ರೇಬನ್ ಗ್ಲಾಸ್, ಕುರುಚಲು ಗಡ್ಡ, ಗತ್ತಿನ ನೋಟ..ವಿಶಿಷ್ಟ ಮ್ಯಾನರಿಸಂ ಮೂಲಕ ಎಂಟ್ರಿ ಕೊಟ್ಟು ಎಂಥದ್ದಾ ಶೂಟ್ ಮಾಡ್ಬೇಕಾ…? ಎಂದಾಗ ಇಡೀ ಥಿಯೇಟರ್ನಲ್ಲಿ ಚಪ್ಪಾಳೆಗಳ ಸುರಿಮಳೆ. ಹೌದು, ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ತಾನು ಬರೀ ಸಿಂಪಲ್ ನಟ ಅಲ್ಲ ಎಂಬುದನ್ನು ರಕ್ಷಿತ್ ಶೆಟ್ಟಿ ಸಾರಿದ್ದರು. ಅಷ್ಟೇ ಅಲ್ಲ ವಿಭಿನ್ನ ಶೈಲಿಯ ಸಿನಿಮಾ ನಿರ್ದೇಶಿಸಿ ಶೆಟ್ರು ಸೈ ಎನಿಸಿಕೊಂಡಿದ್ದರು. ಆದರೆ ಇದಾದ ಬಳಿಕ ‘ಕಿರಿಕ್ ಪಾರ್ಟಿ’ ಕರ್ಣ ಮತ್ಯಾವುದೇ ಚಿತ್ರವನ್ನು ನಿರ್ದೇಶಿಸಿರಲಿಲ್ಲ.
ಹೀಗಾಗಿಯೇ ಪ್ರೇಕ್ಷಕರು ‘ರಿಚ್ಚಿ’ಯ ಹೊಸ ಅವತಾರ ಯಾವಾಗ ಎಂಬ ಕಾತುರ ಪ್ರಶ್ನೆ ಮುಂದಿಡುತ್ತಿದ್ದರು. ಆದರೀಗ ರಕ್ಷಿತ್ ಶೆಟ್ಟಿಯ ಹೊಸ ಚಿತ್ರದ ಪೋಸ್ಟರ್ ಇದಕ್ಕೆ ಉತ್ತರ ಎನ್ನುವಂತಿದೆ. ಇದಕ್ಕೆ ಕಾರಣ ಚಿತ್ರದಲ್ಲಿರುವ ರಕ್ಷಿತ್ರ ಲುಕ್. ಹುರಿ ಮಿಸೆ + ರೇಬನ್ ಗ್ಲಾಸ್ನಲ್ಲಿರುವ ಶೆಟ್ಟರ ಪೇಟಿಂಗ್ ಫೋಟೋವನ್ನು ಈ ಪೋಸ್ಟರ್ ಬಳಸಲಾಗಿದೆ. ಇದರಿಂದಾಗಿ ಮತ್ತೊಮ್ಮೆ ಖಡಕ್ ಪಾತ್ರದೊಂದಿಗೆ ಸಿಂಪಲ್ ಸ್ಟಾರ್ ಮರಳಿದ್ದಾರೆ ಎಂಬ ಸುದ್ದಿ ಹುಟ್ಟುಕೊಂಡಿದೆ.
ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಈ ಪೋಸ್ಟರ್ರನ್ನು ಬಿಡುಗಡೆ ಮಾಡಿರುವುದು ಸುವಿನ್ ಸಿನಿಮಾಸ್ನ ಹೇಮಂತ್. ಇವರೇ ‘ಉಳಿದವರು ಕಂಡಂತೆ’ ಚಿತ್ರಕ್ಕೂ ಬಂಡವಾಳ ಹೂಡಿದ್ದರು ಎಂಬುದೇ ಇಲ್ಲಿ ವಿಶೇಷ. ಆದರೆ ಈ ಪೋಸ್ಟರ್ನಲ್ಲಿ ಶೀರ್ಷಿಕೆ ಮತ್ತು ತಂತ್ರಜ್ಞರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಕಡಲ ಕಿನಾರೆಯ ಮತ್ತೊಂದು ರೌಡಿಸಂ ಅಧ್ಯಾಯವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.
Comments are closed.