ಬಲಭುಜದ ಶಸ್ತ್ರ ಚಿಕಿತ್ಸೆಗೆಂದು ಲಂಡನ್ ಗೆ ತೆರಳಿದ್ದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಳೆ ಭಾರತಕ್ಕೆ ಹಿಂತಿರುಗಲಿದ್ದಾರೆ.
ಹೌದು ಬಹಳ ದಿನಗಳಿಂದ ಬಲಭುಜದ ಶಸ್ತ್ರ ನೋವಿನಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಲಂಡನ್ ನಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದರು. ಶಿವಣ್ಣ ಹುಟ್ಟುಹಬ್ಬದ ಹಿಂದಿನ ದಿನ ಶಸ್ತ್ರ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಬಳಿಕ ಕೆಲವು ದಿನಗಳ ವಿಶ್ರಾಂತಿ ಪಡೆದಿರುವ ಶಿವಣ್ಣ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ. ಇನ್ನೂ ಈ ಹಿಂದೆ ಸಚಿನ್ ತೆಂಡೂಲ್ಕರ್ ಹಾಗೂ ಎಸ್. ಎಂ ಕೃಷ್ಣರವರಿಗೆ ಆಪರೇಷನ್ ಮಾಡಿದ್ದ ಲಂಡನ್ ನ ಪ್ರಸಿದ್ದ ವೈದ್ಯ ಡಾಕ್ಟರ್ ಆಂಡ್ರ್ಯೂ ವಾಲ್ಲ್ಯಾಕ ರವರೆ ಶಿವಣ್ಣರ ಕೈಗೂ ಆಪರೇಷನ್ ಮಾಡಿದ್ದಾರೆ. ಇನ್ನೂ ಶಿವಣ್ಣ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿರುವ ವೈದ್ಯರಿ ತಮ್ಮ ಫೆಸ್ ಬುಕ್ ಖಾತೆಯಲ್ಲಿ ಧನ್ಯವಾದ ತಿಳಿಸಿದ್ಧಾರೆ. ಅಲ್ಲದೆ ಇಂದು ಭಾರತಕ್ಕೆ ಹೋರಡಿರುವ ಶಿವಣ್ಣ ನಾಳೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.
ಇನ್ನೂ ಲಂಡನ್ ನಿಂದ ಹೊರಟಿರುವ ಕೆಲವು ಫೋಟೊಗಳನ್ನು ಶಿವಣ್ಣ ಶೇರ್ ಮಾಡಿಕೊಂಡಿದ್ದು ಶಿವಣ್ಣನ ಆಗಮನಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜೊತೆಗೆ ಈ ಬಾರಿ ಶಿವಣ್ಣನ ಲಂಡನ್ ನಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದರಿಂದ ಶಿವಣ್ಣ ಹುಟ್ಟುಹಬ್ಬವನ್ನು ಅಭಿಮಾನಿಗಳು ಮಿಸ್ ಮಾಡಿಕೊಂಡಿದ್ದರು.
ಸದ್ಯ ಇದೀಗಾ ಶಿವಣ್ಣ ಭಾರತಕ್ಕೆ ಹಿಂತಿರುಗುತ್ತಿರುವ ವಿಷಯವನ್ನು ಶಿವಣ್ಣ ಫೇಸ್ ಬುಕ್ ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ಶೇರ್ ಮಾಡಿದ್ದು, ವಿಷಯ ತಿಳಿದ ಶಿವಣ್ಣ ಅಭಿಮಾನಿಗಳು ಖುಷ್ ಆಗಿದ್ದಾರೆ.
ಅಲ್ಲದೆ ಬೆಂಗಳೂರಿಗೆ ಬಂದ ನಂತರ ಮತ್ತೊಮ್ಮೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಾಗಿ ತಿಳಿಸಿದ್ದ ಶಿವಣ್ಣ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ.
Comments are closed.