ಮನೋರಂಜನೆ

ಅಂಬರೀಷ್ ಪುತ್ರ ಅಭಿಷೇಕ್ ಮಾತು ಡಿ-ಫ್ಯಾನ್ಸ್ ಮನದಲ್ಲಿ ಸೃಷ್ಟಿಸಿದೆ ಸೆನ್ಸೇಷನ್..!

Pinterest LinkedIn Tumblr


ಇನ್ನೇನು ಎರಡು ದಿನ ಕಳೆದ್ರೆ ಸಾಕು ಸ್ಯಾಂಡಲ್​​ವುಡ್​​ ಕರ್ಣ , ಅಭಿಮಾನಿಗಳ ಅಮರ್ ನಾಥ್ ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟು ಹಬ್ಬ.. ಅಂಬಿ ಅಗಲಿಕೆಯ ನಡುವೆ ಅವರ ನೆನಪಿನ ಹೋಳಿ ಎಲ್ಲೆಲೂ ಬಣ್ಣ ಬಣ್ಣವಾಗುತ್ತಿದೆ.. ಅದ್ರಲ್ಲೂ ಕಿರುತೆರೆಯ ರಿಯಾಲಿಟಿ ಶೋಗಳಲ್ಲಂತೂ ಜಲೀಲನ ಜಂತರ್ ಮಂತರ್ ಝಗಮಗಿಸುತ್ತಿದೆ..

ಅಮರ್ ಚಿತ್ರದ ಪ್ರೋಮೋಷನ್ ನೆಪದಲ್ಲಿ ರಿಯಾಲಿಟಿ ಶೋಗಳಲ್ಲಿ ಫಸ್ಟ್ ಟೈಮ್ ಅಭಿಷೇಕ್ ಅಂಬರೀಶ್ ಭಾಗಿಯಾಗಿದ್ದಾರೆ.. ಇವ್ರ ಜೊತೆಗೆ ಅಮರ್ ಚಿತ್ರತಂಡದ ನಿರ್ಮಾಪಕರು , ನಿರ್ದೇಶಕರು ಮತ್ತು ಅಂಬಿ ಆಪ್ತರಾಗಿದ್ದ ರಾಕ್​​​​​ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಕೂಡ ಜೊತೆಯಾಗಿದ್ದಾರೆ..

ಕರ್ನಾಟಕದಲ್ಲಿ ಫೇಮಸ್ ಆಗಿರುವ ಸರಿಗಮಪ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮಗಳಲ್ಲಿ ಅಂಬರೀಶ್ ಸ್ಪೆಷಲ್ ಎಪಿಸೋಡ್ ಮಾಡಿದ್ದಾರೆ.. ಈ ಕಾರ್ಯಕ್ರಮಗಳಲ್ಲಿ ಅಂಬರೀಶ್ ಅಭಿನಯದ ಅದ್ಭುತ ಹಾಡುಗಳು, ಆ ಹಾಡಿನ ಹಿಂದೆ ಇದ್ದ ಕಥೆ ಮತ್ತು ಕನ್ವರ್ ಲಾಲ್​​ನ ಬಗ್ಗೆ ಸಿಹಿ ಕವಿತೆಯನ್ನು ಎಲ್ಲರೂ ಮೆಲಕು ಹಾಕಿಕೊಂಡಿದ್ದಾರೆ..

ಅನೇಕ ಸ್ವಾರಸ್ಯಭರಿತ ವಿಚಾರಗಳು ಸರಿಗಮಪ ಹಾಗೂ ಕನ್ನಡದ ಕೋಗಿಲೆ ಕಾರ್ಯಕ್ರಮದಲ್ಲಿ ಅನಾವರಣವಾದ್ವು.. ಈ ಸಂದರ್ಭದಲ್ಲಿ ಮತ್ತೊಂದು ವಿಚಾರ ಅಭಿಷೇಕ್ ಕಡೆಯಿಂದ ಹೊರಬಂತು.. ಈಗಾಗಲೇ ಅಂಬರೀಶ್ ಅವರ ಒಳ್ಳೆಯ ಕೆಲಸಗಳನ್ನು ಸ್ಫೂರ್ತಿಯನ್ನಾಗಿಸಿಕೊಂಡು, ಅನೇಕ ಸ್ಟಾರ್ ಮಹೋದಯರು ಫಾಲೋ ಮಾಡ್ತಿದ್ದಾರೆ.. ಆದ್ರೇ ರೆಬೆಲ್ ಸ್ಟಾರ್ ಅಂಬಿ ಅವರಂತೆ ಈಗಿನ ಜಮಾನಕ್ಯಾರು ? ಅನ್ನೋದನ್ನು ಅಭಿಷೇಕ್ ಬಹಿರಂಗ ಪಡಿಸಿದ್ದಾರೆ.. ಅಭಿಷೇಕ್ ಪ್ರಕಾರ ಅಂಬಿಯಂತೆ ನೇರ ನಿಷ್ಟುರ ನುಡಿಯ ವ್ಯಕ್ತಿ, ಕರ್ಣನಂತೆ ಸ್ನೇಹ ಪ್ರೀತಿಗಾಗಿ ಬದುಕೋ ಮನುಷ್ಯ, ಜಲೀನನಂತೆ ನಿಸ್ವಾರ್ಥ ಸಹಾಯ ಮಾಡೋರೆ ದರ್ಶನ್.. ಅವರೇ ಈ ಜಮಾನದ ರೆಬೆಲ್ ಸ್ಟಾರ್ ಎಂದಿದ್ದಾರೆ..

ರೆಬಲ್ ಸ್ಟಾರ್ ಪಟ್ಟ ದರ್ಶನ್​​​ಗೆ ದಕ್ಕಿಸುವತ್ತ ಅಭಿಷೇಕ್ ಚಿತ್ತ..!
ಈ ಜಮಾನದ ರೆಬೆಲ್ ಸ್ಟಾರ್ ಅಂಬರೀಶ್​​​ ದಾಸ ದರ್ಶನ್..!!
ಅಮರ್ ಮಾತು ಡಿ-ಫ್ಯಾನ್ಸ್ ಮನದಲ್ಲಿ ಸೃಷ್ಟಿಸಿದೆ ಸೆನ್ಸೇಷನ್..!!
ಅಭಿಷೇಕ ಅಂಬರೀಷ್ ರಿಯಾಲಿಟಿ ಶೋಗೆ ಹೋದಾಗ ದರ್ಶನ್ ಬಗ್ಗೆ ಕೆಲ ಮಾತುಗಳನ್ನಾಡಿದ್ದಾರೆ. ಹಿಂದಿನ ಜನರೇಶನ್‌ಗೆ ಅಂಬರೀಷ್ ಆದ್ರೆ, ಈ ಜನರೇಶನ್‌ಗೆ ದರ್ಶನ್ ಅಂತಾ ಅನ್ನಬಹುದು. ಸಣ್ಣ ಸಣ್ಣ ಕಾರ್ಯಕ್ರಮದಲ್ಲೂ ಕೂಡಾ ಭಾಗವಹಿಸಿ, ಎಲ್ಲರಿಗೂ ಸಪೋರ್ಟ್ ಮಾಡ್ತಾರೆ. ಟ್ರೈಲರ್ ಲಾಂಚ್, ಟೀಸರ್ ಲಾಂಚ್ ಕಾರ್ಯಕ್ರಮಗಳಲ್ಲಿ ಭಾಗಹಿಸಿ, ಪ್ರೋತ್ಸಾಹ ಕೊಡ್ತಾರೆ. ಫ್ಯಾನ್ಸ್ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದನ್ನ ದರ್ಶನ್‌ ಅವರನ್ನ ನೋಡಿ ಕಲೀಬೇಕು ಎಂದಿದ್ದಾರೆ.

ಈ ಮಾತನ್ನು ಡಿ ಬಾಸ್‌ಗೆ ಕೇಳಿದ್ರೆ ನೋ ನೋ ಚಾನ್ಸೆ ಇಲ್ಲಾ.. ಅಪ್ಪಾಜಿ ಲೆವಲ್​​ನಲ್ಲಿ ನಾವು ನಿಲ್ಲೋಕೆ ಆಗುತ್ತಾ???.. ಯಾವತ್ತಿದ್ರು ರೆಬೆಲ್ ಸ್ಟಾರ್ ಅಂಬಿರೀಶ್ ಅಂದ್ರೇ ಅಂಬರೀಶೇ ಅಂತ ಮಾತು ಮುಗಿಸಿ ಬಿಡ್ತಾರೆ.. ಆದ್ರೆ ಅಭಿಮಾನಿಗಳ ಚಿಂತನೆ ಪ್ರಕಾರ ಮತ್ತು ದರ್ಶನ್ ನಡೆದು ಬಂದ ಹಾದಿಯನ್ನು ನೋಡ್ತಿದ್ರೆ ಈಗಿನ ಜಮಾನದ ರೆಬೆಲ್ ಸ್ಟಾರ್ ಅಂಬರೀಶ್ ಅಂದ್ರೆ ಅದೂ ದರ್ಶನ್ ಎನ್ನಬಹುದು..

Comments are closed.