ಮನೋರಂಜನೆ

ಸತೀಶ್​ ನಿನಾಸಂ ಬ್ರಹ್ಮಚಾರಿ ವಿಷಯ ಬಹಿರಂಗ..!

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್​ವುಡ್​​ನಲ್ಲಿ ಇತ್ತೀಚಿಗೆ ಬಿಡುಗಡೆಗೊಂಡ ಅಭಿನಯ ಚತುರ ಸತೀಶ್​ ನಿನಾಸಂ ಅಭಿನಯದ ಅಯೋಗ್ಯ ಮತ್ತು ಚಂಬಲ್​ ಸಿನಿಮಾ ಭರ್ಜರಿ ಯಶಸ್ವಿ ಕಂಡಿತ್ತು. ಇದೀಗ ಅವರ ಮುಖ್ಯಭೂಮಿಕೆಯಲ್ಲಿ ಮತ್ತೊಂದು ಹೊಸ ಚಿತ್ರ ಸೆಟೇರಿದ್ದು ಬ್ರಹ್ಮಚಾರಿ ವೇಷ ಧರಿಸಿ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ.

ಸದ್ಯ ಚಿತ್ರದ ಶೂಟಿಂಗ್​​ ತಯಾರಿಯಲ್ಲಿರುವ ಚಿತ್ರ ತಂಡವು ಪೋಟೋ ಶೂಟ್​ ಮುಗಿಸಿಕೊಂಡಿದೆ. ಇನ್ನು ಕನ್ನಡದಲ್ಲಿ ಪ್ರಥಮ ಬಾರಿಗೆ ಟೀಸರ್​​ಗೆ ಒಂದು ಟೀಸರ್ ಬಿಡುವ ಎಂಬ ಹೊಸ ಪ್ಲಾನ್ ಮಾಡಿದ್ದೇವೆ ಎಂದು ಚಿತ್ರದ ತಂಡ ಹೇಳಿಕೊಂಡಿದೆ.

ಬ್ರಹ್ಮಚಾರಿ ಚಿತ್ರದ ಟೀಸರ್​ ಅನ್ನು ಜೂನ್ 10ರಂದು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧಾರಿಸಿದೆ. ಮುಖ್ಯ ಟೀಸರ್ ಜೂನ್ 20ರಂದು ಬರಲಿದ್ದು ಆ ದಿನ ಸತೀಶ್​ ನಿನಾಸಂ ಅವರ ಬರ್ತಡೇ ಆಗಿರುವ ಕಾರಣ ಬಿಡುಗಡೆ ಮಾಡಲು ನಮ್ಮ ತಂಡ ಪ್ಲಾನ್ ಮಾಡಿದೆ ಎಂದಿದ್ದಾರೆ.

ಬಚ್ಚನ್​, ಲವ್​ ಇನ್ ಮಂಡ್ಯ ಇಂತಹ ಹಿಟ್​ ಸಿನಿಮಾಗಳನ್ನು ಚಂದನವನಕ್ಕೆ ಕೊಟ್ಟ ನಿರ್ಮಾಪಕ ಉದಯ ಕೆ. ಮೆಹ್ತಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮುಖ್ಯಭೂಮಿಕೆಯಲ್ಲಿ ನಾಯಕ ನಟ ಸತೀಶ್​ ನಿನಾಸಂ ಇವರಿಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವಾ ಅವರು ಪರೆದೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿರುವುದು ಬಾಂಬೆ ಮಿಠಾಯಿ ಎಂಬ ಹಾಸ್ಯ ಸಿನಿಮಾ ನಿರ್ದೇಶಕ ಚಂದ್ರ ಮೋಹನ್​.

Comments are closed.