
ಮುಂಬೈ: ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿ ಹ್ಯಾಪಿಯಾಗಿರುವ ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಅವರು ಒಂದು ಕಾಲದಲ್ಲಿ ಹುಡುಗನೊಬ್ಬನ ಪ್ರೀತಿಯ ಬಲೆಗೆ ಬಿದ್ದು ಮೋಸ ಹೋದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಕೇವಲ ಬೆಟ್ಟಿಂಗ್ಗಾಗಿ ನನ್ನೊಂದಿಗೆ ಸಂಬಂಧ ಬೆಳೆಸಿದ್ದ ಎಂಬ ವಿಷಯವನ್ನು ಶಿಲ್ಪಾ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನನ್ನ ಸ್ನೇಹಿತೆಯರು ನನ್ನೊಂದಿಗೆ ಸಂಬಂಧ ಬೆಳೆಸುವಂತೆ ಹುಡುಗನೊಬ್ಬನಿಗೆ ಬೆಟ್ಟಿಂಗ್ ಮಾಡಿದ್ದರು. ಇದೊಂದು ಸಿನಿಮಾ ಶೈಲಿಯಲ್ಲಿತ್ತು. ನಂತರ ಅದು ನಿಜವಾದ ಪ್ರೀತಿಗೆ ತಿರುಗಿತ್ತು. ಆದರೆ, ಕೊನೆಯಲ್ಲಿ ಬೆಟ್ಟಿಂಗ್ನಲ್ಲಿ ಗೆಲ್ಲುವ ಉದ್ದೇಶದಿಂದ ಸಂಬಂಧ ಬೆಳೆಸಿದೆ ಎಂದು ಹೇಳುವ ಮೂಲಕ ಹುಡುಗ ಪ್ರೀತಿಗೆ ಕೊನೆಯಾಡಿದ. ಈ ವೇಳೆ ನಾನು ಖಿನ್ನತೆಗೆ ಒಳಗಾದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಆ ಕ್ಷಣ ನಾನು ಹೃದಯಾಘಾತಕ್ಕೆ ಒಳಗಾದೆ ಎಂದು ಶಿಲ್ಪಾ ಹೇಳಿದ್ದಾರೆ.
ಆಗೋದೆಲ್ಲ ಒಳ್ಳೆಯದಕ್ಕೆ ಎಂಬಂತೆ ಕೊನೆಯಲ್ಲಿ ರಾಜ್ ಕುಂದ್ರಾ ನನ್ನ ಬಾಳಿನಲ್ಲಿ ಬಂದರು. ಕುಂದ್ರಾ ಜತೆಗಿನ ಪ್ರೀತಿ ಆರಂಭವಾದ ಬಗ್ಗೆ ತಿಳಿಸಿದ ಶಿಲ್ಪಾ, ಕುಂದ್ರಾ ಅವರು ಲಂಡನ್ನಿಂದ ಮುಂಬೈಗೆ ಪ್ರಯಾಣ ಬೆಳಸಿದಾಗಲೆಲ್ಲ ನನಗಾಗಿ ಕೆಲವು ವಸ್ತುಗಳನ್ನು ನೀಡುತ್ತಿದ್ದರು. ಮೊದಲ ದಿನ ಬಣ್ಣಬಣ್ಣದ ಬ್ಯಾಗ್ ಒಂದನ್ನು ಕಳುಹಿಸಿದರು. ಅದರ ಮುಂದಿನ ದಿನ ಮತ್ತೊಂದು ಬ್ಯಾಗ್ ಕಳುಹಿಸಿಕೊಡುತ್ತಿದ್ದರಂತೆ.
ಇದರಿಂದ ಮತ್ತೊಮ್ಮೆ ಪ್ರೀತಿಯಲ್ಲಿ ಸಿಲುಕಿ ವಿಚಲಿತರಾಗಲು ಶಿಲ್ಪಾ ಅವರಿಗೆ ಇಷ್ಟವಿರಲಿಲ್ಲ. ತಕ್ಷಣವೇ ಫೋನ್ ತೆಗೆದುಕೊಂಡು ನಮ್ಮಿಬ್ಬರ ನಡುವೆ ಏನು ಸಂಭವಿಸಿಲ್ಲ. ನನಗೆ ಮುಂಬೈನಿಂದ ಲಂಡನ್ಗೆ ಸ್ಥಳಾಂತರಗೊಳ್ಳುವ ಆಸಕ್ತಿಯಿಲ್ಲ ಎಂದು ಕುಂದ್ರಾಗೆ ಹೇಳಿದ್ದರಂತೆ. ಆದರೆ, ನಿಮಗೆ ಇಷ್ಟ ಬಂದ ಕಡೆ ನೆಲೆಸೋಣ ಎಂದು ಹೇಳಿ ಕುಂದ್ರಾ ಅವರು ಮುಂಬೈನ ವಿಳಾಸ ನೀಡಿ ಭೇಟಿಯಾಗುವಂತೆ ಕೇಳಿಕೊಂಡಿದ್ದರು. ಅಂದು ನಮ್ಮ ಮೊದಲು ಡೇಟಿಂಗ್ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.
Comments are closed.