ಮನೋರಂಜನೆ

ಚಿತ್ರರಂಗವನ್ನು ತೊರೆದಿದ್ದಕ್ಕೆ ಶಾಕಿಂಗ್ ಕಾರಣ ನೀಡಿದ ನಟಿ ಕಲ್ಯಾಣಿ!

Pinterest LinkedIn Tumblr


ಸಿನಿ ಪ್ರಪಂಚದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಿರೋದು ಹಲವರಿಗೆ ಗೊತ್ತಿರುವ ಸಂಗತಿ. ನಟ ಶರತ್‌ಕುಮಾರ್ ಪುತ್ರಿ ವರಲಕ್ಷ್ಮೀಗೂ ಕೂಡ ಇದರ ಅನುಭವ ಆಗಿತ್ತು ಎಂದು ಅವರೇ ಈ ಹಿಂದೆ ಹೇಳಿದ್ದರು. ಬ್ಯಾಕ್‌ಗ್ರೌಂಡ್ ಇಲ್ಲದೆ ಬಂದರೂ, ಸಿನಿಮಾದಲ್ಲಿ ಗಾಡ್ ಫಾದರ್ ಇದ್ದರೂ ಕೂಡ ಈ ರೀತಿ ಆಗೋದಿದೆ. ಅದರ ಜೊತೆಗೆ ಹಲವರಿಗೆ ಈ ರಂಗದಲ್ಲೂ ಯಾವುದೇ ಕೆಟ್ಟ ಅನುಭವ ಕೂಡ ಆಗಿಲ್ಲ.

ಒಮ್ಮೊಮ್ಮೆ ಲೈಂಗಿಕ ದೌರ್ಜನ್ಯದ ಪ್ರಶ್ನೆ ಎದುರಾದಾಗ ನಟಿಯರು ನಮ್ಮ ವರ್ತನೆ ಮೇಲೆ ಎಲ್ಲ ನಿರ್ಧಾರ ಆಗಿರುತ್ತದೆ, ಆಧರಿಸಿರುತ್ತದೆ ಎಂದು ಹೇಳಿಕೆ ನೀಡುತ್ತಾರೆ. ನಟಿ ಕಲ್ಯಾಣಿ ಸಿನಿಮಾ ರಂಗವನ್ನೇ ತ್ಯಜಿಸಿದರು. ಅದಕ್ಕೀಗ ಅವರು ಕಾರಣ ಕೂಡ ನೀಡಿದ್ದಾರೆ.

ಕಲ್ಯಾಣಿ ಯಾಕೆ ಸಿನಿಮಾ ರಂಗವನ್ನು ಯಾಕೆ ತೊರೆದರು?
ಪ್ರಭುದೇವ ನಟನೆಯ ‘ಅಲ್ಲಿ ತಂಡ ವಾನಂ’ ಸಿನಿಮಾದಲ್ಲಿ ಕಲ್ಯಾಣಿ ತುಂಬ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು. ಜಯಂ ರವಿ ನಟನೆಯ ‘ಜಯಂ’ ಸಿನಿಮಾದಲ್ಲಿ ಹೀರೋಯಿನ್ ತಂಗಿ ಪಾತ್ರಕ್ಕೆ ಜೀವ ತುಂಬಿದ್ದರು. ಹಲವು ಸಿನಿಮಾಗಳಲ್ಲಿ ಇವರ ನಟನೆ ನೋಡಿ ಒಳ್ಳೆಯ ಮೆಚ್ಚುಗೆ ಕೇಳಿಬಂದಿತ್ತು. ‘ರಾಮಣ್ಣ’ ಸಿನಿಮಾದಲ್ಲಿ ಕಲ್ಯಾಣಿ ನಿಜಕ್ಕೂ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇದಕ್ಕೆ ಎಆರ್‌ ಮುರಗದಾಸ್ ನಿರ್ದೇಶನ ಮಾಡಿದವರು . ವಿಜಯಕಾಂತ್ ಲೀಡ್ ಪಾತ್ರದಲ್ಲಿ ನಟಿಸಿದ್ದರು. ಇಷ್ಟೆಲ್ಲ ಹೊಗಳಿಕೆ ಪಡೆದು ಜನರಿಗೆ ಇಷ್ಟವಾಗಿದ್ದರೂ ಕೂಡ ಕಲ್ಯಾಣಿ ಯಾಕೆ ಸಿನಿಮಾ ರಂಗ ಬಿಟ್ಟರು ಎಂಬುದನ್ನು ಇತ್ತೀಚೆಗಿನ ಸಂದರ್ಶನದಲ್ಲಿ ಅವರು ರಿವೀಲ್ ಮಾಡಿದ್ದಾರೆ.

ಕಲ್ಯಾಣಿ ಈಗ ಏನು ಮಾಡುತ್ತಿದ್ದಾರೆ?
ಸಿನಿ ಜೀವನದ ಆರಂಭದಲ್ಲಿ ಪ್ರಭುದೇವ ಜೊತೆಗೆ ಕಲ್ಯಾಣಿಗೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಇವರಿಗೆ ತುಂಬ ಖುಷಿಯಿದೆಯಂತೆ. ಅತಿ ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಬೇಕು ಅಂದರೆ ಕಲ್ಯಾಣಿ ಅಡ್ಜಸ್ಟ್‌ಮೆಂಡ್ ಮಾಡಿಕೊಳ್ಳಬೇಕು ಎಂದು ಅವರು ನಟಿಸಿದ್ದಾರೆ. ಪ್ರಸ್ತುತ ಪತಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಕಲ್ಯಾಣಿಗೆ ಈ ಇಂಡಸ್ಟ್ರಿಯಲ್ಲಿರುವ ತೊಂದರೆಗಳಿಂದಾಗಿ ಹೆಚ್ಚಿನ ಸಿನಿಮಾ ಮಾಡಲಾಗಲಿಲ್ಲ ಎಂಬ ಬೇಸರವಿದೆಯಂತೆ. ಪದೇ ಪದೇ ಅಡ್ಜ್‌ಸ್ಟ್‌ಮೆಂಟ್ ವಿಚಾರವಾಗಿ ಫೋನ್ ಕರೆಗಳು ಬರುತ್ತಿರೋದಕ್ಕೆ ಬೇಸರಪಟ್ಟುಕೊಂಡು ಕಲ್ಯಾಣಿ ಕಿರುತೆರೆಯತ್ತ ಮುಖ ಮಾಡಿದರು. ನೆಮ್ಮದಿಯುತ ಜೀವನಕ್ಕಾಗಿ ಕಲ್ಯಾಣ ಸಿನಿ ಬದುಕಿನಿಂದ ದೂರ ಹೋದರು.

ಕಳೆದ ಎರಡು ವರ್ಷಗಳಿಂದ ಚಾಲ್ತಿಯಲ್ಲಿರುವ ಮೀಟೂ
ಕಲ್ಯಾಣಿಯಂತಹ ಸಾಕಷ್ಟು ನಟಿಯರು ಇಂತಹ ನೋವು ಅನುಭವಿಸಿದ್ದಾರೆ. ಇದು ಕೇವಲ ನಟಿಯರಿಗೊಂದೇ ಅಲ್ಲ, ನಟರಿಗೂ ಕೂಡ ಅನ್ವಯವಾಗುತ್ತದೆ. ಎಷ್ಟೋ ಪ್ರತಿಭೆಗಳು ಇದರಿಂದ ಮರೆಯಾಗುತ್ತಿವೆ. ಮೀಟೂ ಅಭಿಯಾನ ಕೂಡ ಕಳೆದ ಎರಡು ವರ್ಷಗಳಿಂದ ಚಾಲ್ತಿಯಲ್ಲಿದ್ದು, ಹಲವು ಕಾಮದ ಮುಖವಾಡವನ್ನು ಕಳಚಿತ್ತು. ಆದರೂ ಕೂಡ ಈ ಕೆಟ್ಟ ವ್ಯವಸ್ಥೆ ಇನ್ನೂ ನಿರ್ಮೂಲನೆಯಾಗಿಲ್ಲ.

Comments are closed.