ಮನೋರಂಜನೆ

ರಾಮಾಯಣ ಕುರಿತು ಈ ಪ್ರಶ್ನೆಗೆ ಉತ್ತರಿಸಿದ್ದಕ್ಕೆ 6.4 ಲಕ್ಷ ರೂ. ಬಹುಮಾನ!

Pinterest LinkedIn Tumblr


ಮುಂಬೈ: ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಭ್‌ ಬಚ್ಚನ್‌ ಅವರು ರಾಮಾಯಣದ ಬಗ್ಗೆ ಒಂದು ಪ್ರಶ್ನೆಗೆ ಉತ್ತರಿಸಿದ್ದಕ್ಕೆ 6.4 ಲಕ್ಷ ರೂ. ಜಯಿಸಿದ ರಾಜಸ್ಥಾನ ಮೂಲದ ವ್ಯಕ್ತಿ.

ಕಿರುತೆರೆಯ ಫೇಮಸ್‌ ಕಾರ್ಯಕ್ರಮಗಳಲ್ಲಿ ಒಂದಾದ ‘ಕೌನ್‌ ಬನೇಗಾ ಕರೋಡ್‌ಪತಿ’ ಎಲ್ಲ ವಯೋಮಾನದವರಿಗೂ ಇಷ್ಟ. ಜ್ಞಾನ ಹೆಚ್ಚಿಸುವ ಈ ಕಾರ್ಯಕ್ರಮವನ್ನು ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುತ್ತಾರೆ. ಅಮಿತಾಭ್‌ ಬಚ್ಚನ್‌ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಶೋ ಇತ್ತೀಚೆಗೆ 12ನೇ ಸೀಸನ್ ಅನ್ನು ಅದ್ದೂರಿಯಾಗಿ ಆರಂಭಿಸಿದೆ.

ಈ ಶೋನಿಂದ ಅನೇಕರಿಗೆ ಹಣ ಮತ್ತು ಹೆಸರು ಸಿಕ್ಕಿದೆ. ಅದೇ ರೀತಿ ರಾಜಸ್ಥಾನ ಮೂಲದ ರಘುನಾಥ್ ರಾಮ್‌ ಎಂಬುವವರು ಇತ್ತೀಚೆಗೆ ಇದರಲ್ಲಿ ಭಾಗವಹಿಸಿದ್ದರು. ಮೂಲತಃ ಬಡಗಿ ವೃತ್ತಿಯನ್ನು ಮಾಡುತ್ತಿರುವ ಅವರಿಗೆ ಬಡತನದ ಕಾರಣದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕೌನ್‌ ಬನೇಗಾ ಕರೋಡ್‌ಪತಿ ಮೂಲಕ ತಮ್ಮ ಜ್ಞಾನ ಪ್ರದರ್ಶಿಸಿ ಬಹುಮಾನ ಗೆದ್ದಿದ್ದಾರೆ.

ಈ ಕಾರ್ಯಕ್ರಮದಲ್ಲಿ 6.4 ಲಕ್ಷ ರೂ.ಗಳನ್ನು ಅವರು ಗೆದ್ದಿದ್ದಾರೆ. ಅಮಿತಾಭ್‌ ಬಚ್ಚನ್‌ ಅವರು ರಾಮಾಯಣ ಕುರಿತು ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವ ಮೂಲಕ ರಘುನಾಥ್ ಈ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ರಾಮಾಯಣದಲ್ಲಿ ರಾವಣನ ಖಡ್ಗದ ಹೆಸರು ಏನು?’. ಇದು ಅಮಿತಾಭ್‌ ಕೇಳಿದ ಪ್ರಶ್ನೆ. ಅದಕ್ಕೆ ಉತ್ತರ: ಚಂದ್ರಹಾಸ. ಕಿಂಚಿತ್ತೂ ತಡಮಾಡದೆ ರಘುನಾಥ್ ಅವರು ಈ ಸರಿಯಾದ ಉತ್ತರವನ್ನು ನೀಡಿದರು.

ಕೊರೊನಾ ವೈರಸ್‌ನಿಂದ ನಟ ಅಮಿತಾಭ್‌ ಬಚ್ಚನ್‌ ಕೂಡ ಕಾಟ ಅನುಭವಿಸಿದ್ದರು. ಕೋವಿಡ್‌-19ಗೆ ಒಳಗಾಗಿದ್ದ ಅವರು ಹಲವು ದಿನಗಳ ಕಾಲ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಕಡೆಗೂ ಗುಣಮುಖರಾದರು. ಕೆಲವೇ ದಿನಗಳ ವಿಶ್ರಾಂತಿ ಬಳಿಕ ಅವರು ಮತ್ತೆ ಕೆಲಸಕ್ಕೆ ಮರಳಿದರು. ಈಗ ಯಶಸ್ವಿಯಾಗಿ ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಸಿನಿಮಾಗಳ ಶೂಟಿಂಗ್‌ನಲ್ಲೂ ಅವರು ತೊಡಗಿಕೊಂಡಿದ್ದಾರೆ.

Comments are closed.