ಹುಚ್ಚಾ ವೆಂಕಟ್.. ಈ ಹೆಸ್ರು ಕೇಳಿದ್ರೆ ಸಾಕು ಏನಪ್ಪಾ ಇವತ್ತು ಈ ಯಪ್ಪನ ಕತೆ. ಅದೇನ್ ಪ್ರಮಾಧ ಮಾಡಿದ್ದಾನೋ ಅನ್ನೋ ಬಳಗ ಒಂದ್ ಕಡೆ. ಮತ್ತೊಂದ್ ಕಡೆ. ಲೇ ತಡಿರೋ ನಮ್ ಬಾಸ್ ಬಗ್ಗೆ ಏನೋ ಹೇಳ್ತಿದ್ದಾರೆ ಅನ್ನೋ ಟೀಂ ಬೇರೆ.. ಬಟ್ ಹುಚ್ಚಾ ವೆಂಕಟ್ ಅದೇನ್ ಮಾಡಿದ್ರು ಸುದ್ದಿನೇ.. ಈ ಮಟ್ಟಕ್ಕೆ ಕರ್ನಾಟಕದಲ್ಲಿ ಫೇಮಸ್ ಆಗಿದ್ದ ವೆಂಕಟ್ ಈಗ ಕಾಲಲ್ಲಿ ಚಪ್ಪಲಿ ಇಲ್ಲದೆ ಕೊಳಕು ಬಟ್ಟೆಯಲ್ಲಿ ಹುಚ್ಚನಂತೆ ಚನ್ನೈನ ಬೀದಿ ಬೀದಿಗಳಲ್ಲಿ ಸುತ್ತುತ್ತಿದ್ದಾರೆ. ಅಷ್ಟಕ್ಕು ವೆಂಕಟ್ಗೆ ಏನಾಗಿದೆ ?. ನಿಜವಾಗ್ಲು ಹುಚ್ಚು ಹಿಡಿದೆಯಾ?.ವೆಂಕಟ್ ಈ ಪರಿಸ್ಥಿತಿಯನ್ನ ರಿವಿಲ್ ಮಾಡಿದ್ದು ಯಾರು..? ಇಲ್ಲಿದೆ ನೋಡಿ ಫೈರಿಂಗ್ ಸ್ಟಾರ್ ಕಹಾನಿ..
ಹುಚ್ಚ ವೆಂಕಟ್.. ಸ್ಯಾಂಡಲ್ವುಡ್ನ ಫೈರಿಂಗ್ ಸ್ಟಾರ್.. ಭರ್ಜರಿ ಡೈಲಾಗ್ ಹೊಡೆದು ಫೇಮಸ್ ಆದ ಹೀರೋ. ಒಂದೇ ಬಾರಿಗೆ ಹೆಸ್ರು ಗಳಿಸೋಕೆ ಎಲ್ಲರಿಂದ ಸಾಧ್ಯವಿಲ್ಲ. ಈ ವಿಷಯದಲ್ಲಿ ಹುಚ್ಚಾ ವೆಂಕಟ್ ಎತ್ತಿದ ಕೈ. ಸಿನ್ಮಾ ಫ್ಲಾನ್ ಆಯ್ತು ಅಂತ ಸಿಟ್ಟಿನಲ್ಲಿ ಮಾತನಾಡಿದ್ದ ವೆಂಕಟ್ ರಾತ್ರೋ ರಾತ್ರಿ ಭಾರಿ ಫೇಮಸ್ ಆಗಿದ್ರು.. ಬಾಯ್ ತೆಗೆದ್ರೆ ನನ್ ಮಗಂದ್, ನನ್ ಯಕ್ಡಾ ಅಂತ ಹೇಳೋ ವೆಂಕಟ್ ಮಾತು ಕೇಳೋಕೆ ಅಂತಾನೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು..
ಸಿನಿಮಾ ಸೋತ ನೋವಲ್ಲಿ ಸಿಕ್ಕ ಸಿಕ್ಕವರಿಗೆಲ್ಲಾ ಬೈದು ಫೇಮಸ್ ಆಗಿದ್ದ ವೆಂಕಟ್ ಯ್ಯೂಟ್ಯೂಬ್ ಸ್ಟಾರ್ ಆಗಿದ್ರು. ವೆಂಕಟ್ ಬೈಗುಳದ ವೀಡಿಯೋಗಳಿಗೆ ಪ್ರೇಕ್ಷಕರು ಲೈಕ್ಸ್ಗಳ ಸುರಿಮಳೆ ಹರಿಸ್ತಾರೆ. ‘ಅರ್ಥ ಆಯ್ತಾ?’ ‘ನನ್ ಮಗಂದ್, ಇವೆಲ್ಲಾ ಬ್ಯಾನ್ ಆಗ್ಬಿಡ್ಬೇಕ್’ ‘ಬೆಂಡೆತ್ ಬಿಡ್ತೀನಿ’ ಅನ್ನೋ ಡೈಲಾಗ್ಗಳನ್ನು ಕಾಲೇಜು ಸ್ಟೂಡೆಂಟ್, ಐಟಿ ಉದ್ಯೋಗಿಗಳು, ರಿಕ್ಷಾ ಚಾಲಕರು ಎಲ್ಲರೂ ಅನುಕರಿಸಿದ್ರು… ಹೀಗೆ ಭರ್ಜರಿ ಡೈಲಾಗ್ಗಳಿಂದಲೇ ಫೇಮಸ್ ಆಗಿದ್ದ ವೆಂಕಟ್ ಸ್ತಿತಿ ಈಗ ಆ ದೇವರಿಗೂ ಬೇಡ ಆಗಿದೆ..
ಬೈಗುಳದ ಡೈಲಾಗ್ಗಳು, ವಿವಾದಗಳಿಂದ ಕರ್ನಾಟಕದಾದ್ಯಂದ ಫೈಯರ್ ತರ ಫೇಮಸ್ ಆಗಿದ್ದ ಹುಚ್ಚ ವೆಂಕಟ್ ಬಿಗ್ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದೇ ತಡ. ವೆಂಕಟರ್ ಇಮೇಜ್ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಯಾವ್ ಮಟ್ಟಕ್ಕೆ ಅಂದ್ರೆ ಹುಚ್ಚ ವೆಂಕಟ್ ಸೇನೆ.. ಹುಚ್ಚ ವೆಂಕಟ್ ಅಭಿಮಾನಿ ಬಳಗಳೇ ಸೃಷ್ಟಿಯಾಗಿತ್ತು. ಹೀಗೆ ಸ್ಟಾರ್ ಆಗಿದ್ದ ವೆಂಕಟ್ ಪರಿಸ್ತಿತಿ ಈಗ ಹೇಗಿದೆ ಅನ್ನೋದನ್ನು ಈ ವೀಡಿಯೋದಲ್ಲಿ ನೋಡಿ
ಹೌದು, ಫೈರಿಂಗ್ ಸ್ಟಾರ್ ಫೈಯರ್ ಇಲ್ಲದೇ ಈಗ ಚನ್ನೈನ ಬೀದಿ ಬೀದಿ ಸುತ್ತುತ್ತಿದ್ದಾರೆ. ಯಾವಾಗ್ಲು ನನ್ ಮಗಂದ್, ನನ್ ಯಕ್ಡಾ ಅಂತ ಘರ್ಜಿಸ್ತಿದ್ದ ಈ ಫೈರಿಂಗ್ ಸ್ಟಾರ್ ಈಗ ಚನ್ನೈನ ಒಡಪ್ಪಳ್ಳಿಯಲ್ಲಿ ಕೊಳಕು ಬಟ್ಟೆ ಹಾಕಿಕೊಂಡು, ಗಡ್ಡ ಬಿಟ್ಟು, ಕಾಲಲ್ಲಿ ಚಪ್ಪಲಿ ಇಲ್ಲದೇ ದಿಕ್ಕು ದೆಸೆ ಇಲ್ಲದೇ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿದ್ದಾರೆ. ವೆಂಕಟ್ ಸ್ಥಿತಿ ನೋಡಿದ್ರೆ ಎಂಥವರಿಗು ಕರುಳು ಚರ್ ಅನ್ನುತ್ತೆ..
ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಈ ಸ್ಥಿತಿಯಲ್ಲಿರೋ ವಿಡಿಯೋವನ್ನ ನಟ ಭುವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಭುವನ್ ನಟಿಸ್ತಾ ಇರೋ ರಾಂಧವ ಸಿನಿಮಾ ಟೀಂ ಸದಸ್ಯರೊಬ್ರು ಹುಚ್ಚ ವೆಂಕಟರ್ರ ಈ ವಿಡಿಯೋ ಮಾಡಿ ಭುವನ್ಗೆ ಕಳಿಸಿದ್ದಾರೆ. ಹುಚ್ಚ ವೆಂಕಟ್ ಪರಿಸ್ಥಿತಿ ನೋಡಿ ವೆಂಕಟ್ಗೆ ಹೆಲ್ಪ್ ಮಾಡಿ ಅಂತ ಭುವನ್ ಪೊನ್ನಣ್ಣ ಕೇಳಿಕೊಂಡಿದ್ದಾರೆ.
ಹುಚ್ಚ ವೆಂಕಟ್ ಹುಚ್ಚನಂತೆ ಅಲೆಯುತ್ತಿರೋ ವಿಡಿಯೋವನ್ನ ರಾಂಧವ ಸಿನಿಮಾ ಟೀಂ ಬಿಡುಗಡೆ ಮಾಡಿದೆ. ವಿಡಿಯೋ ಮೇಲೆ ರಾಂಧವ ಭುವನ್ ಪೊನ್ನಣ್ಣ ಅನ್ನೋ ವಾಟರ್ ಮಾರ್ಕ್ ಇದೆ. ಹೀಗಾಗಿ ಸಿನಿಮಾ ಪ್ರಮೋಷನ್ಗಾಗಿ ವೆಂಕಟ್ ಪರಿಸ್ತಿತಿಯನ್ನ ಬಳಸಿಕೊಂಡ್ರು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರ್ತಿವೆ. ಯಾಕಂದ್ರೆ ಕಳೆದ ಫೇಬ್ರವರಿಯಲ್ಲೇ ವೆಂಕಟ್ ಚನ್ನೈನಲ್ಲಿ ಸುತ್ತುತ್ತಿದ್ದಾರೆ ಅನ್ನೋ ಸುದ್ದಿ ಬಂದಿತ್ತು. ಆದ್ರೆ ಸಿನಿಮಾ ರಿಲೀಸ್ ಹೊತ್ತಿನಲ್ಲಿ ಯಾಕೆ ವೆಂಕಟ್ ಸ್ಥಿತಿ ಬಗ್ಗೆ ರಾಂಧವ ಟೀಂಗೆ ಕರುಣೆ ಬಂದಿದೆ ಅನ್ನೋ ಮಾತು ಕೇಳ್ತಿದೆ.
ಹುಚ್ಚ ವೆಂಕಟ್ ಅಂದ್ರೆ ಒಬ್ಬ ಸ್ಟಾರ್ ಅಷ್ಟೆ ಅಲ್ಲ. ಕಾಂಟ್ರವರ್ಸಿಯಲ್ಲೂ ಫೇಮಸ್ ಒಬ್ಬ ರಾಜಕಾರಣಿಯೂ ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರಿಂದ ಎಮ್ಎಲ್ಎ ಟಿಕೆಟ್ ಪಡೆದು ಚಪ್ಪಲಿ ಗುರುತಿನಿಂದ ಸ್ಪರ್ಧಿಸಿದ್ದ ವೆಂಕಟ್ಗೆ 150 ಕ್ಕು ಹೆಚ್ಚಿನ ಮತಗಳು ಬಿದ್ದಿದ್ವು.
ಇನ್ನು ಕಾಂಟ್ರವರ್ಸಿ ವಿಷಯಕ್ಕೆ ಬಂದ್ರೆ ಒಂದೇ ಎರಡೇ.? ರಮ್ಯಾ ಮದುವೆ. ತನ್ನ ಸಿನಿಮಾ ನಾಯಕಿ ಜೊತೆ ಜಗಳ, ರಚನಾ ಅನ್ನೋ ಹುಡುಗಿಯನ್ನ ಲವ್ ಮಾಡಿದ್ದೇನೆ ಅಂದಿದ್ದು, ಬೀದಿಯಲ್ಲಿ ರಂಪಾಟ, ಗುರುಪ್ರಸಾದ್ಗೆ ಬೈದಿದ್ದು, ಉಪ್ಪಿ ಐಲವ್ಯು ಸಿನಿಮಾ ತಂಡಕ್ಕೆ ಬೈದು ಕ್ಷಮೆ ಕೇಳಿದ್ದು, ಐಟಂ ಸಾಂಗ್ ಬ್ಯಾನ್ ಆಗ್ಬೇಕು ಅಂತ ಸಿನಿಮಾ ತಂಡಗಳ ಜೊತೆ ಗುದ್ದಾಡಿದ್ದು, ಪ್ರತಮ್ಗೆ ಹೊಡೆದಿದ್ದು, ಅಬ್ಬಬ್ಬಾ ವೆಂಕಟ್ ಎಲ್ಲೇ ಹೋದ್ರು ಅಲ್ಲಿ ಕಾಂಟ್ರವರ್ಸಿ ಮಾಡಿಕೊಳ್ತಿದ್ರು, ಬಟ್ ಈಗ ಈ ಫೈರಿಂಗ್ ಸ್ಟಾರ್ ಸ್ಥಿತಿ ನಿಜಕ್ಕೂ ಬೇಸರ ತರುವಂತಿದೆ..
Comments are closed.