ಮನೋರಂಜನೆ

ತಣ್ಣಗಾಗಿಲ್ಲ ಬಿಗ್ ಬಾಸ್ ಗಲಾಟೆ ! ರಿಯಾಜ್’ರನ್ನು ಟಾರ್ಗೆಟ್ ಮಾಡಿದ ಜಗನ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು!

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ಮುಗಿದಿದ್ದರೂ ಸ್ಪರ್ಧಿಗಳ ಮೇಲಿನ ವೀಕ್ಷಕರ ಕೋಪ ಮಾತ್ರ ಇನ್ನೂ ತಣ್ಣಗಾಗಿಲ್ಲ. ಈ ವರಗೆ ಬಿಗ್ ಬಾಸ್ ಮನೆಯೊಳಗೇ ನಡೆಯದಂಥದ್ದು ಈ ಬಾರಿ ನಡೆದಿದ್ದು, ಅದೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದ್ದಂತೂ ನಿಜ.

‘ಬಿಗ್ ಬಾಸ್’ ಮನೆಯೊಳಗೆ ಈ ಬಾರಿ ಸ್ಪರ್ಧಿಗಳಾಗಿ ಕಾಮನ್ ಮ್ಯಾನ್’ಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರನ್ನು ಮನೆಯೊಳಗೇ ಸೆಲೆಬ್ರಿಟಿಗಳು ನಡೆಸಿಕೊಂಡ ರೀತಿ ವೀಕ್ಷಕರನ್ನು ಕೆರಳುವಂತೆ ಮಾಡಿತ್ತು. ಅನಂತರ ಸೆಲೆಬ್ರಿಟಿಗಳು ‘ಬಿಗ್ ಬಾಸ್’ ಮನೆಯಿಂದ ಹೊರಬಿದ್ದ ಮೇಲೆ ತಣ್ಣಗಾಗಿತ್ತು. ಆದರೆ ‘ಬಿಗ್ ಬಾಸ್’ ಫಿನಾಲೆಯಂದು ಜಗನ್ ಮತ್ತೆ ತಕರಾರು ತೆಗೆದು ರಿಯಾಜ್ ಮೇಲೆ ಗೂಬೆಕೂರಿಸುವಂತೆ ಮಾಡಿದ್ದಾರೆ ಎಂದು ಮತ್ತೆ ನೆಟ್ಟಿಗರು ಜಗನ್ ಸೇರಿದಂತೆ ಸೆಲೆಬ್ರಿಟಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

‘ಬಿಗ್ ಬಾಸ್’ ಮನೆಯೊಳಗೆ ಜಗನ್ ನಡೆದುಕೊಂಡ ರೀತಿಯ ಬಗ್ಗೆ ಆರಂಭದಿನ ನೆಟ್ಟಿಗರು ಕಿಡಿಕಾರುತ್ತಲೇ ಬಂದಿದ್ದು, ಅವರನ್ನು ಮನೆಯಿಂದ ಹೊರ ಹಾಕುವಂತೆ ಒತ್ತಾಯವನ್ನು ಮಾಡುತ್ತಲೇ ಬಂದಿದ್ದರು. ಫಿನಾಲೆಯಂದು ಮಧ್ಯೆ ಬಾಯಿ ಹಾಕಿದ ಜಗನ್ ದರ್ಪ ತೋರುವ ರೀತಿಯಲ್ಲಿ ‘ಬಿಗ್ ಬಾಸ್’ ಮನೆಯೊಳಗೆ ಕಾಮನ್ ಮ್ಯಾನ್-ಸೆಲೆಬ್ರಿಟಿ ಎಂಬುದೇ ಇಲ್ಲ…ಇದನ್ನು ರಿಯಾಜ್ ಸೃಷ್ಟಿಸಿದ್ದು ಎಂದು ಆರೋಪ ಮಾಡಿದ್ದರು. ಈ ವೇಳೆ ಸಿಹಿಕಹಿ ಚಂದು, ದಯಾಳ್ ಕೂಡ ಧನಿಗೂಡಿಸಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಕಲರ್ಸ್ ಸೂಪರ್ ಪೇಜಿನಲ್ಲಿ ಜಗನ್, ಸಿಹಿಕಹಿ ಚಂದ್ರು, ದಯಾಳ್, ಅನುಪಮಾ ಸೇರಿದಂತೆ ಹಲವು ಮಂದಿ ಸೆಲೆಬ್ರಿಟಿಗಳ ಮೇಲೆ ಕಿಡಿಕಾರಿದ್ದಾರೆ. ”ಎಲ್ಲದರಲ್ಲೂ ಭೇದಭಾವ ಮಾಡೋದು ಮಾಡಿ ಈಗ ರಿಯಾಝ್ ಮೇಲೆ ಗೂಬೆ ಕೂರಿಸಲಾಗಿದೆ” ಎಂದು ನೆಟ್ಟಿಗರು ಕಲರ್ಸ್ ಸೂಪರ್ ಫೇಸ್ ಬುಕ್ ಪೇಜ್ ನಲ್ಲಿಯೇ ಕೆಂಡಕಾರುತ್ತಿದ್ದಾರೆ.

”ಸೆಲೆಬ್ರಿಟಿಗಳು ತಮ್ಮ ತಪ್ಪನ್ನ ಇನ್ನೂ ಒಪ್ಪಿಕೊಳ್ಳುತ್ತಿಲ್ಲ. ಎಲ್ಲದರಲ್ಲೂ ಭೇದಭಾವ ಮಾಡಿ ಈಗ ರಿಯಾಝ್ ಮೇಲೆ ಗೂಬೆ ಕೂರಿಸಲಾಗಿದೆ” ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

Comments are closed.