ಮನೋರಂಜನೆ

ಧನುಶ್ರೀ ಬಿಗ್ ಬಾಸ್ ಮನೆಯಿಂದ ಹೊರಬರುವಾಗ ರಘು ಗೌಡಗೆ ನೀಡಿದ ಸೂಪರ್ ಗಿಫ್ಟ್‌ ಏನು ಗೊತ್ತೇ…?

Pinterest LinkedIn Tumblr

ಬಿಗ್ ಬಾಸ್ ಕನ್ನಡ ಸೀಸನ್‌ 8ರ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ‘ಟಿಕ್ ಟಾಕ್ ಸ್ಟಾರ್’ ಧನುಶ್ರೀ ಮನೆಯಿಂದ ಒಂದೇ ವಾರಕ್ಕೆ ಹೊರಗೆ ಬಂದಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಧನುಶ್ರೀ, ನಿರ್ಮಲಾ ಚೆನ್ನಪ್ಪ, ರಘು ಗೌಡ ಹೆಸರು ನಾಮಿನೇಟ್ ಆಗಿದ್ದವು. ಈ ಮೂವರಲ್ಲಿ ಯಾರು ಹೊರಗೆ ಬರುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಇನ್ನು, ಮನೆಯಿಂದ ಹೊರಬರುವಾಗ ಧನುಶ್ರೀ, ರಘು ಗೌಡಗೆ ಒಂದು ಸೂಪರ್ ಗಿಫ್ಟ್‌ ನೀಡಿದ್ದಾರೆ! ಅದೇನು ಅನ್ನೋದರ ಮಾಹಿತಿ ಇಲ್ಲಿದೆ.

ಧನುಶ್ರೀ ಮನೆಯಿಂದ ಹೊರಗೆ ಬರಲು ಅಣಿಯಾಗುತ್ತಿದ್ದಾಗ, ಬಿಗ್ ಬಾಸ್ ಒಂದು ಸ್ಪೆಷಲ್ ಅಧಿಕಾರವನ್ನು ಧನುಶ್ರೀಗೆ ನೀಡಿದರು. ‘ಈ ಬಾರಿ ನಾಮಿನೇಷನಲ್ ಪ್ರಕ್ರಿಯೆಯಿಂದ ಒಬ್ಬ ಸ್ಪರ್ಧಿಯನ್ನು ಸೇಫ್ ಮಾಡಬಹುದು. ನೀವು ಯಾರನ್ನು ಸೇಫ್ ಮಾಡಲು ಬಯಸುತ್ತೀರಿ’ ಎಂದು. ಅದಕ್ಕೆ ‘ರಘು ಗೌಡ’ ಹೆಸರನ್ನು ಧನುಶ್ರೀ ಹೇಳಿದರು. ಆ ಮೂಲಕ ರಘು ಅವರನ್ನು ಈ ವಾರ ಎಲಿಮಿನೇಷನ್‌ನಿಂದ ಪಾರು ಮಾಡಿದ್ದಾರೆ.

ಈ ಬಗ್ಗೆ ಧನುಶ್ರೀಗೆ ಬಿಗ್ ಬಾಸ್ ಕಡೆಯಿಂದ ಪ್ರಶ್ನೆ ಬಂತು! ಅದಕ್ಕೆ ಉತ್ತರ ನೀಡಿದ ಧನುಶ್ರೀ, ‘ರಘು ಗೌಡ ಅವರು ಸಾಮರ್ಥ್ಯವನ್ನು ಏನೆಂಬುದನ್ನು ಖಂಡಿತ ಸಾಬೀತುಪಡಿಸಿಕೊಳ್ಳುತ್ತಾರೆ. ಆ ನಂಬಿಕೆ ನನಗೆ ಇದೆ. ಅದಕ್ಕಾಗಿ ಅವರಿಗೆ ಕಾಲಾವಕಾಶ ಬೇಕು’ ಎಂದು ಹೇಳಿದರು. ಆ ಮೂಲಕ ನಾನೇಕೆ ರಘು ಗೌಡರನ್ನು ಸೇಫ್ ಮಾಡಿದೆ ಎಂಬುದಕ್ಕೆ ಸೂಕ್ತ ಕಾರಣ ನೀಡಿದರು. ಇನ್ನು, ಮನೆಯಿಂದ ಹೊರಬಂದ ಧನುಶ್ರೀಗೆ ಉಳಿದ ಸದಸ್ಯರು ಆತ್ಮೀಯವಾಗಿ ಬೀಳ್ಕೊಟ್ಟರು.

ಫೆ.28ರಂದು ಅದ್ದೂರಿಯಾಗಿ ಶುರುವಾದ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಒಟ್ಟು 17 ಜನ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದರು. ಧನುಶ್ರೀ ಅವರೇ ಮೊದಲ ಸ್ಪರ್ಧಿಯಾಗಿ ಮನೆ ಸೇರಿಕೊಂಡಿದ್ದರು. ಇದೀಗ ಅವರೇ ಮೊದಲ ಎಲಿಮಿನೇಟ್ ಸ್ಪರ್ಧಿಯಾಗಿದ್ದಾರೆ. ಸದ್ಯ ಮನೆಯೊಳಗೆ 16 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ಈ ವಾರವೂ ಶಮಂತ್ ಬ್ರೊ ಗೌಡ ಅವರೇ ಮನೆಯ ಕ್ಯಾಪ್ಟನ್ ಆಗಿ ಕಂಟಿನ್ಯೂ ಆಗಿದ್ದಾರೆ.

Comments are closed.