ಮನೋರಂಜನೆ

ಎಲ್ಲಿದ್ದೆ ಇಲ್ಲಿತನಕ ಚಿತ್ರದಲ್ಲಿ ಸೃಜನ್ ಮೋಡಿಗೆ ಮರುಳಾದ ಪ್ರೇಕ್ಷಕರು!

Pinterest LinkedIn Tumblr


ಬೆಂಗಳೂರು: ಮಜಾ ಟಾಕೀಸ್ ಎಂಬ ಕಿರುತೆರೆ ಶೋ ಮೂಲಕ ಪ್ರೇಕ್ಷಕರೆಲ್ಲರಿಗೂ ಮಸ್ತ್ ಮಜಾ ನೀಡುತ್ತಾ, ಆ ಮೂಲಕವೇ ಟಾಕಿಂಗ್ ಸ್ಟಾರ್ ಎಂಬ ಬಿರುದನ್ನೂ ಪಡೆದುಕೊಂಡಿರುವವರು ಸೃಜನ್ ಲೋಕೇಶ್. ಅವರೊಂದು ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆಂದ ಮೇಲೆ ಸಹಜವಾಗಿಯೇ ಜನ ಅದರತ್ತ ಕುತೂಹಲಗೊಳ್ಳುತ್ತಾರೆ. ಕಿರುತೆರೆ ಲೋಕದಲ್ಲಿ ಅವರು ಸೃಷ್ಟಿಸಿದ್ದ ಯಶಸ್ಸಿನ ಪ್ರಭೆ ಮತ್ತು ನಿರ್ದೇಶಕ ತೇಜಸ್ವಿಯವರು ಅದ್ಭುತವಾದ ಕಥೆಯೊಂದಿಗೆ ದೃಶ್ಯ ಕಟ್ಟಿದ ರೀತಿಗೆ ಪ್ರೇಕ್ಷಕರು ಮರುಳಾಗಿದ್ದಾರೆ.

ಪ್ರೇಕ್ಷಕರು ಯಾವ್ಯಾವ ಉದ್ದೇಶವಿಟ್ಟುಕೊಂಡು ಸಿನಿಮಾ ನೋಡಲು ಬರುತ್ತಾರೆ? ಅವರಿಗೆ ನಿಜಕ್ಕೂ ಬೇಕಾಗಿರೋ ಕಂಟೆಂಟ್ ಎಂಥಾದ್ದೆಂಬುದರ ಬಗ್ಗೆ ಕ್ಲಾರಿಟಿ ಇರುವ ನಿರ್ದೇಶಕ ಗೆಲ್ಲೋದರಲ್ಲಿ ಯಾವ ಸಂದೇಹವೂ ಇಲ್ಲ. ದಶಕಗಳಿಂದೀಚೆಗೆ ಕಿರುತೆರೆ ಪ್ರೇಕ್ಷಕರ ನಾಡಿ ಮಿಡಿತವನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡು ಆ ಬಲದಿಂದಲೇ ಗೆಲುವು ಕಂಡಿದ್ದವರು ತೇಜಸ್ವಿ. ಅದೇ ರೀತಿ ಅವರು ಸಿನಿಮಾ ಪ್ರೇಕ್ಷಕರನ್ನೂ ಅರ್ಥ ಮಾಡಿಕೊಂಡಿದ್ದಾರೆ. ಅದಿಲ್ಲದೇ ಹೋಗಿದ್ದಿದ್ದರೆ ಖಂಡಿತಾ ಎಲ್ಲಿದ್ದೆ ಇಲ್ಲಿತನಕ ಈ ಪಾಟಿ ಯಶಸ್ವಿ ಪ್ರದರ್ಶನದೊಂದಿಗೆ ಮುಂದುವರೆಯೋದು ಸಾಧ್ಯವಾಗುತ್ತಲೇ ಇರಲಿಲ್ಲ.

ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯೋದು ಯಾವುದೇ ಚಿತ್ರದ ಯಶಸ್ವಿ ಫಾರ್ಮುಲಾ. ಆರಂಭಿಕ ಹಂತದಿಂದಲೇ ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ಸೃಜಾ ಮತ್ತು ಹರಿಪ್ರಿಯಾ ಜೋಡಿಯನ್ನು ಕಣ್ತುಂಬಿಕೊಂಡಿದ್ದರು. ಮೊದಲ ದಿನವೇ ಪ್ರತೀ ಪ್ರೇಕ್ಷಕರನ್ನೂ ಥ್ರಿಲ್ ಆಗಿಸಿದ್ದ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯಗಳೇ ಊರು ತುಂಬಾ ಹರಡಿಕೊಂಡಿದ್ದವು. ಅದಕ್ಕೆ ಸರಿಯಾಗಿ ಬೆನ್ನು ಬೆನ್ನಿಗೆ ದಸರಾ ರಜೆ ಬಂತಲ್ಲಾ? ಅದು ಪ್ರತೀ ಪ್ರೇಕ್ಷಕರ ಪಾಲಿಗೂ ಎಲ್ಲಿದ್ದೆ ಇಲ್ಲಿತನಕ ಚಿತ್ರ ನಿಜಕ್ಕೂ ಹಬ್ಬವಾಗಿಸಿದೆ. ಭರ್ಜರಿ ಮನೋರಂಜನೆ, ಮಾಸ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಕಥೆಯೊಂದಿಗೆ ಎಲ್ಲಿದ್ದೆ ಇಲ್ಲಿತನಕ ಚಿತ್ರ ಭರ್ಜರಿ ಗೆಲುವು ಪಡೆದುಕೊಂಡು ಮುನ್ನುಗ್ಗುತ್ತಿದೆ.

Comments are closed.