ಚಂದನವನದಲ್ಲಿ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ಸ್ಫೋಟಕ ಡ್ರಗ್ ಮಾಫಿಯಾ ಬಗ್ಗೆ ಆರೋಪ ಪ್ರತ್ಯಾರೋಪಗಳು ಜೋರಾಗಿ ಚರ್ಚೆಯಾಗುತ್ತಿವೆ.
ಇತ್ತೀಚೆಗೆ ಸಾವನ್ನಪ್ಪಿದ ಯುವ ನಟನ ಸಾವಿಗೂ ಡ್ರಗ್ಸ್ ಕಾರಣವಾಗಿತ್ತು ಎಂದು ಇಂದ್ರಜಿತ್ ಪರೋಕ್ಷವಾಗಿ ಚಿರಂಜೀವಿ ಮೇಲೆ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಚಿರು ಸರ್ಜಾ ಮಾವ ಸುಂದರ್ ರಾಜ್ ನಮ್ಮ ಕುಟುಂಬಕ್ಕೆ ಮತ್ತಷ್ಟು ನೋವು ಕೊಡಬೇಡಿ, ಅಂತಹ ಯಾವುದೇ ದುರಾಭ್ಯಾಸಗಳೂ ಚಿರುಗೆ ಇರಲಿಲ್ಲ ಎಂದು ಹೇಳಿದ್ದಾರೆ.
ಸಿನಿಮಾ ವಿತರಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಚಿರು ನನಗೆ ಬಹಳ ಆತ್ಮೀಯ ವ್ಯಕ್ತಿ, ಅವನ ಅಗಲಿಕೆಯಿಂದ ನಾವು ಬಹಳ ನೋವಿನಲ್ಲಿದ್ದೇವೆ. ಚಿರು ಯಾವುದೇ ಡ್ರಗ್ ನಿಂದ ಸಾವನಪ್ಪಿಲ್ಲ ಎಂದು ನಾನು ಸ್ಪಷ್ಟ ಮಾಹಿತಿಯನ್ನು ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ಅಥವಾ ನೆಗೆಟಿವ್ ಮಾತ್ರ ಮುಖ್ಯವಾಗಿತ್ತು ನಮಗೆ, ಚಿರು ಹಾರ್ಟ್ ಅಟ್ಯಾಕ್ ಆಗಿದ್ರಿಂದ ಪೋಸ್ಟ್ ಮಾರ್ಟಂ ಬೇಡ ಎಂದು ಅಲ್ಲಿನ ವೈದ್ಯರು ಸ್ಪಷ್ಟವಾಗಿ ಹೇಳಿದ್ದರಿಂದ ಪೋಸ್ಟ್ ಮಾರ್ಟಂ ಮಾಡಿಸಲಿಲ್ಲ ಎಂದು ತಿಳಿಸಿದರು.
ಇಂದ್ರಜಿತ್ ಈ ರೀತಿ ಆರೋಪ ಮಾಡಿದ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿ ಶರ್ಮಿಳಾ ಮಾಂಡ್ರೆಗೆ ಇತ್ತೀಚೆಗೆ ಆಗಿದ್ದ ಅಪಘಾತ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಲಾಕ್ ಡೌನ್ ವೇಳೆ ಶರ್ಮಿಳಾ ಮಧ್ಯರಾತ್ರಿಯಲ್ಲಿ ಹೊರಗೆ ಹೋಗಿ ಕಾರು ಅಪಘಾತ ಮಾಡಿದ್ರು. ಆ ವೇಳೆ ಅವರ ಜತೆಗೆ ಡ್ರಗ್ ಪೆಡ್ಲರ್ ಇದ್ದ . ಇದರ ಬಗ್ಗೆ ಯಾಕೆ ತನಿಖೆ ಮಾಡಿಲ್ಲ ಎಂದು ತಿರುಗೇಟು ಕೊಟ್ಟಿದ್ರು.
ಶರ್ಮಿಳಾ ತಮ್ಮ ಮೇಲೆ ಆರೋಪ ಬರುತ್ತಿದ್ದಂತೆ ವಿಡಿಯೋ ಸಂದೇಶ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಅಂಥಾ ಯಾವುದೇ ಚಟುವಟಿಕೆಯಲ್ಲಿ ಭಾಗಿ ಆಗಿಲ್ಲ, ನಮ್ಮ ಕುಟುಂಬ ಉತ್ತಮ ಹಿನ್ನೆಲೆಯಿಂದ ಬಂದಿದೆ . ನಮಗೆ ಯಾರಿಗೂ ಇಂತಹ ಅಭ್ಯಾಸಗಳಿಲ್ಲ. ನನ್ನ ಮೇಲೆ ಆರೋಪ ಮಾಡಿರುವುದು ನೋಡಿದರೆ ನಿಜಕ್ಕೂ ಶಾಕಿಂಗ್ ಎಂದಿದ್ದಾರೆ.
Comments are closed.