ಮನೋರಂಜನೆ

ಸ್ಯಾಂಡಲ್‌ವುಡ್ ನಟಿಯ ಟ್ರಯಾಂಗಲ್ ಸ್ಠೋರಿಗೆ ಹೊಸ ಟ್ವಿಸ್ಟ್

Pinterest LinkedIn Tumblr


ಬೆಂಗಳೂರು: ಉದ್ಯಮಿ ಸಚಿನ್ ಜತೆ ಕಿರುತೆರೆ ನಟಿ ಅನಿಕಾ ನಿಶ್ಚಿತಾರ್ಥದಲ್ಲಿ ಮತ್ತೊಬ್ಬ ಸ್ಯಾಂಡಲ್‌ವುಡ್ ನಟಿ ಕಾರುಣ್ಯ ರಾವ್ ಮಧ್ಯಪ್ರವೇಶದಿಂದ ಗೊಂದಲದ ಗೂಡಾಗಿ ಪರಿಣಮಿಸಿದೆ.
ಮೂರು ವರ್ಷಗಳ ಹಿಂದೆ ಉದ್ಯಮಿ ಸಚಿನ್ ಮತ್ತು ಕಾರುಣ್ಯ ರಾವ್ ನಡುವೆ ಬ್ರೆಕಪ್ ಆಗಿತ್ತಂತೆ. ಇದೀಗ ನಮ್ಮಿಬ್ಬರ ಮಧ್ಯೆ ಯಾವುದೇ ಸಂಪರ್ಕವಿಲ್ಲ ಎಂದು ಸಚಿನ್ ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾವಿ ಪತಿ ಸಚಿನ್‌ಗೆ ಮತ್ತು ನಮ್ಮ ಕುಟುಂಬದವರಿಗೆ ಬೆದರಿಕೆ ಕರೆ ಮಾಡುತ್ತಿದ್ದಾಳೆ. ನಟಿ ಕಾರುಣ್ಯ ರಾವ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ನಟಿ ಅನಿಕಾ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಕಿರುತೆರೆಯಲ್ಲಿ ಪ್ರಸಾರವಾಗುವ ಲಕ್ಷ್ಮಿ ಭಾರಮ್ಮ ಧಾರವಾಹಿಯಲ್ಲಿ ಕುಮುದ ಪಾತ್ರ ನಿರ್ವಹಿಸುತ್ತಿರುವ ನಟಿ ಅನಿಕಾಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

ನನಗೆ ಅನಿಕಾ ಯಾರೂ ಅಂತ ಪರಿಚಯವೇ ಇಲ್ಲ. ಸಚಿನ್‌ರನ್ನು ಮಾತ್ರ ಒಂದು ಬಾರಿ ನೋಡಿದ್ದೇನೆ. ನನಗೂ ಅನಿಕಾಗೂ ಯಾವುದೇ ಪರಿಚಯವಿಲ್ಲ. ಆಕೆ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ನಟಿ ಕಾರುಣ್ಯ ರಾವ್ ಸ್ಪಷ್ಟನೆ ನೀಡಿದ್ದಾರೆ.

Comments are closed.