ಬೆಂಗಳೂರು: ಖಳನಟ ಹಾಗೂ ಪೋಷಕನಟನಾಗಿ ಕನ್ನಡದ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುಧೀರ್ ಮೃತಪಟ್ಟು ಇಂದು 20 ವರ್ಷಗಳೇ ಕಳೆದವು.
ತೆರೆಯ ಮೇಲೆ ಕ್ರೂರ ಪಾತ್ರದಲ್ಲಿ ಮಿಂಚಿದ್ದೇ ಹೆಚ್ಚು. ಆದರೆ ನಿಜಜೀವನದಲ್ಲಿ ತುಂಬ ಒಳ್ಳೆಯ ವ್ಯಕ್ತಿಯಾಗಿದ್ದರು. ಕೆಟ್ಟ ಹವ್ಯಾಸಗಳೇ ಇಲ್ಲದೆ ಬದುಕಿದ್ದರು. 2000ರ ಜೂನ್ 13ರಂದು ನಿಧನರಾಗಿದ್ದರು.
ಇಂದಿಗೆ ಅವರು ಮೃತಪಟ್ಟು 20 ವರ್ಷವಾಗಿದ್ದು ಅವರ ನೆನಪಲ್ಲಿ ಪುತ್ರ, ಖ್ಯಾತ ನಿರ್ದೇಶಕ, ನಟ ತರುಣ್ ಸುಧೀರ್ ಟ್ವೀಟ್ ಮಾಡಿದ್ದಾರೆ. ಅಪ್ಪಾ, ನೀವು ನಮ್ಮನ್ನು ಅಗಲಿ ಇಂದಿಗೆ 20 ವರ್ಷಗಳಾಗಿವೆ. ಇಂದು ನಾನೇನು ಆಗಿದ್ದೇನೋ, ನಾನೇನು ಸಾಧನೆ ಮಾಡುತ್ತಿದ್ದೇನೋ ಅದೆಲ್ಲವೂ ನಿಮ್ಮ ಆಶೀರ್ವಾದ ಎಂದು ಬರೆದಿದ್ದಾರೆ.
ಅಲ್ಲದೆ, ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾನು ಸೋಲಲ್ಲ, ನಿನ್ನ ಪ್ರೀತಿ ಎದುರು ಏನೂ ಇಲ್ಲ. ಅಪ್ಪ ಐ ಲವ್ ಯು ಎಂದು ಟ್ವೀಟ್ ಮಾಡಿದ್ದಾರೆ.
ಸುಧೀರ್ ಅವರು 70ರ ದಶಕದಲ್ಲಿ ಸಿನಿಮಾ ಕ್ಷೇತ್ರ ಪ್ರವೇಶಿಸಿ 1999ರವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಎಸ್.ಪಿ.ಸಾಂಗ್ಲಿಯಾನ, ಅಗ್ನಿಪಂಜರ, ಅದೇ ಕಣ್ಣು ಸೇರಿ ಅನೇಕ ಸೂಪರ್ಹಿಟ್ ಸಿನಿಮಾಗಳಲ್ಲಿ ಅದ್ಭುತವಾಗಿ ಅಭಿನಯ ಮಾಡಿದ್ದರು.
ಈಗ ಅವರ ಇಬ್ಬರು ಮಕ್ಕಳಾದ ತರುಣ್ ಸುಧೀರ್ ಹಾಗೂ ನಂದಕಿಶೋರ್ ಸುಧೀರ್ ಸಿನಿಮಾ ನಿರ್ದೇಶಕರಾಗಿದ್ದಾರೆ.
Comments are closed.