ಮನೋರಂಜನೆ

ಯಜಮಾನ’ ಲಾಭದ ಆಸೆಗೆ ಮೋಸ ಹೋದರು..!

Pinterest LinkedIn Tumblr


ಬೆಂಗಳೂರು: ಯಜಮಾನ ಚಿತ್ರದ ವಿತರಣೆ ಹಕ್ಕು ಕೊಡಿಸ್ತೇನೆ ಎಂದು 4ಲಕ್ಷ 50 ಸಾವಿರ ರೂಪಾಯಿ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಅವಿನಾಶ್.ಹೆಚ್.ಪಿ ಎಂಬುವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅವಿನಾಶ್, ತಮ್ಮ ಗೆಳೆಯರಾದ ಅಭಿಷೇಕ್ ಗೌಡ, ಅಕ್ಷಯ್ ಗೌಡ, ದುರ್ಗೇಶ್ ಚೇತನ್ ಜೊತೆ ಸೇರಿ ಯಜಮಾನ ಚಿತ್ರದ ವಿತರಣೆ ಹಕ್ಕನ್ನು ಪಡೆಯಲು ಪ್ರೀತಂ ಎಂಬಾತನನ್ನು ಸಂಪರ್ಕಿಸಿದ್ದರು. ಪ್ರೀತಂ ,ಅನಿಲ್ ಮತ್ತು ಸುರೇಶ್ ಮುಖಾಂತರ ವಿತರಣೆ ಹಕ್ಕು ಕೊಡಿಸೋದಾಗಿ ಹೇಳಿದ್ದ.

ನಂತರ ರವಿ ಚಿತ್ರ ಮಂದಿರ ಮತ್ತು ಕೆ ಎಂ ದೊಡ್ಡಿಯ ಮಾರುತಿ ಚಿತ್ರ ಮಂದಿರದ ವಿತರಣೆ ಹಕ್ಕನ್ನು ಪಡೆದುಕೊಂಡಿರೋದಾಗಿ ಅನಿಲ್ ಹೇಳಿದ್ದ. ಅಲ್ಲದೇ ಅವಿನಾಶ್‌ರನ್ನ ಪಾಲುದಾರರನ್ನಾಗಿ ಮಾಡಿಕೊಳ್ಳೋದಾಗಿ ಹೇಳಿ ಜೆ.ಪಿ.ನಗರದ ಆಕ್ಸ್ ಫರ್ಡ್ ಶಾಲೆಗೆ ಬರುವಂತೆ ಹೇಳಿದ್ದ .

ಅಲ್ಲಿ ಬಂದ ಅವಿನಾಶ್ ಕಡೆಯಿಂದ ನಾಲ್ಕೂವರೆ ಲಕ್ಷ ಹಣ ಪಡೆದಿದ್ದ ಆರೋಪಿಗಳು, ಅಗ್ರಿಮೆಂಟ್ ಎರಡು ಚೆಕ್ ಗಳನ್ನ ಪಡೆದುಕೊಂಡು ಕಳಿಸಿದ್ದರು. ನಂತರ ವಿತರಣೆ ಹಕ್ಕನ್ನು ಕೊಡಿಸದೇ ಮೋಸ ಮಾಡಿದ್ದು, ಹಣ ವಾಪಸ್ ಕೇಳಲು ಹೋದಾಗ ಪ್ರೀತಂ ಪ್ರಾಣ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಈ ಬಗ್ಗೆ ರವಿ, ಪ್ರೀತಂ ಸೇರಿ ಮೂವರ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.