ನವದೆಹಲಿ (ಮೇ.13): ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ಪಾಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ನಡೆದ ಆರನೇ ಹಂತದ ಲೋಕಸಭಾ ಚುನಾವಣೆ ವೇಳೆ ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಮತದಾನ ಮಾಡುವಲ್ಲಿ ವಿಫಲರಾಗಿದ್ದರು. ಹಾಕದ ಹಾಕದೆ ಇರುವುದಕ್ಕಾಗಿ ಅವರು ಪಶ್ಚಾತಾಪವನ್ನು ವ್ಯಕ್ತಪಡಿಸಿ, ಅದಕ್ಕೆ ಕಾರಣವನ್ನು ನೀಡಿದ್ದರು.
ಮಧ್ಯಪ್ರದೇಶದ ರಾಜ್ಗರ್ಜಿಲ್ಲೆಯಲ್ಲಿ ನಾನು ಮತ ಹೊಂದಿದ್ದೆ. ಭೂಪಾಲ್ನಲ್ಲಿದ್ದ ಕಾರಣ 130 ಕಿ.ಮೀ ದೂರದಲ್ಲಿದ್ದ ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಲಾಗಿಲ್ಲ ಮುಂದಿನ ಬಾರಿ ಭೂಪಾಲ್ಗೆ ನನ್ನ ಮತವನ್ನು ವರ್ಗಾಯಿಸಿಕೊಳ್ಳುತ್ತೇನೆ. ಮತ ಚಲಾಯಿಸದ ಬಗ್ಗೆ ನನಗೆ ಬೇಸರವಿದೆ ಎಂದು ಸ್ಪಷ್ಟನೆ ನೀಡಿದ್ದರು.
ಭೂಪಾಲ್ನಿಂದ ಸ್ಪರ್ಧಿಸುತ್ತಿರುವ ಸಿಂಗ್ ವಿರುದ್ಧ ಮಲೆಂಗಾವ್ ಸ್ಪೋಟದ ಆರೋಪಿ., ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಠಾಕೂರ್ ಎದುರಾಳಿಯಾಗಿರುವ ಹಿನ್ನೆಲೆ ಅವರು ಕ್ಷೇತ್ರ ಬಿಟ್ಟು ಕದಲಿಲ್ಲ. ದಿನವೀಡಿ ಭೂಪಾಲ್ನ ವಿವಿಧ ಮತಗಟ್ಟೆ ಪರಿಶೀಲನೆ ಕಾರಣದಿಂದ ತಮ್ಮ ಹಕ್ಕು ಚಲಾವಣೆಯಿಂದ ವಂಚಿತರಾಗಿದ್ದಾರೆ.
ದಿಗ್ವಿಜಯ್ ಸಿಂಗ್ ಈ ಕಾರ್ಯಕ್ಕೆ ಕಡು ಟೀಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗದೆ ಅವರು ಅಪಚಾರವೆಸಗಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿಗಳೇ ಸಾಲಿನಲ್ಲಿ ನಿಂತು ಮತಹಾಕಿದ್ದಾರೆ, ಆದರೆ, ನೀವು ನಿಮ್ಮ ಕರ್ತವ್ಯ ನೆರವೇರಿಸಿಲ್ಲ ಎಂದು ಮಧ್ಯಪ್ರದೇಶದ ರಾಟ್ಲಾಮ್ ಜಿಲ್ಲೆಯ ಚುನಾವಣಾ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು.
Comments are closed.