ಮನೋರಂಜನೆ

‘ಏನೋ ಗುರ್ರಾಯಿಸ್ತಿದ್ದಿಯಾ, ಕಣ್ಣು ಕೆಳಗೆ ಇಳಿಸೋ, ಸರಿಯಾಗಿ ನಿಂತ್ಕೋ’: ಇದು ಸೈಲೆಂಟ್​ ಸುನೀಲನ ಕಥೆಯಾಧರಿಸಿದ ಸಲಗ ಚಿತ್ರದ ಡೈಲಾಗ್

Pinterest LinkedIn Tumblr


ಇತ್ತೀಚಿಗೆ ಮುಹೂರ್ತ ನೆರವೇರಿಸಿ, ಚಿತ್ರಕ್ಕೆ ಚಾಲನೆ ಕೊಟ್ಟಿದ್ದ ಸಲಗ ಟೀಂ, ಸದ್ದಿಲ್ಲದೇ ಶೂಟಿಂಗ್ ಶುರು ಮಾಡಿದೆ. ಚಿತ್ರದಲ್ಲಿ ಡಾಲಿ ಧನಂಜಯ ಐಪಿಎಸ್ ಆಫೀಸರ್​ ರೋಲ್​ ಪ್ಲೇ ಮಾಡ್ತಿದರೆ, ದುನಿಯಾ ವಿಜಿ ರೌಡಿಯಾಗಿ ಬಣ್ಣ ಹಚ್ಚಿದ್ದಾರೆ.

ಸ್ವತ: ವಿಜಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಸದ್ಯ ಚಿತ್ರದ ಮೇಕಿಂಗ್​​​ ಸ್ಟಿಲ್ಸ್​​ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿದೆ. ಕಾರಣ ಕೆಲದಿನಗಳ ಹಿಂದೆ ನಡೆದಿದ್ದ ಆ ಘಟನೆ. ಕೆಲ ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಮುಂಜಾಗ್ರತೆಯ ಕ್ರಮವಾಗಿ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಬೆಂಗಳೂರಿನ ರೌಡಿ ಶೀಟರ್ ಗಳನ್ನು ಕರೆಸಿ ರೌಡಿ ಪರೇಡ್ ನಡೆಸಿ ಎಚ್ಚರಿಸಿದರು. ಅದರಲ್ಲಿ ರೌಡಿ ಶೀಟರ್​ ಸೈಲೆಂಟ್ ಸುನೀಲ ಮತ್ತು ಅಲೋಕ್​​ ಕುಮಾರ್ ನಡುವಿನ ಸಂಭಾಷಣೆಯ ವೀಡಿಯೋ ವೈರಲ್ಲಾಗಿತ್ತು. ‘ಏನೋ ಗುರ್ರಾಯಿಸ್ತಿದ್ದಿಯಾ, ಕಣ್ಣು ಕೆಳಗೆ ಇಳಿಸೋ, ಸರಿಯಾಗಿ ನಿಂತ್ಕೋ’ ಅಂತ ಸಿಸಿಬಿ ಆಯುಕ್ತರು ಸುನೀಲನಿಗೆ ಚಳಿ ಬಿಡಿಸಿದ್ದರು.

ಸದ್ಯ ಅಲೋಕ್​​ಕುಮಾರ್​​ ಮತ್ತು ಸೈಲೆಂಟ್ ಸುನೀಲ ಸಂಭಾಷಣೆ ನಡೆಸುತ್ತಿದ್ದ ರೀತಿಯಲ್ಲೇ ದುನಿಯಾ ವಿಜಿ ಮತ್ತು ಡಾಲಿ ಧನಂಜಯ ಸಲಗ ಚಿತ್ರದ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಲಗ ಮೇಕಿಂಗ್​​​​​​ ಸ್ಟಿಲ್ಸ್​​​ ನೋಡಿ ಸೈಲೆಂಟ್ ಸುನೀಲನ ಕಥೆಯನ್ನೇ ದುನಿಯಾ ವಿಜಿ ಸಲಗ ಚಿತ್ರದಲ್ಲಿ ಹೇಳೋಕ್ಕೆ ಹೊರಟಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಸಲಗ ಚಿತ್ರದ ಮೇಕಿಂಗ್​​​ ಫೋಟೋ ಮತ್ತು ಸೈಲೆಂಟ್ ಸುನೀಲನಿಗೆ ಅವಾಜ್ ಹಾಕುತ್ತಿರುವ ಅಲೋಕ್ ಕುಮಾರ್ ಫೋಟೋಗಳನ್ನು ಸೇರಿಸಿ, ಎರಡು ಸೇಮ್​ ಸೇಮ್​ ಟು ಸೇಮ್​​ ಅಂತ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ.

ಈ ಬಗ್ಗೆ ಚಿತ್ರದ ನಿರ್ದೇಶಕ, ನಟ ದುನಿಯಾ ವಿಜಿ ಅವರನ್ನು ಕೇಳಿದರೆ, ಅಲೋಕ್​ ಕುಮಾರ್ ಮತ್ತು ಸೈಲೆಂಟ್​ ಸುನೀಲನ ಆ ಘಟನೆಗೂ ನಮ್ಮ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ, ನೈಜ ಘಟನೆಗಳನ್ನ ಆಧರಿಸಿ, ಒಂದು ಕಾಲ್ಪನಿಕ ಕಥೆಯನ್ನ ಈ ಸಿನಿಮಾದಲ್ಲಿ ಕಟ್ಟಿಕೊಡ್ತಿದ್ದೇನೆ. ಫೋಟೋಗಳು ಒಂದೇ ರೀತಿ ಇರೋದು ಕಾಕತಾಳೀಯ ಅಷ್ಟೆ. ನಮ್ಮ ಚಿತ್ರದಲ್ಲಿ ಸುನೀಲ ಕಥೆ, ಅಥವಾ ಪೊಲೀಸರ ಕಥೆ ಇಲ್ಲ. ಇದು ಒಂದು ಕಮರ್ಷಿಯಲ್ ಸಿನಿಮಾ ಅಷ್ಟೆ ಅಂತ ಹೇಳ್ತಿದ್ದಾರೆ.. ಆದರೆ ಕೆಲವರು ಇದೆಲ್ಲಾ ಪಬ್ಲಿಸಿಟಿ ಗಿಮಿಕ್ಕು ಅಂತಿದ್ದಾರೆ.

ನಾಲ್ಕು ವರ್ಷಗಳ ಹಿಂದೆಯೇ ಸೈಲೆಂಟ್​ ಸುನೀಲನ ಕಥೆಯನ್ನು ದುನಿಯಾ ಸೂರಿ ಸಿನಿಮಾ ಮಾಡೋ ಪ್ರಯತ್ನ ಮಾಡಿದರು. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ಮಾಣ ಸಹ ಮಾಡೋಕ್ಕೆ ಮುಂದಾಗಿದರು.. ವಿಶೇಷ ಅಂದರೆ ತಮ್ಮದೇ ನೈಜಕಥೆಯ ಸಿನಿಮಾದಲ್ಲಿ ಸ್ವತ: ಸೈಲೆಂಟ್​ ಸುನೀಲ ಬಣ್ಣ ಹಚ್ಚಿದರು. ಚಿತ್ರದ ಟ್ರೈಲರ್ ಸಹ ರಿಲೀಸ್​ ಆಗಿತ್ತು.. ಬಟ್ ಯಾಕೋ ಸಿನಿಮಾ ಇದ್ದಕ್ಕಿದಂತೆ ನಿಂತು ಹೋಗಿತ್ತು.

Comments are closed.