ಮನೋರಂಜನೆ

ನಾನು ಇಂದು ಅಪ್ಪಾಜಿಗೆ ವಿಶ್​ ಮಾಡಲ್ಲ ಅಣ್ಣ: ದರ್ಶನ್​

Pinterest LinkedIn Tumblr


ಮಂಡ್ಯ: ನಾನು ಇವತ್ತು ಅಪ್ಪಾಜಿ​ ಅವರಿಗೆ ವಿಶ್ ಮಾಡಲ್ಲ ಅಣ್ಣ. ನಿಮ್ಮೆಲ್ಲರಿಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಚಂದನವನದ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೇಳಿದರು.

ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್​​ನಲ್ಲಿಂದು ನಡೆದ ಕೃತಜ್ಞತಾ ಸಮಾವೇಶವನ್ನುದ್ದೇಶಿಸಿದ ಮಾತನಾಡಿದ ಅವರು, ನಿಮ್ಮ ಋಣವನ್ನ ಸಾಯೋವರೆಗೂ ಮರೆಯೋಕಾಗಲ್ಲ, ನೀವು ನಮಗೆ ಪುನರ್ಜನ್ಮ ಕೊಟ್ಟಿದ್ದೀರಿ. ಅಮ್ಮನ ಮೇಲೆ ಸಹಕಾರ ಬೆಂಬಲ ಕೊಟ್ಟಿದ್ದೀರಿ ಎಂದರು.

ಮಂಡ್ಯದಲ್ಲಿ ನಿಂತು ಮಾತನಾಡುವ ಯೋಗ್ಯತೆ ಕೊಟ್ಟಿದ್ದೀರಿ. ನಾವುಗಳೆಲ್ಲಾ ಒಂದು ಅರಿವು ಮೂಡಿಸಬೇಕು ಕೆಲವರಿಗೆ, ಸಂಸದರ ಕೆಲಸ ಏನು(?) ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರ ಕೆಲಸ ಏನು(?) ಎಂಬ ಬಗ್ಗೆ ತಿಳಿಸಬೇಕು ಎಂದು ದರ್ಶನ್​ ತಿಳಿಸಿದ್ದಾರೆ.

ಇನ್ನು ಅಭಿಷೇಕ್ ಎಂಬ ಮಗು ಚಿಕ್ಕ ಸಿನಿಮಾ ಮಾಡಿದೆ. ಹಾರೈಸಿ. ಅಭಿ ನಮಗಿಂತ ಚಿಕ್ಕವನಾದರೂ ಸ್ಕ್ರೀನ್​ನಲ್ಲಿ ರೋಮ್ಯಾನ್ಸ್​​ ಮಾಡುವಾಗ ನಮಗಿಂತ ದೊಡ್ಡವನಾಗಿ ಕಾಣ್ತಾನೆ ಎಂದು ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಭಾಷಣದಲ್ಲಿ ಕಾಲೆಳೆದು ಮಾತು ಮುಗಿಸಿದರು.

ರಾಕಿಂಗ್​ ಸ್ಟಾರ್ ಯಶ್​ ಮಾತುಗಳು

ಹ್ಯಾಪಿ ಬರ್ತ್ ಡೇ ಟೂ ಯು ಅಂಬರೀಶ್ ಅಣ್ಣ ಎಂದು ಮಾತು ಶುರುಮಾಡಿದ ಅವರು, ಫಾರ್ ಎವರ್ ಮಂಡ್ಯದ ಗಂಡು ಅಂಬರೀಶ್ ಅಣ್ಣ. ಅವರಿಗೆ ಹೇಗೆ ಧನ್ಯವಾದ ಹೇಳ್ಬೇಕು. ಹೇಗೆ ಕೃತಜ್ಞತೆ ಹೇಳ್ಬೇಕು ಗೊತ್ತಾಗ್ತಿಲ್ಲ ಎಂದು ನಟ ಯಶ್ ಹೇಳಿದರು.

ಮಂಡ್ಯ ಜನ ಕೊಟ್ಟಿರೋ ಕೊಡುಗೆ ಎಲ್ಲರಲ್ಲೂ ಕೃತಜ್ಞತೆ ಮೂಡಿಸಿದೆ. ಸುಮಲತಾ ಅವರದ್ದು ದೊಡ್ಡ ಹೋರಾಟ. ಅವರು ನಂಬಿದ್ದು ಮಂಡ್ಯ ಜನತೆಯನ್ನು ನಾವು ಓಡಾಡಿರೋವುದಕ್ಕಿಂತ ಜನರ ನಾಡಿಮಿಡಿತ ಅರಿತು ಪ್ರಚಾರ ಮಾಡಿದ್ವಿ. ಯಾರು ಹುಟ್ತಾನೆ ತಿಳಿದುಕೊಂಡು ಬರಲ್ಲ. ಅಂಬೆಗಾಲು ಇಟ್ಟುಕೊಂಡೇ ಬರೋದು ಇಲ್ಲೇನು ಗಳಿಸಬೇಕಿಲ್ಲ. ಜನ ಹೇಳಿಕೊಡುತ್ತಾರೆ, ಮಾಡಕೊಂಡುಬೇಕು ಎಂದು ಅವರು ನುಡಿದರು.

ಇನ್ನು ನಮ್ಮನ್ನ ವಿರೋಧಿ ಅಂತ ಮಾತಾನಾಡುತ್ತಾರೆ. ಅವರು ನಮ್ಮ ವಿರೋಧಿಗಳಲ್ಲ, ಪ್ರತಿಸ್ಪರ್ಧಿಗಳು. ಸುಮಲತಾ ಅವರದ್ದು ತಪ್ಪಿದ್ರೆ ತಿದ್ದಿ. ಸುಮಲತಾ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತಾರೆ ಎಂದು ನಟ ಯಶ್​ ಮಾತನಾಡಿದರು.

Comments are closed.