ಬೆಂಗಳೂರು: ಟೀಸರ್ ಮೂಲಕ ಸಾಕಷ್ಟು ಭರವಸೆ ಮೂಡಿಸಿರುವ, ಸಂಪತ್ ರಾಜ್, ಅನು ಪ್ರಭಾಕರ್, ಸಂಗೀತ ಭಟ್ ಹಾಗೂ ಮಂಗಳೂರಿನ ಕಾರ್ತಿಕ್ ಅತ್ತಾವರ್ ಅಭಿನಯದ ‘ಅನುಕ್ತ’ ಚಿತ್ರದ ಟ್ರೈಲರ್ ಜನವರಿ 18ರಂದು ಸಂಜೆ 7 ಗಂಟೆಗೆ ಬಿಡುಗಡೆಗೊಳ್ಳಲಿದೆ.
ಉಡುಪಿ ಮೂಲದ ದುಬೈ ಉದ್ಯಮಿ ಹರೀಶ್ ಬಂಗೇರ ನಿರ್ಮಿಸಿರುವ ‘ಅನುಕ್ತ’ ಚಿತ್ರದಲ್ಲಿ ತುಳುನಾಡಿನ ಧಾರ್ಮಿಕ ಆಚರಣೆಯಾದ ದೈವಾರಾಧನೆಯ ಶಕ್ತಿ ಅನ್ಯಾಯ ನಡೆದಾಗ, ಹೇಗೆ ನ್ಯಾಯ ದೊರಕಿಸಿಕೊಡುತ್ತದೆ ಎಂಬ ನಂಬಿಕೆಯನ್ನು ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಅಶ್ವತ್ ಸ್ಯಾಮುಯಲ್ ಚಿತ್ರಕಥೆ, ನಿರ್ದೇಶನದ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.
ಎನ್.ಎಂ.ವಿಶ್ವ ಸಂಕಲನದ ಈ ಸಿನಿಮಾದ ಕಥೆಯನ್ನು ಸಂತೋಷ್ ಕುಮಾರ್ ಹಾಗೂ ಕಾರ್ತಿಕ್ ಅತ್ತಾವರ್ ಬರೆದಿದ್ದಾರೆ. ನವೀನ್ ಶರ್ಮ ಹಾಗೂ ಕಿರಣ್ ಶೆಟ್ಟಿ ಸಂಭಾಷಣೆ ಬರೆಯುವುದರೊಂದಿಗೆ ಸಹ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್ ಸಂಪತ್ರಾಜ್, ಅನುಪ್ರಭಾಕರ್ ಮುಖರ್ಜಿ,ಮುಂತಾದವರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
Comments are closed.