ಮನೋರಂಜನೆ

ಶ್ರೀದೇವಿಗೆ ಹೃದಯ ಸಂಬಂಧಿ ಕಾಯಿಲೆಗಳು ಇರಲಿಲ್ಲ: ಸಂಜಯ್‌ ಕಪೂರ್‌

Pinterest LinkedIn Tumblr


ಮುಂಬಯಿ: ಭಾರತೀಯ ಚಿತ್ರರಂಗದ ಅಮೋಘ ನಟಿ ಶ್ರೀದೇವಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ. ಹೃದಯಾಘಾತದಿಂದ ನಿಧನ ಹೊಂದಿರುವುದು ಕುಟುಂಬದವರೆಲ್ಲರಿಗೂ ಶಾಕ್‌ ಆಗಿದೆ.

ಇದು ಶ್ರೀದೇವಿ ಅವರ ಮೈದುನ ಸಂಜಯ್‌ ಕಪೂರ್‌ ಹೇಳಿಕೆ

ಶ್ರೀದೇವಿ ಪತಿ ಬೋನಿ ಕಪೂರ್‌ ಕಿರಿಯ ಸಹೋದರ ಖಲೀಜ್ ಟೈಮ್ಸ್‌ಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಶ್ರೀದೇವಿ ಹೋಟೆಲ್‌ ರೂಮಿನಲ್ಲಿದ್ದರು. ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದರು ಎಂಬ ಮಾಹಿತಿ ದೊರೆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಸಂಜಯ್‌ ಕಪೂರ್‌ ತಿಳಿಸಿದ್ದಾರೆ.

ಸೋದರ ಸಂಬಂಧ ಮೋಹಿತ್‌ ಮಾರ್ವಾ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶ್ರೀದೇವಿ ಪುತ್ರಿ ಖುಷಿ ಜತೆ ಖುಷಿಯಾಗಿ ಖುಷಿಯಾಗಿ ಇದ್ದರು. ಫೋಟೋಗಳು, ವಿಡಿಯೋಗಳಲ್ಲಿ ಸಂತಸದಿಂದ ಇದ್ದರು ಎಂದು ಸಂಜಯ್‌ ಕಪೂರ್‌ ವಿವರಿಸಿದ್ದಾರೆ.

ಶ್ರೀದೇವಿಗೆ ಹೃದಯಾಘಾತವಾಯಿತು ಎಂದು ತಿಳಿಯುತ್ತಿದ್ದಂತೆ ಎಲ್ಲರಿಗೂ ಶಾಕ್‌ ಆಗಿದೆ. ನಮಗಂತೂ ನಂಬಲು ಸಾಧ್ಯವಾಗುತ್ತಿಲ್ಲ. ಆಕೆಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿರಲ್ಲ ಎಂದು ಸಂಜಯ್‌ ಕಪೂರ್‌ ಸ್ಪಷ್ಟಪಡಿಸಿದ್ದಾರೆ.

Comments are closed.