ಮನೋರಂಜನೆ

ಚಂದನಾಗೆ ಮುತ್ತು ಕೊಟ್ಟ ನಂತರ ಭೂಮಿ ಕೆನ್ನೆಗೆ ಕಿಶನ್ ಕಿಸ್

Pinterest LinkedIn Tumblr


ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಕಿಶನ್ ಕೆಲವು ದಿನಗಳ ಹಿಂದೆ ಚಂದನಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದರು. ಆದರೆ ಈಗ ಕಿಶನ್ ಮತ್ತೊಬ್ಬ ಸ್ಪರ್ಧಿಗೆ ಮುತ್ತು ಕೊಟ್ಟಿದ್ದಾರೆ.

ಸ್ಪರ್ಧಿಗಳಾದ ಭೂಮಿ ಶೆಟ್ಟಿ, ಕಿಶನ್, ಜೈ ಜಗದೀಶ್, ಪ್ರಿಯಾಂಕಾ, ಫೃಥ್ವಿ, ರಾಜು ತಾಳಿಕೋಟೆ, ಕುರಿ ಪ್ರತಾಪ್, ಹರೀಶ್ ರಾಜ್ ಮತ್ತು ಚಂದನ್ ಆಚಾರ್ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಯಾರು ಬರುತ್ತಾರೆ ಎಂದು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಪ್ರಿಯಾಂಕಾ, ವೈಲ್ಡ್ ಕಾರ್ಡ್ ಮೂಲಕ ಹುಡುಗಿ ಬಂದರೆ ಕಿಶನ್ ಮುತ್ತು ಕೊಡಬೇಕು ಎಂದು ಹೇಳಿದ್ದಾರೆ. ಇದ್ದನ್ನೂ ಓದಿ: ಚಂದನಾ ಕೆನ್ನೆಗೆ ಮುತ್ತು ಕೊಟ್ಟ ಕಿಶನ್

ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ, ಈ ಮನೆಯಲ್ಲಿ ಎಲ್ಲಾ ಹುಡುಗಿಯರಿಗೂ ಮುತ್ತು ಕೊಟ್ಟಿದ್ದೀರಿ ಅಲ್ವಾ. ಚಂದನಾ, ಭೂಮಿ, ದೀಪಿಕಾ, ರಶ್ಮಿ, ಸುಜಾತ, ಚೈತ್ರಾ ವಾಸುದೇವನ್ ಹಾಗೂ ಚೈತ್ರಾ ಕೊಟ್ಟೂರು ಅವರಿಗೆ ಕಿಸ್ ಮಾಡಿದ್ದೀರಾ ಎಂದು ಕೇಳಿದರು. ಆಗ ಕಿಶನ್ ಸುಜಾತಾ ಅವರಿಗೆ ನಾನು ಮುತ್ತು ಕೊಟ್ಟಿಲ್ಲ. ಆದರೆ ದೀಪಿಕಾ ಅವರಿಗೆ ಮುತ್ತು ಕೊಡುವುದು ತುಂಬಾ ಕಷ್ಟವಾಯಿತು. ಆದರೂ ಅವರಿಗೂ ಕೊಟ್ಟಿದ್ದೀನಿ ಎಂದರು. ಇದ್ದನ್ನೂ ಓದಿ: ಚಂದನಾಗೆ ಕಿಸ್ ಕೊಡು ಎಂದ ಶೈನ್ – ಓಡಿ ಹೋಗಲು ಮುಂದಾದ ವಾಸುಕಿ

ಬಳಿಕ ಪ್ರಿಯಾಂಕಾ ಕುರಿ ಪ್ರತಾಪ್‍ಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದಾಗ ಕಿಶನ್ ಇಲ್ಲ ಕೊಟ್ಟಿಲ್ಲ ಎಂದು ಉತ್ತರಿಸಿದರು. ರಾಜು ತಾಳಿಕೋಟೆ ಮತ್ತು ಭೂಮಿ ಮಧ್ಯೆ ಕಿಶನ್ ಕುಳಿತಿದ್ದರು. ಈ ವೇಳೆ ರಾಜು ಅವರು ಕಿಶನ್‍ಗೆ ಮುತ್ತು ಕೊಟ್ಟು ಪಾಸ್ ಮಾಡು ಎಂದರು. ತಕ್ಷಣ ಕಿಶನ್, ಭೂಮಿ ಕೆನ್ನೆಗೆ ಎಲ್ಲರ ಮುಂದೆಯೇ ಕಿಸ್ ಮಾಡಿದ್ದಾರೆ. ಈ ವಿಡಿಯೋ ಟಿವಿಯಲ್ಲಿ ಪ್ರಸಾರವಾಗಿಲ್ಲ. ಅನ್‍ಸೀನ್‍ನಲ್ಲಿ ಈ ವೀಡಿಯೋವನ್ನು ನೋಡಬಹುದಾಗಿದೆ.

Comments are closed.