ಮನೋರಂಜನೆ

ದುಡ್ಡಿಗಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ನಟಿ

Pinterest LinkedIn Tumblr


ಬೆಂಗಳೂರು (ಸೆ.13) : ಮಹಿಳಾ ಸಂಘದ ಹಣಕ್ಕಾಗಿ ಕಿರುತೆರೆ ನಟಿಯೊಬ್ಬರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಘು ಚಂದ್ರಪ್ಪ ಎಂದು ಗುರುತಿಸಲಾಗಿದ್ದು, ಇವರು ಮತ್ತು ಸುಷ್ಮಿತಾ ನಡುವಿನ ಹಣದ ವ್ಯವಹಾರವೇ ಹಲ್ಲೆಗೆ ಮೂಲ ಕಾರಣ ಎನ್ನಲಾಗಿದೆ. ಈ ಬಗ್ಗೆ ನಟಿ ಸುಷ್ಮಿತಾ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನಟಿ ಸುಷ್ಮಿತಾ ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತೆಯಾಗಿದ್ದು, ಇದೇ ಸಂಘದ ಚಟುವಟಿಕೆಗಳಲ್ಲಿ ರಘು ಕೂಡ ತೊಡಗಿಸಿಕೊಂಡಿದ್ದರು. ಒಂದು ವರ್ಷದ ಹಿಂದೆ ಸರೋಜ ಎಂಬವರು ಸಂಘವನ್ನು ಸ್ಥಾಪಿಸಿ ಹಣ ಮಾಡೋಣ ಎಂದಿದ್ದರು. ಇದೇ ವೇಳೆ ಪರಿಚಿತಳಾದ ನಟಿ ಸುಷ್ಮಿತಾ ಸಂಘದಲ್ಲಿ ಸಹಭಾಗಿಯಾಗಿ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಹಲವರಿಂದ ಸಂಘವು ಒಂದೂವರೆ ಲಕ್ಷ ರೂ ದೇಣಿಯಾಗಿ ಪಡೆದಿದ್ದು, ನಂತರ ಸಂಘವನ್ನು ರಾಜ್ಯಾದ್ಯಂತ ವಿಸ್ತರಿಸಲು ಬಯಸಿದ್ದರು.

ದೂರುದಾರ: ರಘು
ಆದರೆ ಈ ಕೆಲಸ ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದಾಗ, ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ಅವರೇ ನೋಡಿಕೊಂಡಿದ್ದರು. ಅನಂತರ ನೀನು ಸಂಘದ ಸಂಘಟನೆಯಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ ಅವರು, ಹಣ ಹಿಂತಿರುಗಿಸುವಂತೆ ನನ್ನಲ್ಲಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ನಾನು ಸಮ್ಮತಿ ಸೂಚಿಸಿದ್ದರೂ, ನನ್ನ ಮೇಲೆ ನಟಿ ಸುಷ್ಮಿತಾ ಮತ್ತು ಅವರ ಆರು ಜನ ಗೆಳೆಯರು ಹಲ್ಲೆ ನಡೆಸಿದ್ದಾರೆಂದು ರಘು ದೂರಿನಲ್ಲಿ ತಿಳಿಸಿದ್ದಾರೆ.

ನಟಿ ಸುಷ್ಮಿತಾ
ದಿನಾಂಕ 2-9-18 ರಂದು ರೆಸ್ಟೊರೆಂಟ್ ಒಂದರ ಬಳಿ ನನ್ನನ್ನು ತಡೆದ ಸುಷ್ಮಿತಾ, ಸಂಘದಲ್ಲಿ ನೀನೊಬ್ಬನೆ ಹಣ ಸಂಪಾದಿಸುತ್ತಿದ್ದೀಯಾ ಎಂದು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ತಮ್ಮ ಆರು ಜನ ಸಹಚರರೊಂದಿಗೆ ಕಾರನ್ನು ಅಡ್ಡಗಟ್ಟಿದ ನಟಿ ನನ್ನ ಹಣ, ಲ್ಯಾಪ್​ಟಾಪ್ ಮತ್ತು ಕಾರನ್ನು ತೆಗೆದುಕೊಂಡು ಹೋಗಿದ್ದಾರೆಂದು ರಘು ಆರೋಪಿಸಿದ್ದಾರೆ. ಈ ಕುರಿತು ಬಸವೇಶ್ವರ ನಗರದಲ್ಲಿ ಕೇಸು ದಾಖಲಾಗಿದೆ. ಆದರೆ ನಟಿ ಸುಷ್ಮಿತಾ ಅವರ ಗೆಳೆತಿ ಸರೋಜ ರಘು ಮಾಡಿರುವ ಆರೋಪವನ್ನು ನಿರಾಕರಿಸಿದ್ದು, ದೂರುದಾರನೇ ತಮಗೆ ಹಣ ನೀಡಬೇಕಾಗಿರುವುದಾಗಿ ತಿಳಿಸಿದ್ದಾರೆ.

ನಟಿ ಸುಷ್ಮಿತಾ ಸ್ಪಷ್ಟನೆ :

ನನ್ನನ್ನು ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆ ಮಾಡುವುದಾಗಿ ರಘು ಚಂದ್ರಪ್ಪ ವಂಚಿಸಿದ್ದಾರೆ. ನನ್ನಿಂದ ಲಕ್ಷಾಂತರ ರೂಪಾಯಿ ಪಡೆದಿರುವ ರಘು ಈಗ ಹಣವನ್ನು ಹಿಂತಿರುಗಿಸುವಂತೆ ಕೇಳಿಕೊಂಡಾಗ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ರಘು ಮತ್ತು ಸಂಗೀತಾ ಎಂಬವರು ನನಗೆ ಮತ್ತು ಸರೋಜ ಅವರಿಗೆ ವಂಚಿಸಿರುವುದಾಗಿ ಕಿರುತೆರೆ ನಟಿ ಸುಷ್ಮಿತಾ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮೊದಲು ನನ್ನನ್ನು ಪ್ರೀತಿಸುವ ನಾಟಕವಾಡಿರುವ ರಘುಗೆ ನಾನೇ ಕಾರು ಕೊಡಿಸಿರುವುದಾಗಿ ತಿಳಿಸಿರುವ ಸುಷ್ಮಿತಾ, ಈಗ ಏಕಾಏಕಿ ಹಲ್ಲೆಯ ಆರೋಪ ಹೊರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಯುವತಿಯರನ್ನು ಪರಿಚಯ ಮಾಡಿ ರಘು ವಂಚಿಸಿದ್ದಾರೆಂದು ಇದೇ ವೇಳೆ ನಟಿ ಆರೋಪಿಸಿದರು. ರಘು ಚಂದ್ರಪ್ಪನ ಮಾಡಿರುವ ಮೋಸದ ಬಗ್ಗೆ ಈಗಾಗಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ನಟಿ ಸುಷ್ಮಿತಾ ಇದೇ ವೇಳೆ ಸ್ಪಷ್ಟಪಡಿಸಿದರು.

Comments are closed.