ಮನೋರಂಜನೆ

ಶ್ರೀದೇವಿ ನಿಧನ ಸಂಬಂಧ ಮಾಧ್ಯಮಗಳ ವಿರುದ್ಧ ನಟ ರಿಷಿ ಕಪೂರ್ ಆಕ್ರೋಶ

Pinterest LinkedIn Tumblr

ಮುಂಬೈ: ನಟಿ ಶ್ರೀದೇವಿ ನಿಧನ ಸಂಬಂಧ ಮಾಧ್ಯಮಗಳ ವಿರುದ್ಧ ನಟ ರಿಷಿ ಕಪೂರ್ ಆಕ್ರೋಶ ವ್ಯಕ್ತಪಡಿಸಿದ್ದು, ವ್ಯಕ್ತಿತ್ವ ಮಾಯವಾಗಿ ದೇಹವಾಗಿ ಹೋಯಿತೇ ಎಂದು ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ಮೆಗಾ ಹಿರೋಯಿನ್ ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿರುವ ನಟ ರಿಷಿ ಕಪೂರ್, ಶ್ರೀದೇವಿ ನಿಧನದ ಸುದ್ದಿ ಕೇಳಿ ನಿಜಕ್ಕೂ ಆಘಾತವಾಯಿತು. ಆದರೆ ಮಾಧ್ಯಮಗಳಲ್ಲಿನ ವರದಿಗಳನ್ನು ಕೇಳಿ ನನಗೆ ನಿಜಕ್ಕೂ ನೋವಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಶ್ರೀದೇವಿ ಕೇವಲ ಪಾರ್ಥೀವ ಶರೀರವಾಗಿ ಬದಲಾಗಿ ಹೋದಳೇ..? ಎಲ್ಲ ಮಾಧ್ಯಮಗಳೂ ಪಾರ್ಥೀವ ಶರೀರವನ್ನು ಮುಂಬೈಗೆ ಕರೆತರಲಾಗುತ್ತದೆ ಎಂದು ವರದಿ ಬಿತ್ತರಿಸುತ್ತಿವೆ. ಆಕೆಯ ಸಾಧನೆ, ವ್ಯಕ್ತಿತ್ವ ಎಲ್ಲವೂ ಆಕೆಯ ಸಾವಿನೊಂದಿಗೆ ಬದಲಾಗಿ ಕೇವಲ ದೇಹವಾಗಿ ಪರಿವರ್ತನೆಯಾಯಿತೇ ಎಂದು ರಿಷಿಕಪೂರ್ ಟ್ವೀಟ್ ಮಾಡಿದ್ದಾರೆ.

ಇನ್ನು ಇದೇ ವೇಳೆ ಸಂಬಂಧಿ ಬೋನಿ ಕಪೂರ್ ಹಾಗೂ ಅವರ ಇಬ್ಬರು ಮಕ್ಕಳಿಗೆ ರಿಷಿಕಪೂರ್ ಸಾಂತ್ವನ ಹೇಳಿದ್ದಾರೆ.

Comments are closed.