ಜೋಹಾನ್ಸ್ ಬರ್ಗ್: ಜಲಕ್ಷಾಮ ಪರಿಸ್ಥಿತಿಯನ್ನು ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಕೇಪ್ಟೌನ್ ನಗರಕ್ಕೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಭಾರತ ಕ್ರಿಕೆಟ್ ತಂಡ ನೆರವಾಗಿದೆ.
ಕೇಪ್ಟೌನ್ ನಲ್ಲಿ ನೀರಿನ ಬಾಟಲ್ ಹಾಗೂ ಕೊಳವೆ ಬಾವಿ ತೋಡಿಸಲು ಕೊಹ್ಲಿ ಹಾಗೂ ತಂಡ ಗಿಫ್ಟ್ ಆಫ್ ಗೀವರ್ಸ್ ಪ್ರತಿಷ್ಠಾನಕ್ಕೆ ರೂ. 5.5 ಲಕ್ಷ ಹಣ ಸಹಾಯ ಮಾಡಿದೆ.
ಕಳೆದ ತಿಂಗಳು ಕೇಪ್ಟೌನ್ ನಿವಾಸಿಗಳಿಗೆ ದಿನಕ್ಕೆ ಕೇವಲ 50 ಲೀಟರ್ ನೀರು ಮಾತ್ರ ಬಳಕೆ ಮಾಡಲು ನಗರದ ಆಯುಕ್ತರು ಕರೆ ನೀಡಿದ್ದರು.
ಕೇಪ್ಟೌನ್ ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ನಡೆದ ಪಂದ್ಯವೊಂದರ ವೇಳೆ ಟೀಂ ಇಂಡಿಯಾದ ಆಟಗಾರರಿಗೂ 2 ನಿಮಿಷಕ್ಕಿಂತ ಹೆಚ್ಚು ಸ್ನಾನ ಮಾಡದಂತೆ ಮನವಿ ಮಾಡಲಾಗಿತ್ತು. ನಗರದಲ್ಲಿ ನೀರಿನ ಕೊರತೆ ಇರುವುದರಿಂದ ಅಲ್ಲಿನ ನಿವಾಸಿಗಳು ನೀರನ್ನು ಮಿತವಾಗಿ ಬಳಸುತ್ತಿದ್ದಾರೆ.
Comments are closed.