ಮನೋರಂಜನೆ

ಉದ್ಘರ್ಷ ಚಿತ್ರದಲ್ಲಿ ಕಥೆಯೇ ಹೀರೋ: ಸುನೀಲ್ ಕುಮಾರ್ ದೇಸಾಯಿ!

Pinterest LinkedIn Tumblr


ಬೆಂಗಳೂರು: ಎಂಬತ್ತರ ದಶಕದಲ್ಲಿಯೇ ಈಗಿನ ಕಾಲಮಾನಕ್ಕೆ ತಕ್ಕುದಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಜನ ಆಕರ್ಷಿತರಾಗಿರೋದು ಕೂಡಾ ದೇಸಾಯಿಯವರ ಕ್ರಿಯೇಟಿವಿಟಿ ಮತ್ತು ದೂರದೃಷ್ಟಿಯ ಕಾರಣದಿಂದಲೇ.

ಹಾಗೆ ಎಲ್ಲೆಡೆ ವ್ಯಾಪಕವಾಗಿ ಟಾಕ್ ಕ್ರಿಯೇಟ್ ಮಾಡಿರೋ ಉದ್ಘರ್ಷ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ. ಈ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿದ್ದಾರೆ. ಕಬಾಲಿ ಖ್ಯಾತಿಯ ದನ್ಷಿಕಾ, ತಾನ್ಯಾ ಹೋಪ್ ನಾಯಕಿಯರಾಗಿ ನಟಿಸಿದ್ದಾರೆ. ಇನ್ನುಳಿದಂತೆ ಬೇರೆ ಬೇರೆ ಭಾಷೆಗಳ ಖ್ಯಾತ ನಟನಟಿಯರ ತಾರಾಗಣವೇ ಈ ಚಿತ್ರದಲ್ಲಿದೆ.

ದೇಸಾಯಿಯವರು ಮನಸು ಮಾಡಿದರೆ ಖ್ಯಾತ ಸ್ಟಾರ್ ನಟರನ್ನೇ ಹೀರೋ ಆಗಿ ಕರೆತರ ಬಹುದಿತ್ತು. ಆದರೆ ದೇಸಾಯಿ ಅವರೇಕೆ ಅಷ್ಟಾಗಿ ಪರಿಚಿತರಲ್ಲದ ನಟನಟಿಯರನ್ನ ಈ ಚಿತ್ರಕ್ಕೆ ಆರಿಸಿಕೊಂಡಿದ್ದಾರೆಂಬ ಪ್ರಶ್ನೆ ಹಲವರಲ್ಲಿದೆ. ಅದಕ್ಕೆ ದೇಸಾಯಿಯವರೇ ಉತ್ತರವನ್ನೂ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಚಿತ್ರಕಥೆಯೇ ಹೀರೋ ಸ್ಥಾನದಲ್ಲಿದೆಯಂತೆ. ಇಲ್ಲಿನ ಪಾತ್ರಗಳೆಲ್ಲವೂ ಅದನ್ನು ನಿರ್ವಹಿಸಿದ ಕಲಾವಿದರನ್ನು ಮೀರಿಕೊಂಡು ವಿಶಿಷ್ಠ ಪಾತ್ರಗಳಾಗಿಯಷ್ಟೇ ಪ್ರೇಕ್ಷಕರನ್ನ ಕಾಡಲಿವೆಯಂತೆ.

ಒಟ್ಟಾರೆಯಾಗಿ, ಉದ್ಘರ್ಷ ಪ್ರತೀ ಕ್ಷಣವೂ ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಷ್ಟು ರೋಚಕವಾಗಿ ಮೂಡಿ ಬಂದಿದೆಯಂತೆ. ಕೇವಲ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಪ್ರೇಮಿಗಳಿಗೆ ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಉದ್ಘರ್ಷ ಇಷ್ಟವಾಗಲಿದೆ ಅನ್ನೋದು ಸುನೀಲ್ ಕುಮಾರ್ ದೇಸಾಯಿ ಅವರ ಭರವಸೆ.

Comments are closed.