ಮನೋರಂಜನೆ

ಮೇಘನಾ ಸರ್ಜಾ ಪುತ್ರನಿಗೆ ಉತ್ತರ ಕರ್ನಾಟಕದಿಂದ ವಿಶೇಷ ಉಡುಗೊರೆ

Pinterest LinkedIn Tumblr


ಬೆಂಗಳೂರು: ನಟಿ ಮೇಘನಾರಾಜ್ ಈಗ ಗಂಡು ಮಗುವಿಗೆ ತಾಯಿಯಾಗಿದ್ದಾಳೆ. ಇದು ಅವರ ದುಃಖವನ್ನು ಮರಸಿ ಸಂತಸವನ್ನು ತಂದಿದೆ ಎಂದರೂ ತಪ್ಪಾಗಲಾರದು. ಈ ಆ ಸಂತೋಷಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ಮಗುವಿಗೆ ಉತ್ತರ ಕರ್ನಾಟಕದ ಮಂದಿಯಿಂದ ವಿಶೇಷ ಉಡುಗೊರೆ ಬರಲಿ. ಇದೇನು ಅಂತೀರಾ?

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಪುತ್ರನಿಗೆ ಉತ್ತರ ಕರ್ನಾಟಕದಿಂದ ತೊಟ್ಟಿಲು ಉಡುಗೂರೆಯಾಗಿ ಬರಲಿದೆ. ಮಕ್ಕಳ ತೊಟ್ಟಿಲುಗಳಿಗೆ ಫೇಮಸ್​ ಆಗಿರೋ ಧಾರವಾಡ ಜಿಲ್ಲೆಯ ಕಲಘಟಗಿಯ ಕಲಾವಿದರು ಮರಿ ಚಿರಂಜೀವಿ ಸರ್ಜಾಗಾಗಿ ತೊಟ್ಟಿಲು ತಯಾರಿ ಮಾಡಿದ್ದಾರೆ. ಇದೇ ನವೆಂಬರ್​11ಕ್ಕೆ ಮೇಘನಾ ಮನೆಗೆ ಆ ತೊಟ್ಟಿಲನ್ನ ತಲುಪಿಸಲಿದ್ದಾರೆ. ಹಾವೇರಿ ಜಿಲ್ಲೆ ಗುತ್ತಲದ ಸ್ತ್ರೀ ಶಕ್ತಿ ಸೇವಾ ಸಂಸ್ಥೆ ಅಧ್ಯಕ್ಷೆ ವನಿತಾ ಸ್ವಯಂಪ್ರೇರಿತರಾಗಿ ತಮ್ಮ ಸ್ವಂತ ಹಣದಿಂದ ತೊಟ್ಟಿಲು ಮಾಡಿಸಿದ್ದು, ಸರ್ಜಾ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಿದ್ದಾರೆ.

ಎರಡ್ಮೂರು ತಲೆಮಾರಿನಿಂದ ತೊಟ್ಟಿಲು ಮಾಡುವ ಕಾಯಕ ಮಾಡುವ ಕುಟುಂಬದ ಮಾರುತಿ ಬಡಿಗೇರ, ತಿಪ್ಪಣ್ಣ ಬಡಿಗೇರ, ಹರೀಶ, ಶ್ರೀಶೈಲ ಬಡಿಗೇರ ಚಿರು ಪುತ್ರನಿಗಾಗಿ ಒಂದೂವರೆ ತಿಂಗಳಲ್ಲಿ ಈ ತೊಟ್ಟಿಲು ತಯಾರಿಸಿದ್ದಾರೆ.

Comments are closed.