ಮನೋರಂಜನೆ

ಮಾಡಿದ ತಪ್ಪನ್ನೇ ಮತ್ತೆ ಮಾಡುವುದಿಲ್ಲ; ನಟಿ ಶುಭಾ ಪೂಂಜಾ

Pinterest LinkedIn Tumblr


ನಟಿ ಶುಭಾ ಪೂಂಜಾ ಲಾಕ್ ಡೌನ್ ಟೈಮ್‌ನಲ್ಲಿ ಗಿಡ ನೆಟ್ಟು, ಇನ್ನಿತರ ಕೆಲಸಗಳಲ್ಲಿ ಸಮಯ ಕಳೆದಿದ್ದಾರೆ. ಕೆಲಸದ ನಿಮಿತ್ತ ಅವರು ಮತ್ತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ‘ತ್ರಿದೇವಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಇದು ಅವರ ಮೊದಲ ಚಿತ್ರವಾಗಿದೆ.

ಮಾಧ್ಯಮವೊಂದರ ಜೊತೆ ಮಾತನಾಡಿರುವ ಶುಭಾ ಪೂಂಜಾ, ನಾನು ಕೂಡ ಕೃಷಿ ಮಾಡಬಲ್ಲೆ ಎಂದು ತಿಳಿಯಿತು. ಪ್ರಕೃತಿಯೊಂದಿಗೆ ಸಮಯ ಕಳೆಯುವುದು ನಿಜಕ್ಕೂ ತುಂಬ ಒಳ್ಳೆಯ ವಿಚಾರ. ಹಳ್ಳಿಯಲ್ಲಿರೋದು, ಬಾವಿಯಿಂದ ನೀರು ಎತ್ತುವುದು, ಹೊಲದಲ್ಲಿ ಕೆಲಸ ಮಾಡುವುದೆಲ್ಲ ನನಗೆ ಹೊಸ ವಿಚಾರ ಎಂದಿದ್ದಾರೆ.

‘ರೈಮ್ಸ್’ ಚಿತ್ರದಲ್ಲಿ ನಾನು ಟಿವಿ ವಾಹಿನಿಯ ನಿರೂಪಕಿ ಕಾರ್ಯ ಮಾಡಿದ್ದೇನೆ. ಇದು ಇನ್ವಿಸ್ಟಿಗೇಶನ್ ಥ್ರಿಲ್ಲರ್ ಚಿತ್ರ. ಈ ಸಿನಿಮಾ ನಿಜಕ್ಕೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುತ್ತಿದೆ. ನಿರ್ದೇಶಕ ಅಶ್ವಿನ್ ಮಾಥ್ಯೂ ಜೊತೆಗೆ ಕಲಾವಿದರ ಆಯ್ಕೆ, ಕಾಸ್ಟ್ಯೂಮ್, ಸ್ಥಳ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ದೇನೆ. ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ‘ತ್ರಿದೇವಿ’ ನನ್ನ ಮೊದಲ ಚಿತ್ರ. ಇದನ್ನು ನಾನು ಎಂಜಾಯ್ ಮಾಡಿದ್ದೇನೆ ಎಂದು ಶುಭಾ ಹೇಳಿದ್ದಾರೆ.

ನನ್ನ ಸಿನಿಮಾ ಜೀವನದಲ್ಲಿ ಏಳು-ಬೀಳು ಎರಡೂ ಇವೆ. ನನ್ನ ತಪ್ಪುಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ. ಈಗ ನನ್ನ ಸಿನಿಮಾಗಳಲ್ಲಿ ನಾನು ಮತ್ತೆ ಈ ರೀತಿ ತಪ್ಪು ಮಾಡೋದಿಲ್ಲ ಎಂದುಕೊಳ್ಳುತ್ತೇನೆ. ಕಾಂಟ್ರವರ್ಸಿಗಳಿಗೆ ನಾನು ತುಂಬ ಫೇವರಿಟ್ ಎಂದು ಭಾವಿಸುತ್ತಿದ್ದೆ. ನನ್ನ ಬಗ್ಗೆ ಗಾಸಿಪ್ ಹಬ್ಬಿದಾಗ ನಾನು ತುಂಬ ಬೇಸರ ಮಾಡಿಕೊಳ್ಳುತ್ತಿದ್ದೆ. ಈಗ ಇದರ ಜೊತೆಗೆ ನಾನು ಹೇಗೆ ಡೀಲ್ ಮಾಡಬೇಕು ಎಂದು ಕಲಿತಿದ್ದೇನೆ. ನಾವು ಸೆಲೆಬ್ರಿಟಿಯಾಗಿದ್ದಾಗ ಜನರು ನಮ್ಮ ಬಗ್ಗೆ ಬರೆಯುತ್ತಾರೆ. ಅವರು ಅವರ ಕೆಲಸ ಮಾಡುತ್ತಾರೆ. ನಾನು ಅವರನ್ನು ದೂಷಿಸೋದಿಲ್ಲ. ನಾನು ಇದನ್ನು ಹೇಗೆ ಸ್ವೀಕರಿಸಬೇಕು ಎಂದು ಕಲಿಯಬೇಕಿದೆ ಎಂದಿದ್ದಾರೆ ಶುಭಾ ಪೂಂಜಾ

Comments are closed.