ರಾಷ್ಟ್ರೀಯ

ಮೋದಿ ಶ್ರೀರಾಮ, ಮುಲಾಯಂ ರಾವಣ, ಮಾಯಾವತಿ ಶೂರ್ಪನಖಿ: ಬಿಜೆಪಿ ಸಚಿವ

Pinterest LinkedIn Tumblr


ಲಖನೌ: ಸಮಾಜ ವಾದಿ ಪಾರ್ಟಿಯೊಂದಿಗೆ ಕೈಜೋಡಿಸಲು ಮುಂದಾಗಿರುವ ಬಹುಜನ ಸಮಾಜ ಪಾರ್ಟಿ ವಿರುದ್ಧ ಉತ್ತರ ಪ್ರದೇಶ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಉತ್ತರ ಪ್ರದೇಶ ನಾಗರಿಕ ವಿಮಾನಯಾನ ಸಚಿವ ನಂದ ಗೋಪಾಲ್ ಗುಪ್ತಾ, ಮುಲಾಯಂ ಸಿಂಗ್‌ ಓರ್ವ ಕಲಿಯುಗದ ರಾವಣನಂತೆ, ಇವರೊಂದಗೆ ಕೈಜೋಡಿಸಲು ಮುಂದಾಗಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿವರು ರಾವಣನ ಸೋದರಿ ಶೂರ್ಪನಖಿ ಎಂದು ಹೇಳಿದ್ದಾರೆ.

‘ಪ್ರಧಾನಿಯವರು ರಾಮ ದೇವರಂತೆ ಕಾಣುತ್ತಿದ್ದು, ಉ.ಪ್ರದೇಶ ಮುಖ್ಯಮಂತ್ರಿ ಹನುಮಂತನಂತಿದ್ದಾರೆ ಎಂದಿರುವ ಗುಪ್ತಾ, ಎಸ್‌ಪಿ ನಾಯಕ ಶಿವಪಾಲ್‌ ಯಾಧವ್‌ ಕುಂಭಕರ್ಣನಂತಿದ್ದಾರೆ. ಅಖಿಲೇಶ್‌ ಯಾದವ್‌ ಮೇಘನಾದನಾದರೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಾರೀಚ ಎಂದು ವಿಶೇಷ ಪಟ್ಟ ನೀಡಿದ್ದಾರೆ.

ಈ ಹೇಳಿಕೆ ಬಳಿಕ ಮತ್ತೊಬ್ಬ ಸಚಿವ ಸಿದ್ಧಾರ್ಥನಾಥ್‌ ಸಿಂಗ್ ಈ ಮೈತ್ರಿ ವಿರುದ್ಧ ತಿರುಗಿಬಿದ್ದಿದ್ದು, ಇವಿಎಂ ಎಂದರೆ ಎಲ್ಲಾ ವೋಟ್‌ ಮೋದಿಗೆ ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ಮೈತ್ರಿಗಳು ಬಂದರೂ ನಮ್ಮ ಪಕ್ಷ ಗೆಲ್ಲುವುದನ್ನು ತಪ್ಪಿಸಲು ಅಸಾಧ್ಯ ಎಂದು ನುಡಿದಿದ್ದಾರೆ.

ಹಾವು ಮತ್ತು ಮುಂಗುಸಿ ನಡುವೆ ಎಷ್ಟೇ ವೈರತ್ವ ಇದ್ದರೂ ನೆರೆ ಪ್ರವಾಹ ಬಂದಾಗ ತಮ್ಮ ಜೀವ ಉಳಿಸಿಕೊಳ್ಳಲು ಒಂದೇ ಮರದ ಕೊಂಬೆಯಲ್ಲಿ ನೇತಾಡುತ್ತಿದ್ದವು ಎಂದು ಬಾಲ್ಯದಲ್ಲಿ ಹಿರಿಯರು ಹೇಳುತ್ತಿದ್ದ ಕಥೆ ಬಿಎಸ್‌ಪಿ ಹಾಗೂ ಎಸ್‌ಪಿಯನ್ನು ಕಂಡಾಗ ನೆನಪಾಗುತ್ತವೆ ಎಂಬುದಾಗಿ ಮಾಜಿ ಬಿಜೆಪಿ ಅಧ್ಯಕ್ಷ ಲಕ್ಷ್ಮಿಕಾಂತ್‌ ಬಾಜಪೈ ಹೇಳಿದ್ದಾರೆ.

Comments are closed.