ಮನೋರಂಜನೆ

ಚೆನ್ನೈನಲ್ಲಿ ಹುಚ್ಚಾ ವೆಂಕಟ್ ಬಿಕ್ಷುಕನಂತೆ ಕಾಣಿಸಿಕೊಂಡ ವಿಡಿಯೋದ ಅಸಲಿಯತ್ತೇನು ಗೊತ್ತಾ ?

Pinterest LinkedIn Tumblr


ಹುಚ್ಚಾ ವೆಂಕಟ್​.. ಈ ಹೆಸ್ರು ಕೇಳಿದ್ರೆ ಸಾಕು ಏನಪ್ಪಾ ಇವತ್ತು ಈ ಯಪ್ಪನ ಕತೆ. ಅದೇನ್ ಪ್ರಮಾಧ ಮಾಡಿದ್ದಾನೋ ಅನ್ನೋ ಬಳಗ ಒಂದ್​ ಕಡೆ. ಮತ್ತೊಂದ್​ ಕಡೆ. ಲೇ ತಡಿರೋ ನಮ್​ ಬಾಸ್​​ ಬಗ್ಗೆ ಏನೋ ಹೇಳ್ತಿದ್ದಾರೆ ಅನ್ನೋ ಟೀಂ ಬೇರೆ.. ಬಟ್ ಹುಚ್ಚಾ ವೆಂಕಟ್ ಅದೇನ್ ಮಾಡಿದ್ರು ಸುದ್ದಿನೇ.. ಈ ಮಟ್ಟಕ್ಕೆ ಕರ್ನಾಟಕದಲ್ಲಿ ಫೇಮಸ್​ ಆಗಿದ್ದ ವೆಂಕಟ್​​ ಈಗ ಕಾಲಲ್ಲಿ ಚಪ್ಪಲಿ ಇಲ್ಲದೆ ಕೊಳಕು ಬಟ್ಟೆಯಲ್ಲಿ ಹುಚ್ಚನಂತೆ ಚನ್ನೈನ ಬೀದಿ ಬೀದಿಗಳಲ್ಲಿ ಸುತ್ತುತ್ತಿದ್ದಾರೆ. ಅಷ್ಟಕ್ಕು ವೆಂಕಟ್​​ಗೆ ಏನಾಗಿದೆ ?. ನಿಜವಾಗ್ಲು ಹುಚ್ಚು ಹಿಡಿದೆಯಾ?.ವೆಂಕಟ್​​​ ಈ ಪರಿಸ್ಥಿತಿಯನ್ನ ರಿವಿಲ್ ಮಾಡಿದ್ದು ಯಾರು..? ಇಲ್ಲಿದೆ ನೋಡಿ ಫೈರಿಂಗ್ ಸ್ಟಾರ್​​​​ ಕಹಾನಿ..

ಹುಚ್ಚ ವೆಂಕಟ್​​.. ಸ್ಯಾಂಡಲ್​​ವುಡ್​​​ನ ಫೈರಿಂಗ್ ಸ್ಟಾರ್​.. ಭರ್ಜರಿ ಡೈಲಾಗ್​ ಹೊಡೆದು ಫೇಮಸ್ ಆದ ಹೀರೋ. ಒಂದೇ ಬಾರಿಗೆ ಹೆಸ್ರು ಗಳಿಸೋಕೆ ಎಲ್ಲರಿಂದ ಸಾಧ್ಯವಿಲ್ಲ. ಈ ವಿಷಯದಲ್ಲಿ ಹುಚ್ಚಾ ವೆಂಕಟ್ ಎತ್ತಿದ ಕೈ. ಸಿನ್ಮಾ ಫ್ಲಾನ್ ಆಯ್ತು ಅಂತ ಸಿಟ್ಟಿನಲ್ಲಿ ಮಾತನಾಡಿದ್ದ ವೆಂಕಟ್​ ರಾತ್ರೋ ರಾತ್ರಿ ಭಾರಿ ಫೇಮಸ್ ಆಗಿದ್ರು.. ಬಾಯ್ ತೆಗೆದ್ರೆ ನನ್​ ಮಗಂದ್​​, ನನ್​ ಯಕ್ಡಾ ಅಂತ ಹೇಳೋ ವೆಂಕಟ್​ ಮಾತು ಕೇಳೋಕೆ ಅಂತಾನೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು..

ಸಿನಿಮಾ ಸೋತ ನೋವಲ್ಲಿ ಸಿಕ್ಕ ಸಿಕ್ಕವರಿಗೆಲ್ಲಾ ಬೈದು ಫೇಮಸ್ ಆಗಿದ್ದ ವೆಂಕಟ್​​​​​ ಯ್ಯೂಟ್ಯೂಬ್ ಸ್ಟಾರ್​ ಆಗಿದ್ರು. ವೆಂಕಟ್​​ ಬೈಗುಳದ ವೀಡಿಯೋಗಳಿಗೆ ಪ್ರೇಕ್ಷಕರು ಲೈಕ್ಸ್​ಗಳ ಸುರಿಮಳೆ ಹರಿಸ್ತಾರೆ. ‘ಅರ್ಥ ಆಯ್ತಾ?’ ‘ನನ್‌ ಮಗಂದ್‌, ಇವೆಲ್ಲಾ ಬ್ಯಾನ್‌ ಆಗ್‌ಬಿಡ್ಬೇಕ್‌’ ‘ಬೆಂಡೆತ್‌ ಬಿಡ್ತೀನಿ’ ಅನ್ನೋ ಡೈಲಾಗ್‌ಗಳನ್ನು ಕಾಲೇಜು ಸ್ಟೂಡೆಂಟ್, ಐಟಿ ಉದ್ಯೋಗಿಗಳು, ರಿಕ್ಷಾ ಚಾಲಕರು ಎಲ್ಲರೂ ಅನುಕರಿಸಿದ್ರು… ಹೀಗೆ ಭರ್ಜರಿ ಡೈಲಾಗ್​ಗಳಿಂದಲೇ ಫೇಮಸ್​ ಆಗಿದ್ದ ವೆಂಕಟ್​​​​​ ಸ್ತಿತಿ ಈಗ ಆ ದೇವರಿಗೂ ಬೇಡ ಆಗಿದೆ..

ಬೈಗುಳದ ಡೈಲಾಗ್​ಗಳು, ವಿವಾದಗಳಿಂದ ಕರ್ನಾಟಕದಾದ್ಯಂದ ಫೈಯರ್​​​ ತರ ಫೇಮಸ್​​​​ ಆಗಿದ್ದ ಹುಚ್ಚ ವೆಂಕಟ್​​​ ಬಿಗ್​ಬಾಸ್​ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದೇ ತಡ. ವೆಂಕಟರ್​ ಇಮೇಜ್​​ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಯಾವ್ ಮಟ್ಟಕ್ಕೆ ಅಂದ್ರೆ ಹುಚ್ಚ ವೆಂಕಟ್​ ಸೇನೆ.. ಹುಚ್ಚ ವೆಂಕಟ್​ ಅಭಿಮಾನಿ ಬಳಗಳೇ ಸೃಷ್ಟಿಯಾಗಿತ್ತು. ಹೀಗೆ ಸ್ಟಾರ್​​​​ ಆಗಿದ್ದ ವೆಂಕಟ್​​​ ಪರಿಸ್ತಿತಿ ಈಗ ಹೇಗಿದೆ ಅನ್ನೋದನ್ನು ಈ ವೀಡಿಯೋದಲ್ಲಿ ನೋಡಿ

ಹೌದು, ಫೈರಿಂಗ್ ಸ್ಟಾರ್​​​​​ ಫೈಯರ್​​ ಇಲ್ಲದೇ ಈಗ ಚನ್ನೈನ ಬೀದಿ ಬೀದಿ ಸುತ್ತುತ್ತಿದ್ದಾರೆ. ಯಾವಾಗ್ಲು ನನ್​ ಮಗಂದ್​, ನನ್​ ಯಕ್ಡಾ ಅಂತ ಘರ್ಜಿಸ್ತಿದ್ದ ಈ ಫೈರಿಂಗ್ ಸ್ಟಾರ್​​ ಈಗ ಚನ್ನೈನ ಒಡಪ್ಪಳ್ಳಿಯಲ್ಲಿ ಕೊಳಕು ಬಟ್ಟೆ ಹಾಕಿಕೊಂಡು, ಗಡ್ಡ ಬಿಟ್ಟು, ಕಾಲಲ್ಲಿ ಚಪ್ಪಲಿ ಇಲ್ಲದೇ ದಿಕ್ಕು ದೆಸೆ ಇಲ್ಲದೇ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿದ್ದಾರೆ. ವೆಂಕಟ್​​ ಸ್ಥಿತಿ ನೋಡಿದ್ರೆ ಎಂಥವರಿಗು ಕರುಳು ಚರ್​​ ಅನ್ನುತ್ತೆ..

ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಈ ಸ್ಥಿತಿಯಲ್ಲಿರೋ ವಿಡಿಯೋವನ್ನ ನಟ ಭುವನ್​​​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಭುವನ್ ನಟಿಸ್ತಾ ಇರೋ ರಾಂಧವ ಸಿನಿಮಾ ಟೀಂ ಸದಸ್ಯರೊಬ್ರು ಹುಚ್ಚ ವೆಂಕಟರ್​​​​​ರ ಈ ವಿಡಿಯೋ ಮಾಡಿ ಭುವನ್​​ಗೆ ಕಳಿಸಿದ್ದಾರೆ. ಹುಚ್ಚ ವೆಂಕಟ್ ಪರಿಸ್ಥಿತಿ ನೋಡಿ ವೆಂಕಟ್​ಗೆ ಹೆಲ್ಪ್​ ಮಾಡಿ ಅಂತ ಭುವನ್​ ಪೊನ್ನಣ್ಣ ಕೇಳಿಕೊಂಡಿದ್ದಾರೆ.

ಹುಚ್ಚ ವೆಂಕಟ್​​ ಹುಚ್ಚನಂತೆ ಅಲೆಯುತ್ತಿರೋ ವಿಡಿಯೋವನ್ನ ರಾಂಧವ ಸಿನಿಮಾ ಟೀಂ ಬಿಡುಗಡೆ ಮಾಡಿದೆ. ವಿಡಿಯೋ ಮೇಲೆ ರಾಂಧವ ಭುವನ್ ಪೊನ್ನಣ್ಣ ಅನ್ನೋ ವಾಟರ್​​ ಮಾರ್ಕ್​ ಇದೆ. ಹೀಗಾಗಿ ಸಿನಿಮಾ ಪ್ರಮೋಷನ್​​ಗಾಗಿ ವೆಂಕಟ್​ ಪರಿಸ್ತಿತಿಯನ್ನ ಬಳಸಿಕೊಂಡ್ರು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರ್ತಿವೆ. ಯಾಕಂದ್ರೆ ಕಳೆದ ಫೇಬ್ರವರಿಯಲ್ಲೇ ವೆಂಕಟ್​​ ಚನ್ನೈನಲ್ಲಿ ಸುತ್ತುತ್ತಿದ್ದಾರೆ ಅನ್ನೋ ಸುದ್ದಿ ಬಂದಿತ್ತು. ಆದ್ರೆ ಸಿನಿಮಾ ರಿಲೀಸ್​​ ಹೊತ್ತಿನಲ್ಲಿ ಯಾಕೆ ವೆಂಕಟ್​​ ಸ್ಥಿತಿ ಬಗ್ಗೆ ರಾಂಧವ ಟೀಂಗೆ ಕರುಣೆ ಬಂದಿದೆ ಅನ್ನೋ ಮಾತು ಕೇಳ್ತಿದೆ.

ಹುಚ್ಚ ವೆಂಕಟ್​​​ ಅಂದ್ರೆ ಒಬ್ಬ ಸ್ಟಾರ್​ ಅಷ್ಟೆ ಅಲ್ಲ. ಕಾಂಟ್ರವರ್ಸಿಯಲ್ಲೂ ಫೇಮಸ್ ಒಬ್ಬ ರಾಜಕಾರಣಿಯೂ ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರಿಂದ ಎಮ್​ಎಲ್​ಎ ಟಿಕೆಟ್ ಪಡೆದು ಚಪ್ಪಲಿ ಗುರುತಿನಿಂದ ಸ್ಪರ್ಧಿಸಿದ್ದ ವೆಂಕಟ್​ಗೆ 150 ಕ್ಕು ಹೆಚ್ಚಿನ ಮತಗಳು ಬಿದ್ದಿದ್ವು.

ಇನ್ನು ಕಾಂಟ್ರವರ್ಸಿ ವಿಷಯಕ್ಕೆ ಬಂದ್ರೆ ಒಂದೇ ಎರಡೇ.? ರಮ್ಯಾ ಮದುವೆ. ತನ್ನ ಸಿನಿಮಾ ನಾಯಕಿ ಜೊತೆ ಜಗಳ, ರಚನಾ ಅನ್ನೋ ಹುಡುಗಿಯನ್ನ ಲವ್ ಮಾಡಿದ್ದೇನೆ ಅಂದಿದ್ದು, ಬೀದಿಯಲ್ಲಿ ರಂಪಾಟ, ಗುರುಪ್ರಸಾದ್​​ಗೆ ಬೈದಿದ್ದು, ಉಪ್ಪಿ ಐಲವ್​​​ಯು ಸಿನಿಮಾ ತಂಡಕ್ಕೆ ಬೈದು ಕ್ಷಮೆ ಕೇಳಿದ್ದು, ಐಟಂ ಸಾಂಗ್ ಬ್ಯಾನ್​ ಆಗ್ಬೇಕು ಅಂತ ಸಿನಿಮಾ ತಂಡಗಳ ಜೊತೆ ಗುದ್ದಾಡಿದ್ದು, ಪ್ರತಮ್​ಗೆ ಹೊಡೆದಿದ್ದು, ಅಬ್ಬಬ್ಬಾ ವೆಂಕಟ್​​ ಎಲ್ಲೇ ಹೋದ್ರು ಅಲ್ಲಿ ಕಾಂಟ್ರವರ್ಸಿ ಮಾಡಿಕೊಳ್ತಿದ್ರು, ಬಟ್​ ಈಗ ಈ ಫೈರಿಂಗ್ ಸ್ಟಾರ್​ ಸ್ಥಿತಿ ನಿಜಕ್ಕೂ ಬೇಸರ ತರುವಂತಿದೆ..

Comments are closed.