ಮನೋರಂಜನೆ

ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ರಾತ್ರೋ ರಾತ್ರಿ ಪ್ರಸಿದ್ಧಿ ಪಡೆದು ಕೊನೆಗೆ ಏನಾದರೂ ಗೊತ್ತಾ?

Pinterest LinkedIn Tumblr


ರೇಲ್ವೇ ಪ್ಲಾಟ್ ಫಾರಂನಲ್ಲಿ ಭಿಕ್ಷೆ ಬೇಡುತ್ತಿದ್ದ ಈ ಮಹಿಳೆಯ ಹಾಡನ್ನು ಕೇಳಿದ ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ 2019 ರಲ್ಲಿ ಬೆಳಕಿಗೆ ತಂದು 3 ಹಾಡುಗಳನ್ನೂ ಹಾಡಿಸಿದ್ದರು. ಆನಂತರ ಅವರು ಏನಾದ್ರು ಎಲ್ಲಿ ಹೋದರು ಎನ್ನುವುದು ತಿಳಿದುಬಂದಿರಲಿಲ್ಲ.

ಒಂದೇ ರಾತ್ರಿಯಲ್ಲಿ ಪಾಪ್ಯುಲರ್ ಆದ ರಾನು ಮಂಡಲ್ ಬಾಲಿವುಡ್ ನಲ್ಲಿ ಎಲ್ಲಾ ಕಡೆಗೂ ಇವರ ಹೆಸರೇ ಕೇಳಿ ಬರ್ತಿತ್ತು. ಸ್ಲಂ ನಲ್ಲಿ ವಾಸಿಸುತ್ತಿದ್ದ ಇವರಿಗೆ ವಾಸಿಸಲು ಒಂದು ಮನೆಯೂ ಸಿಕ್ಕಿತ್ತು. ಇವರು ಕೆಲವು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡರು.

ರಾನು ಮಂಡಲ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತು. ಅವರು ಶಾಪಿಂಗ್ ಗೆ ಹೋದಾಗ ಅವರನ್ನು ನೋಡಲು ಬಂದ ಅಭಿಮಾನಿಗಳಿಗೆ ತನ್ನನ್ನು ಮುಟ್ಟಬೇಡಿ ಅಂತ ದರ್ಪದಿಂದ ಹೇಳಿದ್ದೂ ಸಹ ವೈರಲ್ ಆಯಿತು. ಆಕೆಯ ವರ್ತನೆಗೆ ಆಕೆಯ ಅಭಿಮಾನಿಗಳು ಮತ್ತು ಇತರರಿಂದ ಟೀಕೆಗಳನ್ನು ಎದುರಿಸಬೇಕಾಯಿತು. ಸೆಲೆಬ್ರಿಟಿಗಳ ವರ್ತನೆಗೆ ಆಕೆ ಶೀಘ್ರವಾಗಿ ಖ್ಯಾತಿಯ ಏರಿಕೆಗೆ ಕಾರಣ ಎಂದು ಹಲವರು ಆರೋಪಿಸಿದರು. ಇವರೆಷ್ಟು ಪ್ರಸಿದ್ಧರಾಗಿದ್ದರೆಂದರೆ ಮೈಸೂರಿನ 2019 ರ ಯುವ ದಸರಾಕ್ಕೂ ಇವರನ್ನು ಆಹ್ವಾನಿಸಲಾಯಿತು.

ಆದರೆ ಕಾಲ ಯಾವತ್ತೂ ಒಂದೇ ತರಹ ಇರುವುದಿಲ್ಲ ಎನ್ನುವುದಕ್ಕೆ ರಾನು ಸಾಕ್ಷಿಯಾದರು. ಉನ್ನತ ಮಟ್ಟಕ್ಕೆ ಹೋಗುತ್ತಿದ್ದಂತೆ, ಇವರ ಜೀವನದಲ್ಲಿ ಇಳಿಮುಖವೂ ಪ್ರಾರಂಭವಾಯಿತು. ಇಡಿ ವಿಶ್ವಕ್ಕೆ ಮಹಾಮಾರಿಯಾದ ಕೊರೋನಾ ಭಾರತಕ್ಕೂ ಅಪ್ಪಳಿಸುತ್ತಿದಂತೆ ಇವರನ್ನು ಕೇಳುವವರೇ ಇಲ್ಲದಂತಾಯ್ತು. ಜನರ ಮನಸ್ಸಿನಿಂದ ಇವರೂ ಮರೆಯಾದರು. ಆರ್ಥಿಕ ಮುಗ್ಗಟ್ಟು ಕಾಡತೊಡಗಿತು. ತಾನಿದ್ದ ಮನೆಯನ್ನು ತೊರೆದು ಅವರ ಹಳೆಯ ಮನೆಗೆ ಹೋದರು ಎಂದು ಬರದಿಯಾಗಿದೆ.

ರಾನು ಕೆಲವು ಬಡ ಜನರಿಗೆ ಸಹಾಯ ಮಾಡುವ ಯೂಟ್ಯೂಬ್ ವೀಡಿಯೊದಲ್ಲಿ ಕಾಣಿಸಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ರಾನು ಮಂಡಲ್ ಅವರನ್ನು ಮೊದಲು ಗುರುತಿಸಿದ ಅತಿಂದ್ರ ಚಕ್ರವರ್ತಿ, ಕೆಲವು ನಿರ್ಗತಿಕರನ್ನು ರಾಣುವಿನ ಮನೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. ಸಹಾಯದ ಹಣದ ಜೊತೆಗೆ, ರಾಣು ಅವರಿಂದ ಅಕ್ಕಿ ಮತ್ತು ಬೇಳೆಕಾಳುಗಳು ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಿದರು.

ಆದರೆ ಈಗ ವರದಿಗಳು ಹೇಳುವಂತೆ ರಾನು ಮಂಡಲ್ ತೀರಾ ಕಳಪೆ ಸ್ಥಿತಿಯಲ್ಲಿದ್ದಾರೆ ಮತ್ತು ಸ್ವತಃ ಸಹಾಯಕ್ಕಾಗಿ ಕೈ ಚಾಚುತ್ತಿದ್ದಾರೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲೂ ಕೊಡೆ ಹಿಡಿದನಂತೆ ಅನ್ನುವ ಮಾತು ರಾನು ಮಂಡಲ್ ರಿಗೆ ಸರಿಯಾಗಿ ಅನ್ವಯವಾಗಬಹುದು.

Comments are closed.