ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ದಿವಾಕರ್, ಚಂದನ್ ಮನೆಯವರು ಬಂದ ಖುಷಿಯಾದ್ರೆ ಇನ್ನೊಂದೆಡೆ ಮನೆಯವರು ಬಾರದಿರುವ ಬೇಸರದಿಂದ ಶ್ರುತಿ ಕಣ್ಣೀರಿಟ್ಟರು.
ಗುರುವಾರ ಬಿಗ್ಬಾಸ್ ಮನೆಗೆ ಚಂದನ್ ಶೆಟ್ಟಿಯ ತಂದೆ ಪರಮೇಶ್ ಅವರು ಆಗಮಿಸಿದ್ದರು. ಈ ವೇಳೆ ಮಗನನ್ನು ಮುದ್ದಿನಿಂದ ಮಾತನಾಡಿಸಿ, ಶುಭ ಹಾರೈಸಿದರು.
ಬಿಗ್ಬಾಸ್ ಮನೆಗೆ ಹಾಡು ಹೇಳುತ್ತಲೇ ಎಂಟ್ರಿ ಕೊಟ್ಟ ಅವರು, ಪ್ರಾರಂಭದಲ್ಲಿಯೇ ಚಂದನ್ ಶೆಟ್ಟಿಯ ಮದುವೆ ಬಗ್ಗೆ ಪ್ರಸ್ತಾಪಿಸಿದ್ರು. ”ಶೆಟ್ರೆ ಬಿಗ್ ಬಾಸ್’ನಿಂದ ಹೊರಗೆ ಬಂದ ಮೇಲೆ ನಿಮಗೆ ಮದುವೆ ಮಾಡ್ತೀನಿ” ಎಂದು ನಗುತ್ತಲೇ ಕಾಲೆಳೆದ್ರು.
ಬಿಗ್ ಬಾಸ್ ಮನೆಯಿಂದ ಹೋಗುವ ವೇಳೆ ಚಂದನ್ ತಂದೆ ಸಂದೇಶವೊಂದನ್ನು ಹೇಳಿ ಹೋದರು. ‘ ಇಲ್ಲಿ ಎಲ್ಲರೂ ಗೆಲ್ಲುವುದಕ್ಕಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಿರಿ.. ಇಲ್ಲಿ ನೀನು ಗೆಲ್ಲು ನಾನು ಗೆಲ್ಲು ಅಂತ ಹೇಳಲು ಅಲ್ಲ…ನೀವು ಆಟ ಗೆಲ್ಲಿ’ ಎಂದು ಪರೋಕ್ಷವಾಗಿ ಚಂದನ್’ಗೆ ಕಿವಿ ಮಾತು ಹೇಳಿ ಹೋದರು.
ಚಂದನ್ ತಂದೆ ಈ ಮಾತನ್ನು ಹೇಳಲು ಕಾರಣ ಚಂದನ್ ಕೆಲವು ದಿನಗಳ ಹಿಂದೆ ದಿವಾಕರ್’ಗೆ “ನೀನು ಗೆಲ್ಲಲೇ ಬೇಕು…ನಾನು ಸೋತರು ಪರವಾಗಿಲ್ಲ ನೀನು ಗೆಲ್ಲಲೇ ಬೇಕು ‘ ಎಂದು ರಿಯಾಜ್ ಜೊತೆ ಗಲಾಟೆ ಮಾಡಿದ್ದ ವೇಳೆ ಹೇಳಿದ್ದರು.
Comments are closed.