ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಇತ್ತೀಚಿಗೆ ಬಿಡುಗಡೆಗೊಂಡ ಅಭಿನಯ ಚತುರ ಸತೀಶ್ ನಿನಾಸಂ ಅಭಿನಯದ ಅಯೋಗ್ಯ ಮತ್ತು ಚಂಬಲ್ ಸಿನಿಮಾ ಭರ್ಜರಿ ಯಶಸ್ವಿ ಕಂಡಿತ್ತು. ಇದೀಗ ಅವರ ಮುಖ್ಯಭೂಮಿಕೆಯಲ್ಲಿ ಮತ್ತೊಂದು ಹೊಸ ಚಿತ್ರ ಸೆಟೇರಿದ್ದು ಬ್ರಹ್ಮಚಾರಿ ವೇಷ ಧರಿಸಿ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ.
ಸದ್ಯ ಚಿತ್ರದ ಶೂಟಿಂಗ್ ತಯಾರಿಯಲ್ಲಿರುವ ಚಿತ್ರ ತಂಡವು ಪೋಟೋ ಶೂಟ್ ಮುಗಿಸಿಕೊಂಡಿದೆ. ಇನ್ನು ಕನ್ನಡದಲ್ಲಿ ಪ್ರಥಮ ಬಾರಿಗೆ ಟೀಸರ್ಗೆ ಒಂದು ಟೀಸರ್ ಬಿಡುವ ಎಂಬ ಹೊಸ ಪ್ಲಾನ್ ಮಾಡಿದ್ದೇವೆ ಎಂದು ಚಿತ್ರದ ತಂಡ ಹೇಳಿಕೊಂಡಿದೆ.
ಬ್ರಹ್ಮಚಾರಿ ಚಿತ್ರದ ಟೀಸರ್ ಅನ್ನು ಜೂನ್ 10ರಂದು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧಾರಿಸಿದೆ. ಮುಖ್ಯ ಟೀಸರ್ ಜೂನ್ 20ರಂದು ಬರಲಿದ್ದು ಆ ದಿನ ಸತೀಶ್ ನಿನಾಸಂ ಅವರ ಬರ್ತಡೇ ಆಗಿರುವ ಕಾರಣ ಬಿಡುಗಡೆ ಮಾಡಲು ನಮ್ಮ ತಂಡ ಪ್ಲಾನ್ ಮಾಡಿದೆ ಎಂದಿದ್ದಾರೆ.
ಬಚ್ಚನ್, ಲವ್ ಇನ್ ಮಂಡ್ಯ ಇಂತಹ ಹಿಟ್ ಸಿನಿಮಾಗಳನ್ನು ಚಂದನವನಕ್ಕೆ ಕೊಟ್ಟ ನಿರ್ಮಾಪಕ ಉದಯ ಕೆ. ಮೆಹ್ತಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮುಖ್ಯಭೂಮಿಕೆಯಲ್ಲಿ ನಾಯಕ ನಟ ಸತೀಶ್ ನಿನಾಸಂ ಇವರಿಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವಾ ಅವರು ಪರೆದೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಬಾಂಬೆ ಮಿಠಾಯಿ ಎಂಬ ಹಾಸ್ಯ ಸಿನಿಮಾ ನಿರ್ದೇಶಕ ಚಂದ್ರ ಮೋಹನ್.
Comments are closed.