕಳದ ಸುಕೇಶ್ ಹೆಗ್ಡೆಗೂ ಏಕಲವ್ಯ ಪ್ರಶಸ್ತಿ ಲಭಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಇಬ್ಬರು ಕ್ರೀಡಾಪಟುಗಳಿಗೆ ಈ ಗೌರವ ಸಿಕ್ಕಂತಾಗಿದೆ. ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಏಕಲವ್ಯ ಪ್ರಶಸ್ತಿಯನ್ನು 1992ನೇ ಸಾಲಿನಿಂದ ಕರ್ನಾಟಕದ ಅಪ್ರತಿಮ ಕ್ರೀಡಾಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಪ್ರತಿ ವರ್ಷ ವಿವಿಧ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಚಿತ್ತೂರು ಗ್ರಾಮದ ಮಹಾಬಲ ಪೂಜಾರಿ ಹಾಗು ಪದ್ಧು ದಂಪತಿಗಳ 6 ಮಕ್ಕಳಲ್ಲಿ 5ನೆ ಪುತ್ರನಾದ ಗುರುರಾಜ್ ಓದಿನಷ್ಟೆ ಕ್ರೀಡೆಯಲ್ಲಿ ಆಸಕ್ತಿ ತೋರುತ್ತಿದ್ದರು. ತಂದೆ ಚಾಲಕ ವೃತ್ತಿ ಮಾಡಿಕೊಂಡು ಕುಟುಂಬವನ್ನು ನಡೆಸುತ್ತಿದ್ದಾರೆ. ಕಿತ್ತು ತಿನ್ನುವ ಬಡತನದ ನಡುವೆಯೂ ಗುರುರಾಜ್ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

ಹರ್ಷಿತ ಎಸ್‌(ಅಥ್ಲೆಟಿಕ್), ರಾಜೇಶ್ ಪ್ರಕಾಶ್ ಉಪ್ಪಾರ್(ಬ್ಯಾಸ್ಕೇಟ್ ಬಾಲ್‌), ಪೂರ್ವಿಶ್‌ ಎಸ್‌ ರಾಮ್(ಬ್ಯಾಡ್ಮಿಂಟನ್‌), ರೇಣುಕಾ ದಂಡಿನ್‌(ಸೈಕ್ಲಿಂಗ್‌), ಮಯೂರ್ ಡಿ ಭಾನು(ಶೂಟಿಂಗ್‌), ಕಾರ್ತಿಕ್‌ ಎ(ವಾಲಿಬಾಲ್‌), ಮಾಳವಿಕ ವಿಶ್ವನಾಥ್(ಈಜು), ಕೀರ್ತನಾ ಟಿ.ಕೆ(ರೋಯಿಂಗ್), ಅಯ್ಯಪ್ಪ ಎಂ.ಬಿ(ಹಾಕಿ), ಸುಕೇಶ್‌ ಹೆಗ್ಡೆ(ಕಬಡ್ಡಿ), ಗುರುರಾಜ(ಭಾರ ಎತ್ತುವುದು), ಸಂದೀಪ್ ಬಿ ಕಾಟೆ(ಕುಸ್ತಿ), ರೇವತಿ ನಾಯಕ ಎಂ (ಪ್ಯಾರಾ ಈಜುಪಟು) ಏಕಲವ್ಯ ಪ್ರಶಸ್ತಿ ಪಡೆದ ಕ್ರೀಡಾಪಟುಗಳು.

ಜೀವಮಾನ ಸಾಧನೆ ಪ್ರಶಸ್ತಿ- 2016
ಕ್ರೀಡಾ ಕ್ಷೇತ್ರಕ್ಕೆ ಅಪ್ರತಿಮ ಕ್ರೀಡಾಪಟುಗಳನ್ನು ನೀಡಿದ ಕರ್ನಾಟಕದ ತರಬೇತುದಾರರಿಗೆ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರತಿ ವರ್ಷ 2 ಕ್ರೀಡಾ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಸಕ್ತ ವರ್ಷ ಇಬ್ಬರು ಸಾಧಕರಾದ ವಿ.ಆರ್. ಬೀಡು (ಅಥ್ಲೆಟಿಕ್ಸ್), ಎಂ.ಆರ್. ಮೊಹಿತೆ (ಈಜು)ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಜೀವಮಾನ ಸಾಧನೆ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ತರಬೇತುದಾರರಿಗೆ ತಲಾ ರೂ.1.50 ಲಕ್ಷಗಳ ನಗದು ಬಹುಮಾನ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ- 2016
ಕರ್ನಾಟಕ ರಾಜ್ಯದ ಗ್ರಾಮೀಣ ಕ್ರೀಡೆಗಳಿಗೆ ಮತ್ತು ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 2014-15ನೇ ಸಾಲಿನಲ್ಲಿ ಹೊಸ ಯೋಜನೆಯಾಗಿ ಅನುಷ್ಟಾನಕ್ಕೆ ತರಲಾಗಿದೆ. ಗ್ರಾಮೀಣ ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕ್ರೀಡಾಪಟುಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

2016ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು
ಸೈಯದ್ಫತೇಶಾವಲಿ ಹೆಚ್. ಬೇಪಾರಿ (ಆಟ್ಯಾ-ಪಾಟ್ಯಾ), ಯಶಸ್ವಿನಿ ಕೆ.ಜಿ (ಬಾಲ್ ಬ್ಯಾಡ್ಮಿಂಟನ್), ಶೇಖರ್ ವಾಲಿ (ಗುಂಡು ಎತ್ತುವುದು), ಯುವರಾಜ್ ಜೈನ್ (ಕಂಬಳ), ಮುನ್ನೀರ್ ಭಾಷಾ (ಖೋ-ಖೋ)
ಸುಗುಣಸಾಗರ್ ಹೆಚ್ ವಡ್ರಾಳೆ (ಮಲ್ಲಕಂಬ), ಸಬಿಯ ಎಸ್ (ಥ್ರೋಬಾಲ್), ಆತ್ಮಶ್ರೀ ಹೆಚ್.ಎಸ್ (ಕುಸ್ತಿ), ಧನುಶ್ ಬಾಬು (ರೋಲರ್ ಸ್ಕೇಟಿಂಗ್)

ಗ್ರಾಮೀಣ ಕ್ರೀಡಾ ರತ್ನ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಸಾಧಕರಿಗೆ ತಲಾ ರೂ.1.00 ಲಕ್ಷಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ -2017-18
ಕ್ರೀಡೆಗಳ ಅಭಿವೃದ್ದಿ ಮತ್ತು ಕ್ರೀಡಾಪಟುಗಳ ಉನ್ನತ ಸಾಧನೆಯಲ್ಲಿ ಕ್ರೀಡಾ ಪ್ರವರ್ತಕರ ಪಾತ್ರ ಮಹತ್ವದ್ದಾಗಿದೆ. ಅಂತಹ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ಪ್ರೋತ್ಸಾಹಿಸಲು 2017-18ನೇ ಸಾಲಿನಿಂದ ‘ಕರ್ನಾಟಕ ಕ್ರೀಡಾ ಪೋಷಕ’ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

2017-18ನೇ ಸಾಲಿಗೆ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾ ಪ್ರವರ್ತಕರ ಪಟ್ಟಿ
ಬ್ರಹ್ಮಾವರ ಸ್ಪೋಟ್ರ್ಸ ಕ್ಲಬ್, ಬ್ರಹ್ಮಾವರ ಉಡುಪಿ
ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ (ರಿ) ಮಿಯ್ಯಾರ್ ಉಡುಪಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ದಕ್ಷಿಣ ಕನ್ನಡ
ಜೈನ್ ವಿಶ್ವವಿದ್ಯಾಲಯ, ಬೆಂಗಳೂರು ಬೆಂಗಳೂರು
ಜೆ.ಎಸ್.ಡಬ್ಲ್ಯೂ, ಬಳ್ಳಾರಿ ಬಳ್ಳಾರಿ
ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ(ರಿ) ಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ. ಮಂಡ್ಯ
ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿ. ಚಂದರಗಿ ಬೆಳಗಾವಿ
ಕಂಠೀರವ ಕೇಸರಿ ರತನ್ ಮಠಪತಿ ಸ್ಪೋಟ್ರ್ಸ ಅಂಡ್ ಎಜ್ಯುಕೇಷನ್ ಸೊಸೈಟಿ, ಹುನ್ನೂರ, ತಾಲ್ಲೂಕು ಜಮಖಂಡಿ, ಜಿಲ್ಲಾ ಬಾಗಲಕೋಟ ಬಾಗಲಕೋಟ
ಕೃಷ್ಣಾ ತೀರಾ ರೈತ ಸಂಘ (ರಿ), ಜಮಖಂಡಿ, ಜಿಲ್ಲಾ ಬಾಗಲಕೋಟ ಬಾಗಲಕೋಟ
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು ಮಂಡ್ಯ. ಮಂಡ್ಯ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಪ್ರವರ್ತಕರಿಗೆ ತಲಾ ರೂ.5.00 ಲಕ್ಷಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

Comments are closed.